Leopard Attack: ಚಿರತೆಯೊಂದು ಎರಡು ಎಮ್ಮೆ ಕರುಗಳ ಮೇಲೆ ದಾಳಿ ಮಾಡಿದ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮಂಟೂರು ಗ್ರಾಮದಲ್ಲಿ ನಡೆದಿದೆ. ಇದರಿಂದಾಗಿ ಗ್ರಾಮಸ್ಥರಲ್ಲಿ ಆತಂಕತದ ವಾತಾವರಣ ನಿರ್ಮಾಣವಾಗಿದೆ. 


COMMERCIAL BREAK
SCROLL TO CONTINUE READING

ಕಳೆದ‌ ಮೂರು ದಿನಗಳಿಂದ ಚಿರತೆ ಸೆರೆ ಹಿಡಿಯಲು ಪೊಲೀಸ್ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಕೋಂಬಿಂಗ್ ಕಾರ್ಯ ಕೈಗೊಂಡರೂ ಕೂಡ ಚಿರತೆ (Leopard) ಮಾತ್ರ ಸೆರೆಸಿಕ್ಕಿಲ್ಲ.


ಇದನ್ನೂ ಓದಿ- ತೋಟದಲ್ಲಿದ್ದ 1 ನಾಯಿ‌ ಕೊಂದು ಮತ್ತೊಂದನ್ನು ಹೊತ್ತೊಯ್ದ ಚಿರತೆ


ಕಿಶೋರಿ ಗ್ರಾಮದಲ್ಲಿ ನಾಯಿಯೊಂದನ್ನ ಬೇಟೆಯಾಡಿದ್ದ ಚಿರತೆ ಈಗ ಎರಡು ಎಮ್ಮೆ ಕರುಗಳನ್ನ (Buffalo Calves) ಬೇಟೆಯಾಡಿ ಅರ್ಧ ತಿಂದು ಬಿಟ್ಟು ಹೋಗಿದೆ. ಚಿರತೆ ಸೆರೆ ಹಿಡಿಯಲು ಅರಣ್ಯ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಎರಡು ಬೋನ್ ಗಳನ್ನು ಇರಿಸಿದ್ದಾರೆ. ಜೊತೆಗೆ ಚಿರತೆಯ ಚಲನವಲನ ಗಮನಿಸಲು ನಾಲ್ಕು ಕ್ಯಾಮರಾಗಳನ್ನ ಅಳವಡಿಸಲಾಗಿದೆ. 


ಇದನ್ನೂ ಓದಿ- ಉಡುಪಿಯಲ್ಲಿ ಮತ್ತೊಮ್ಮೆ ಅಪರೂಪದ ಕರಿ ಚಿರತೆ ಪತ್ತೆ


ಇನ್ನು ಮಂಟೂರು ಗ್ರಾಮಕ್ಕೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ.ಎಸಿ ಶ್ವೇತಾ ಬೀಡಿಕರ್ ಹಾಗೂ ಅರಣ್ಯ ಇಲಾಖೆಯ  ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಮಾತನಾಡಿ ಜಮೀನುಗಳಲ್ಲಿ ಓಡಾಡುವ ಸಾರ್ವಜನಿಕರು ಎಚ್ಚರದಿಂದ ಇರುವಂತೆ ಸೂಚಿಸಿದ್ದು, ಚಿರತೆಯನ್ನ ಸುರಕ್ಷಿತವಾಗಿ ಸೆರೆ ಹಿಡಿದು ಕಾಡಿಗೆ ಬಿಡಲು ಅರಣ್ಯ ಇಲಾಖೆಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.