ಮಂಡ್ಯ : ಹುಬ್ಬಳ್ಳಿ ಗಲಭೆಗೆ ಎರಡೂ ರಾಷ್ಟ್ರೀಯ ಪಕ್ಷಗಳೆ ಕಾರಣ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಆರೋಪ ಮಾಡಿದ್ದಾರೆ. 


COMMERCIAL BREAK
SCROLL TO CONTINUE READING

ಈ ಕುರಿತು ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಹೆಚ್.ಡಿ. ದೇವೇಗೌಡ, ಹುಬ್ಬಳ್ಳಿ ಗಲಭೆಗೆ ಯಾರು ಕಾರಣ ಇವರಿಬ್ಬರೇ ಕಾರಣ. ಅದರ ಬಗ್ಗೆ ನಾನು ಮಾತನಾಡಲ್ಲ. ನಾನು ಈದ್ಗಾ ಮೈದಾನ ವಿಚಾರ ಬಗೆಹರಿಸುವ ವೇಳೆ ಹೀಗೆ ಮಾಡಿದ್ರು. ಒಬ್ಬ ಮಾಜಿ ಮಂತ್ರಿ ಹುಬ್ಬಳಿಯವರೇ ವಿರೋದ ಮಾಡಿದ್ರು. ನಮ್ಮ ಪಾರ್ಟಿಗೆ ಡ್ಯಾಮೆಜ್, ಅವರನ್ನ ಹೊರಗೆ ಹಾಕಿದೆ ಎಂದರು. 


ಇದನ್ನೂ ಓದಿ : Congress vs BJP: ಬಿಜೆಪಿ-ಕಾಂಗ್ರೆಸ್ ನಡುವೆ ‘ಗೂಂಡಾಗಿರಿ’ ಜಟಾಪಟಿ..!


ಯಡಿಯೂರಪ್ಪ ಅವರು ಹೇಗೆ ಮಾಡ್ತಿರಿ ನೋಡ್ತಿನಿ ಅಂದ್ರು. ಸರ್ಕಾರಕ್ಕೆ ಶಕ್ತಿ ಇದೆ, ಏನು ಮಾಡಬೇಕು ಅಂತ ಗೊತ್ತಿದೆ. ನೀವು ಎಷ್ಟು ಕೂಗಿದ್ರು ನಾನು ಎದುರುವುದಿಲ್ಲ ಅಂತ ಹೇಳಿ. ಎಲ್ಲೆಲ್ಲಿ ಯಾರನ್ನ ಅರೆಸ್ಟ್ ಮಾಡಿಸಿಬೇಕೊ ಮಾಡಿದೆ. ಮೂರು ಜನ ಮುಸ್ಲಿಂ ಗುರುಗಳು. ನಾನು ಬೆಂಗಳೂರಿನಲ್ಲಿ ರಿಪಬ್ಲಿಕ್ ಡೇ ದಿನ ಧ್ವಜಾರೋಹಣ ಮಾಡಿದೆ ಎಂದರು. 


ಇನ್ನು ಮುಂದುವರೆದು ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೇಸ್ ನಿಂದ ಮತ್ತೆ ಹಿಜಾಬ್ ಶುರುವಾಯ್ತು. ಆ ಮಕ್ಕಳು ಬಟ್ಟೆ ಹಾಕೊಂಡೊಗೋಕ್ಕೆ ಹೊಸದಾಗಿ ಶುರುಮಾಡಿದ್ದಾರಾ? ಇದಕ್ಕೆ ಯಾರು ಕಾರಣ, ಈ ವಿಚಾರ ಬಗ್ಗೆ ಚರ್ಚೆ ಮಾಡಲ್ಲ. ನಾನು ಕಾವೇರಿ ಹೋರಾಟ ಮಾಡ್ತೇನೆ. ಇದಕ್ಕೆ ಸಿದ್ದರಾಮಯ್ಯ ಉತ್ತರ ಕೊಡಬೇಕು ಎಂದು ಹೇಳಿದ್ದಾರೆ. 


ಇದನ್ನೂ ಓದಿ : ಅರುಂಧತಿ ನಕ್ಷತ್ರದ ಬದಲು ಪುನೀತ್ ಭಾವಚಿತ್ರ ನೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.