PSI recruitment scam: ತಾವೇ ಮುಖ್ಯ ಆರೋಪಿಯಂತೆ ಬೊಮ್ಮಾಯಿ ಆತಂಕ ಪಡುತ್ತಿರುವುದೇಕೆ?
PSI recruitment scam: ಬೊಮ್ಮಾಯಿಯವರೇ, ಹಗರಣವೊಂದರ ಪ್ರಾಮಾಣಿಕ ತನಿಖೆಯಾಗಬೇಕು ಎಂದು ಬಯಸುವುದು ದ್ವೇಷ ರಾಜಕಾರಣ ಆಗುವುದು ಹೇಗೆ? ಹೇಳಿ. ತಾವೇ ಮುಖ್ಯ ಆರೋಪಿ ಎಂಬಂತೆ ಆತಂಕ ಪಡುತ್ತಿರುವುದೇಕೆ? ಎಂದು ಪ್ರಶ್ನಿಸಿದೆ.
ಬೆಂಗಳೂರು: ಪಿಎಸ್ಐ ನೇಮಕಾತಿ ಹಗರಣವನ್ನು ನ್ಯಾಯಾಂಗ ತನಿಖೆಗೆ ವಹಿಸಿದ್ದು ದ್ವೇಷದ ರಾಜಕಾರಣವೆಂದು ಹೇಳಿರುವ ಮಾಜಿ ಸಿಎಂ ಬಸವರಾಜ ಬೊಮ್ಮಾಯಿಗೆ ಕಾಂಗ್ರೆಸ್ ತಿರುಗೇಟು ನೀಡಿದೆ.
ಈ ಬಗ್ಗೆ ಭಾನುವಾರ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಹಗರಣಗಳನ್ನು ತನಿಖೆಗೆ ವಹಿಸಿದರೆ ಬಿಜೆಪಿಗರಿಗೇಕೆ ಆಕ್ರೋಶ ಉಂಟಾಗುತ್ತದೆ? ಸತ್ಯ ಹರಿಶ್ಚಂದ್ರನ ವಂಶದವರು ಎಂದುಕೊಳ್ಳುವ ಬಿಜೆಪಿಗರಿಗೆ ನ್ಯಾಯಾಂಗ ತನಿಖೆಗೆ ವಹಿಸಿದರೆ ಆತಂಕವೇಕೆ? ಬೊಮ್ಮಾಯಿಯವರೇ, ಹಗರಣವೊಂದರ ಪ್ರಾಮಾಣಿಕ ತನಿಖೆಯಾಗಬೇಕು ಎಂದು ಬಯಸುವುದು ದ್ವೇಷ ರಾಜಕಾರಣ ಆಗುವುದು ಹೇಗೆ? ಹೇಳಿ. ತಾವೇ ಮುಖ್ಯ ಆರೋಪಿ ಎಂಬಂತೆ ಆತಂಕ ಪಡುತ್ತಿರುವುದೇಕೆ?’ ಎಂದು ಪ್ರಶ್ನಿಸಿದೆ.
ಇದನ್ನೂ ಓದಿ: 90ರ ಇಳಿ ವಯಸ್ಸಲ್ಲೂ ಜಿಮ್ ಮಾಡುವ ಅರಿಂಗ್ಟನ್ ಗಿನ್ನೆಸ್ ದಾಖಲು
ಡಾ.ವೀರೇಂದ್ರ ಹೆಗ್ಗಡೆಯವರೇ ಹೇಳುವಂತೆ ನಮ್ಮ ಸರ್ಕಾರಕ್ಕೆ ಜನತೆ ಹರಿಸುತ್ತಿದ್ದಾರೆ. ಜನರ ಧಾರ್ಮಿಕ ನಂಬಿಕೆಗಳಿಗೆ ಉತ್ತೇಜಿಸಿದ ಸಾರ್ಥಕತೆ ನಮಗಿದೆ, ಆದರೆ ಸೋಕಾಲ್ಡ್ ಧರ್ಮ ರಕ್ಷಕರಾದ ಬಿಜೆಪಿಗರು ಮಾಡಿದ್ದೇನು ಎನ್ನುವುದನ್ನು ಉತ್ತರಿಸಬಲ್ಲರೇ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಇದನ್ನೂ ಓದಿ: ಕಾಂತರಾಜು ವರದಿ ಜಾರಿಯಿಂದ ಅಸಮಾನತೆ ತೊಡೆದು ಹಾಕಲು ಸಾಧ್ಯ: ಸಚಿವ ತಂಗಡಗಿ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.