ಬೆಂಗಳೂರು: ರಾಜ್ಯದಲ್ಲಿ ಹಿಜಾಬ್-ಕೇಸರಿ ಸಂಘರ್ಷದ ನಡುವೆ ಬೆಳಿಗ್ಗೆ ಅಜ್ಹಾನ್ ರೀತಿ ರಾಮ ಜಪ ಮಾಡಿ ಕಾಳಿಮಠದ ಋಷಿಕೇಶ ಸ್ವಾಮೀಜಿ ಹೊಸದೊಂದು ವಿವಾದ ಹುಟ್ಟುಹಾಕಿದ್ದಾರೆ.


COMMERCIAL BREAK
SCROLL TO CONTINUE READING

ಇಸ್ಲಾಮ್ ಧರ್ಮದ ಆಜಾನ್ ರೀತಿಯಲ್ಲೇ ರಾಮಜಪ ಮಾಡಿದ ಕಾಳಿ ಶ್ರೀ:
ಅಜ್ಹಾನ್ ಕೂಗುವ ಮೈಕ್ ವಿರುದ್ದ ಅಭಿಯಾನ ಸಾರಿರುವ ಕಾಳಿ ಮಠದ (Kalimatha) ಋಷಿಕೇಶ ಸ್ವಾಮೀಜಿ, ಅಜ್ಹಾನ್ ಮಾದರಿಯಲ್ಲಿ ಮೈಕ್ ಅಳವಡಿಸಿ ರಾಮ ಜಪ ಮಾಡಿದ ಘಟನೆ ಇಂದು ನಡೆದಿದೆ. 


ಇದನ್ನೂ ಓದಿ- ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಹಿಜಾಬ್ ವಿವಾದ, ಶೀಘ್ರ ವಿಚಾರಣೆ ನಡೆಸುವಂತೆ ಕಪಿಲ್ ಸಿಬಲ್ ಆಗ್ರಹ


ಚುಂಚನ ಘಟ್ಟದ ಆಂಜನೇಯ ದೇವಾಲಯದಲ್ಲಿ ರಾಮ ಜಪ (Rama Japa) ಮಾಡಿದ ಇವರು, ಅಜ್ಹಾನ್ ಕೂಗುವ ಮೈಕ್ ವಿರುದ್ದ ಅಭಿಯಾನ ಪ್ರಾರಂಭಿಸುವುದಾಗಿ ಹೇಳಿದ್ದಾರೆ.


ಇದನ್ನೂ ಓದಿ- R Ashok : 'ಹಿಜಾಬ್ ಮತ್ತು ಕೇಸರಿ ಎರಡೂ ಕಾಲೇಜು ಕ್ಯಾಂಪಸ್ ನಲ್ಲಿ ಬರಬಾರದು' 


ಬೆಳಗ್ಗೆ 5.33ಕ್ಕೆ ರಾಮ ಜಪ ಆರಂಭಿಸಿದ ಸ್ವಾಮೀಜಿ:
ಕಾಳಿಮಠದ ಋಷಿಕೇಶ ಸ್ವಾಮೀಜಿ ಅವರು ರಾಮಾಂಜನೇಯ ದೇವಾಲಯಲ್ಲಿ  ಧ್ವನಿವರ್ಧಕಗಳನ್ನೂ ಅಳವಡಿಸಿ ಇಂದು ಬೆಳಗ್ಗೆ  5.33ಕ್ಕೆ   3 ಬಾರಿ ರಾಮ ಜಪ ಮಾಡಿದ್ದಾರೆ. ರಾಮ ಜಪ ಸ್ಥಗಿತಗೊಳಿಸಿದ ಪೊಲೀಸರು, ಕಾನೂನನ್ನು ಗೌರವಿಸುವಂತೆ ಸ್ವಾಮೀಜಿಯವರಿಗೆ ತಿಳಿಸಿದ್ದಾರೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.