ಬೆಂಗಳೂರು: ನಾಳೆ ಕರ್ನಾಟಕ(Karnataka)ಕ್ಕೆ ಬರುವಾಗ ಬಾಕಿ ಉಳಿದಿರುವ 12 ಸಾವಿರ ಕೋಟಿ ರೂ. ತರುವಿರಾ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಕಾಂಗ್ರೆಸ್ ಪ್ರಶ್ನಿಸಿದೆ. #DoubleDhokaSarkara ಹ್ಯಾಶ್ ಟ್ಯಾಗ್ ಬಳಸಿ ಸರಣಿ ಟ್ವೀಟ್ ಮಾಡಿರುವ ‘ಕೈ’ ಪಕ್ಷ ಬಿಜೆಪಿ ವಿರುದ್ಧ ಕಿಡಿಕಾರಿದೆ.


COMMERCIAL BREAK
SCROLL TO CONTINUE READING

‘ಅಮಿತ್ ಶಾ(Amit Shah) ಅವರೇ ಕರ್ನಾಟಕಕ್ಕೆ 12 ಸಾವಿರ ಕೋಟಿ ರೂ. ಕೇಂದ್ರದ ಪಾಲು ಬಾಕಿ ಇದೆ ಎಂದು ಮೊನ್ನೆಯಷ್ಟೇ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ(Basavaraj Bommai) ಅವರು ತಿಳಿಸಿದ್ದಾರೆ. ನಾಳೆ ಬರುವಾಗ ಬಾಕಿ ಉಳಿದ 12,000 ಕೋಟಿ ರೂ.ವನ್ನು ತರುವಿರಾ? ಕಳೆದ 3 ವರ್ಷಗಳ ಕೇಂದ್ರದ ನೆರೆ ಪರಿಹಾರದ ಮೊತ್ತ ಬಾಕಿ ಉಳಿದಿದೆ ಅದನ್ನೂ ತರುತ್ತಿರುವಿರಾ?’ ಎಂದು ಪ್ರಶ್ನಿಸಿದೆ.


Santosh Guruji : ಕಾಳಿ ಸ್ವಾಮೀಜಿ ಕಾವಿ ಧರಿಸಿ ಕೋಳಿ ಕಟ್ ಮಾಡಬಾರದಿತ್ತು: ಸಂತೋಷ್ ಗುರೂಜಿ


‘ಕರ್ನಾಟಕಕ್ಕೆ ಆಗಮಿಸುತ್ತಿರುವ ಗೃಹಸಚಿವ ಅಮಿತ್ ಶಾ(Amit Shah) ಅವರು ಹಾಗೂ ಸಿಎಂ ಬಸವರಾಜ್ ಬೊಮ್ಮಾಯಿಯವರು ಹಾಗೂ ಬಿಜೆಪಿ ರಾಜ್ಯದ ಜನತೆಗೆ ಎಸಗಿದ ಮೋಸಕ್ಕೆ ಉತ್ತರ ನೀಡಲಿ. ಗೃಹ ಸಚಿವರು ಕರ್ನಾಟಕಕ್ಕೆ ಆಗಿರುವ ಅನ್ಯಾಯ ಸರಿಪಡಿಸಲು ಬರುತ್ತಿರುವುದೋ ಅಥವಾ ರಾಜ್ಯದಲ್ಲಿ ಹಚ್ಚಿದ ಬೆಂಕಿಗೆ ತುಪ್ಪ ಸುರಿಯಲು ಬರುತ್ತಿರುವುದೋ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.


ದೇಶ ಉಳಿಸಲು ಒಂದಾಗಿ ಹೋರಾಡೋಣ- ಡಿಕೆಶಿ


‘ರಾಜ್ಯದ‌ ಸಮಸ್ತ ನಾಗರಿಕರೇ, ಪಕ್ಷದ ಕಾರ್ಯಕರ್ತರೇ, ಪ್ರತಿ ದಿನ ನಮ್ಮ- ನಿಮ್ಮ ಜೇಬು ಪಿಕ್ ಪಾಕೆಟ್ ಆಗುತ್ತಿದೆ. ಬೆಲೆಗಳು ಗಗನಕ್ಕೇರುತ್ತಿವೆ, ಆದಾಯ ಪಾತಾಳಕ್ಕಿಳಿಯುತ್ತಿದೆ. ಇಂಧನ ಬೆಲೆ ಏರುತ್ತಲೇ ಇದೆ. ಈ ಬೆಲೆ ಏರಿಕೆ ವಿರುದ್ಧದ ತಮ್ಮ ಪ್ರತಿರೋಧವನ್ನು ಪ್ರಧಾನಿ ಮೋದಿಯವರಿಗೆ ತಿಳಿಯುವಂತೆ ಮಾಡಲು ಮನವಿ ಮಾಡುತ್ತೇನೆ’ ಎಂದು ಕೆಪಿಸಿಸಿ ಅಧ‍್ಯಕ್ಷ ಡಿ.ಕೆ.ಶಿವಕುಮಾರ್(DK Shivakumar) ಹೇಳಿದ್ದಾರೆ.


ಇದನ್ನೂ ಓದಿ: 'ಒಬ್ಬರ ಮೀಸಲಾತಿಯನ್ನು ಕಿತ್ತು ಇನ್ನೊಬ್ಬರಿಗೆ ಕೊಡುವುದು ಬೇಡ'-ಸಿದ್ದರಾಮಯ್ಯ


Gas Cylinder Price), ವಾಹನಗಳನ್ನು ಮನೆ ಮುಂದಿಟ್ಟು ಅವುಗಳಿಗೆ ಹೂವಿನ ಹಾರ ಹಾಕಿ, ಜಾಗಟೆ ಬಾರಿಸಿ ಪ್ರತಿಭಟನೆ ವ್ಯಕ್ತಪಡಿಸಿ. ಆ ಫೋಟೊ, ವಿಡಿಯೋವನ್ನು ಪ್ರಧಾನಿ ಮೋದಿಗೆ ಟ್ಯಾಗ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿ. ದೇಶ ಉಳಿಸಲು ಒಂದಾಗಿ ಹೋರಾಡೋಣ. ನಿಮ್ಮ ಧ್ವನಿಯಾಗಿ ನಾವಿದ್ದೇವೆ’ ಎಂದು ಡಿಕೆಶಿ ಮನವಿ ಮಾಡಿಕೊಂಡಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.