ಮೃತ ಮಗಳ ನೆನಪಲ್ಲಿ ಬಡ ಮಕ್ಕಳಿಗೆ ಪುಸ್ತಕ ವಿತರಣೆ: ಮಗಳನ್ನು ಚುಕ್ಕಿಯಾಗಿಸಿದ ಪೊಲೀಸ್..!
ಬೆಂಗಳೂರು: ಅಪ್ಪಂದಿರ ದಿನ ಅಂದರೆ ಮಕ್ಕಳು ತಂದೆಗೊಸ್ಕರ ಏನಾದ್ರೂ ಒಳ್ಳೆ ಕೆಲಸ ಮಾಡುವುದಿರುತ್ತೆ. ಆದರೆ ಇಲ್ಲೊಬ್ಬ ತಂದೆ ಮೃತ ಮಗಳ ನೆನಪಲ್ಲಿ ಒಂದೊಳ್ಳೆ ಕೆಲಸ ಮಾಡುತ್ತಿದ್ದಾರೆ.
M N Anucheth : ತಮ್ಮ ಮಗಳು ಹರ್ಷಾಲಿಯನ್ನು ಚುಕ್ಕಿಯಾಗಿಸಿ ಸದಾ ನೆನಪಿನಲ್ಲಿಡುವ ಉದ್ದೇಶ ಅವರದಾಗಿದೆ. ತಮ್ಮ ಜೊತೆಗೆ ನಾಲ್ಕು ವರ್ಷ ಇದ್ದು ನಕ್ಷತ್ರವಾದ ಹರ್ಷಾಲಿಗಾಗಿ ಆಕೆಯ ತಂದೆ ತನ್ನ ಒಂದು ತಿಂಗಳ ಸಂಬಳವನ್ನ ಸರ್ಕಾರಿ ಶಾಲೆಯಲ್ಲಿ ಓದುವ ಬಡ ಮಕ್ಕಳಿಗಾಗಿ ಮುಡಿಪಾಗಿಟ್ಟಿದ್ದಾರೆ. ವೃತ್ತಿಯಲ್ಲಿ ಪೊಲೀಸ್ ಆಗಿರುವ ಲೋಕೇಶಪ್ಪ ಮುದ್ದು ಮಗಳು ಹರ್ಷಾಲಿ 2019ರಲ್ಲಿ ನಾಲ್ಕು ವರ್ಷವಿದ್ದಾಗ ಅಪ್ಪ ಅಮ್ಮನನ್ನು ಅಗಲಿದ್ದಳು.
ಮನೆ ಬಳಿ ಆಟಾಡುವಾಗ ಕಸದ ರಾಶಿಗೆ ಬಿದ್ದಿದ್ದ ಬೆಂಕಿ ತಗಲಿ ಪುಟ್ಟ ಕಂದಮ್ಮ ಹರ್ಷಾಲಿ ಉಸಿರು ಚೆಲ್ಲಿದ್ದಳು. ಮಗಳನ್ನು ಕಳೆದುಕೊಂಡ ಲೋಕೇಶಪ್ಪ ದಂಪತಿ 2019ರಿಂದ ಹರ್ಷಾಲಿ ಹೆಸರಲ್ಲಿ ಸರ್ಕಾರಿ ಶಾಲೆಯ ಬಡ ಮಕ್ಕಳಿಗೆ ಪುಸ್ತಕ ನೀಡಿ ಮಗಳನ್ನು ನಿಜವಾಗಿಯೂ ಚುಕ್ಕಿಯಾಗಿಸಿದ್ದಾರೆ.
ಇದನ್ನೂ ಓದಿ-Tamannaah: ತಮನ್ನಾ ತೊಡೆ ಮೇಲೆ ವಿಜಯ್ ವರ್ಮಾ... ಹಾಟ್ ಫೋಟೋಸ್ ವೈರಲ್!
ಸದ್ಯ ಕಬ್ಬನ್ ಪಾರ್ಕ್ ಸಂಚಾರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಲೋಕೇಶಪ್ಪ ಇಂದು ರೋಟರಿ ಕ್ಲಬ್ ನಲ್ಲಿ ಹರ್ಷಾಲಿ ಹೆಸರಲ್ಲಿ ಸರ್ಕಾರಿ ಶಾಲ ಮಕ್ಕಳಿಗೆ ಪುಸ್ತಕ ಹಂಚಿಕೆ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಸಂಚಾ ವಿಭಾಗದ ಹೆಚ್ಚುವರಿ ಆಯುಕ್ತ ಎಂ ಎನ್ ಅನುಚೇತ್ ಚೀಪ್ ಎಂಜಿನೀಯರ್ ದುರುಗುಪ್ಪ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ರು. ಅದೆನೇ ಇರ್ಲಿ ಅಪ್ಪ ಅಂದ್ರೆ ಆಕಾಶ ಎಂಬ ಮಾತು ಲೋಕೇಶಪ್ಪರನ್ನು ನೋಡಿದ್ರೆ ನಿಜ ಎನ್ನಿಸುತ್ತೆ.
ಹೆಣ್ಣುಮಕ್ಕಳಿಗೆ ತಂದೆಯೇ ಹಿರೋ ಎಂಬ ಮಾತನ್ನು ನಿಜವಾಗಿಸಿದ್ದಾರೆ. ತಮ್ಮ ಸಾಮಾಜಿಕ ಕಾರ್ಯದ ಮೂಲಕ ಮೃತ ಮಗಳು ಹರ್ಷಾಲಿಯನ್ನು ಜೀವಂತವಾಗಿರಿಸುವುದಂತೂ ಸುಳ್ಳಲ್ಲ.
ಇದನ್ನೂ ಓದಿ-ಮರಳಿ ರಂಗಭೂಮಿಗೆ : ಕಲಾವಿದರಿಗಾಗಿಯೇ ನಿರ್ದಿಗಂತ ವೇದಿಕೆ ಸೃಷ್ಟಿಸಿದ ಪ್ರಕಾಶ್ ರಾಜ್
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.