ಬೆಂಗಳೂರು: ಜಮೀನಿಗೆ ದಾರಿ ಬಿಡುವ ಹಾಗೂ ಪಕ್ಕದ ಜಮೀನಿನವರು ತಮ್ಮ ಜಮೀನಿನಲ್ಲಿ ಬಂದಿರುವ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಗಲಾಟೆಯಾಗಿ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಮಣಿಗಾನಹಳ್ಳಿ ಗ್ರಾಮದಲ್ಲಿ ನಡೆದಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಕಾಮಾಕ್ಷಿ ನಿನ್ನ ಕಣ್ಣ ನೋಟ ಬಲು ಡೇಂಜರ್‌..! ಯುವಕರಿಗೆ ನ್ಯೂ ಇಯರ್‌ ಕಿಕ್‌ ಕೊಟ್ಟ ಸುಂದರಿ


ತಾಲ್ಲೂಕಿನ ಪೆದ್ದೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಮಣಿಗಾನಹಳ್ಳಿ ಗ್ರಾಮದ ಸರ್ವೆ ನಂ:105 ರಿಂದ ಸರ್ವೆ ನಂ:41/P4 ಗೆ ಹೋಗಲು ದಾರಿ ಬೇಕೆಂದು,ಅಲ್ಲದೆ 105 ಸರ್ವೆ ನಂಬರ್ ಜಮೀನನವರು ಸರ್ವೆ ನಂ:41/P4 ಜಮೀನಿನಲ್ಲಿ  ಅಕ್ರಮವಾಗಿ ಕಬಳಿಸಿಕೊಂಡಿದ್ದಾರೆ ಎಂದು ಇತ್ತೀಚಿಗೆ ಸರ್ವೆ ಕಾರ್ಯ ನಡೆಸಿ ದಾರಿ ಗುರುತಿಸಲಾಯಿತು.


ಇದೇ ವಿಚಾರವಾಗಿ ಸದರಿ ಗ್ರಾಮದ ಶ್ರೀನಿವಾಸ್ ಬಿನ್ ಲೇಟ್ ವೆಂಕಟಪ್ಪ (35 ವರ್ಷ) ಜಯಮ್ಮ,ವೆಂಕಟ್ ಲಕ್ಷ್ಮಿಮ್ಮ,ಎಂಬುವವರ ಮೇಲೆ ಸರ್ವೆ ನಂಬರ್ 105 ರ ಜಮೀನಿಗೆ ಸಂಬಂಧಪಟ್ಟ ವ್ಯಕ್ತಿಗಳಾದ ನಾರಾಯಣಸ್ವಾಮಿ ಬಿನ್ ರಾಮಪ್ಪ, ವೆಂಕಟರೆಡ್ಡಿ,ಶ್ರೀನಿವಾಸ್,ಲಕ್ಷ್ಮಿ ಎಂಬುವವರು ದೊಣ್ಣೆಗಳಿಂದ ಹಲ್ಲೆ ನಡೆಸಿ ಗಾಯಗೊಳಿಸಿದ್ದು ಹಲ್ಲೆಗೊಳಗಾದ ವ್ಯಕ್ತಿಗಳು ಇಲ್ಲಿನ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.


ಇದನ್ನೂ ಓದಿ: ಹೊಸ ವರ್ಷಕ್ಕೆ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಹೊಸಚಿತ್ರ ಅನೌನ್ಸ್‌


ಘಟನೆಯ ವಿಷಯ ತಿಳಿದ ತಕ್ಷಣ ಸರ್ಕಲ್ ಇನ್ಸ್ಪೆಕ್ಟರ್ ರಂಗಶಾಮಯ್ಯ,ಸಬ್ ಇನ್ಸ್ಪೆಕ್ಟರ್, ಪುನೀತ್ ನಂಜರಾಯ್,ಆಸ್ಪತ್ರೆಗೆ ಭೇಟಿ ನೀಡಿ ಗಲಾಟೆ ವಿಚಾರದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.