ಮೈಸೂರು: ಬಿಜೆಪಿ, ಕಾಂಗ್ರೇಸ್ ನಂತರ ಜೆಡಿಎಸ್ ಕೂಡ ತನ್ನ ಟೆಂಪಲ್ ರನ್ ಪ್ರಾರಂಭಿಸಿದೆ. ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ದೇವಸ್ಥಾನಗಳ ಜೊತೆಗೆ ಮಠ ಮತ್ತು ಮಸೀದಿಗಳಿಗೂ ಭೇಟಿ ನೀಡಲಿದ್ದಾರೆ.


COMMERCIAL BREAK
SCROLL TO CONTINUE READING

ಇಂದಿನಿಂದ ಎರಡು ದಿನ ಮೈಸೂರು ಜಿಲ್ಲೆ ಪ್ರವಾಸದಲ್ಲಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಇಂದು ನಂಜನಗೂಡಿನ ಶ್ರೀ ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಬಳಿಕ ನಾಲ್ಕು ಕಡೆಗಳಲ್ಲಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.


ಹೆಚ್ದಿಡಿ ಇಂದಿನ ಕಾರ್ಯ ಕಲಾಪಗಳು...


  • ಬೆಳಿಗ್ಗೆ 10 ಗಂಟೆಗೆ ನಂಜನಗೂಡಿನ ಶ್ರೀ ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ.

  • 10:30 ಕ್ಕೆ ವಿದ್ಯಾವರ್ಧಕ ಶಾಲಾ ಮೈದಾನದಲ್ಲಿ ಕಾರ್ಯಕರ್ತರ ಸಮಾವೇಶ.

  • ಮಧ್ಯಾಹ್ನ 02:00 ಗಂಟೆಗೆ ನಂಜನಗೂಡಿನಿಂದ ನಿರ್ಗಮನ.

  • ಮಧ್ಯಾಹ್ನ 03:00 ಗಂಟೆಗೆ ಕೃಷ್ಣರಾಜ ಕ್ಷೇತ್ರದ ಭೂತಾಳ ಪಿಚ್ ನಲ್ಲಿ ಬಹುಜನ ಸಮಾಜ ಪಕ್ಷದ ಸಮಾವೇಶ.

  • ಸಂಜೆ 06:00 ಗಂಟೆಗೆ ನರಸಿಂಹ ರಾಜ ಕ್ಷೇತ್ರದ ಅಲ್- ಬದರ್ ಮಸೀದಿ ಮುಂಭಾಗದಲ್ಲಿ ಸಾರ್ವಜನಿಕ ಸಭೆ.

  • ರಾತ್ರಿ ಮೈಸೂರಿನಲ್ಲೇ ವಾಸ್ತವ್ಯ.