ಬೆಂಗಳೂರು: ಕಾಂಗ್ರೆಸ್‌ ಪಕ್ಷದ ಇತಿಹಾಸವೇ ನಕಲಿ ಗಾಂಧಿಗಳ ಗುಲಾಮಗಿರಿಯದ್ದಾಗಿದೆ ಎಂದು ಕರ್ನಾಟಕ ಬಿಜೆಪಿ ಟೀಕಿಸಿದೆ. #ಕಾಂಗ್ರೆಸ್‌ಮತ್ತುಕುಟುಂಬಗಿರಿ ಹ್ಯಾಶ್ ಟ್ಯಾಗ್ ಬಳಿಸಿ ಮಂಗಳವಾರ ಬಿಜೆಪಿ(BJP Karnataka) ಟ್ವೀಟ್ ಮಾಡಿದೆ. ‘ನೆಹರೂ ಅವರಿಂದ ಹಿಡಿದು ಈಗಿನ ಸೋನಿಯಾ ಗಾಂಧಿವರೆಗೆ ಕಾಂಗ್ರೆಸ್ ಪಕ್ಷದ ನಾಯಕರು ನಕಲಿ ಗಾಂಧಿ ಕುಟುಂಬದ ಗುಲಾಮಗಿರಿ ನಡೆಸುತ್ತಿದ್ದಾರೆ. ಕಾಂಗ್ರೆಸ್‌ ಪಕ್ಷದಲ್ಲಿ ಯಾರು ಪ್ರಧಾನಿಯಾದರೂ ರಬ್ಬರ್‌ ಸ್ಟ್ಯಾಂಪ್‌ ಆಗಿರಬೇಕಷ್ಟೇ’ ಎಂದು ಬಿಜೆಪಿ ಕುಟುಕಿದೆ.


Basavaraj Bommai) ಅವರೇ ಇತ್ತೀಚೆಗಷ್ಟೇ ನಿಮ್ಮದೇ ಪಕ್ಷದ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಬಿಜೆಪಿಯಲ್ಲಿ ಬೂಟು ನೆಕ್ಕುವ ಗುಲಾಮರೇ ತುಂಬಿದ್ದಾರೆ ಎಂದು ತಿಳಿಸಿದ್ದು ನೆನಪಿದೆಯೇ? ಗುಲಾಮಗಿರಿ ಸಂಸ್ಕೃತಿಯ ಬಿಜೆಪಿಯಲ್ಲಿ ಮೋದಿ-ಅಮಿತ್ ಶಾ ಜೋಡಿಯ ಬೂಟು ನೆಕ್ಕುವ ಕಡ್ಡಾಯ ನಿಯಮವಿದೆ ಎಂದು ನಿಮ್ಮವರೇ ಹೇಳಿದ್ದಾರೆ! ‘ಗುಲಾಮಗಿರಿ’ ಬಿಜೆಪಿಗರಿಗೆ ರಕ್ತಗತವಾಗಿ ಬಂದ ಬಳುವಳಿ!’ ಅಂತಾ ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.


ಬೆಂಗಳೂರಿನಲ್ಲಿ ಮತ್ತೊಂದು ದುರಂತ: 3 ಅಂತಸ್ತಿನ ಬಹುಮಹಡಿ ಕಟ್ಟಡ ಕುಸಿತ


COMMERCIAL BREAK
SCROLL TO CONTINUE READING

ಮತ್ತೊಂದು ಟ್ವೀಟ್ ನಲ್ಲಿ ‘ಬಸವರಾಜ್ ಬೊಮ್ಮಾಯಿ(Basavaraj Bommai) ಅವರೇ ಬಿಜೆಪಿ ಹಾಗೂ ಬಿಜೆಪಿಯ ಪೂರ್ವಜರ ಗುಲಾಮಗಿರಿ ಎಂತಾದ್ದು ಎಂದು ಜಗತ್ತಿಗೇ ತಿಳಿದಿದೆ. ಅಂದು ಬ್ರಿಟಿಷರ ಕಂಪೆನಿ ಸರ್ಕಾರದ ಗುಲಾಮಗಿರಿ, ಇಂದು ಅಂಬಾನಿ - ಅದಾನಿಯಂತಹವರ ಕಂಪೆನಿಗಳ ಗುಲಾಮಗಿರಿ. ನಿಮ್ಮ ಪಕ್ಷದ ಸಿದ್ಧಾಂತವೇ ಹಿಟ್ಲರ್‌ನ ಗುಲಾಮಗಿರಿಯದ್ದು, ಕಾಂಗ್ರೆಸ್(Congress) ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ನಿಮಗಿಲ್ಲ!’ ಅಂತಾ ಕಾಂಗ್ರೆಸ್ ಕುಟುಕಿದೆ.


BJP)ಯ ತಾಲಿಬಾನ್ ಸಂಸ್ಕೃತಿಯ ಬಾಗ! #ಕೊರೊನಾಶಿರ್ವಾದಯಾತ್ರೆ ನಡೆಸಿ ಅಕ್ರಮ ಬಂದೂಕಿನಲ್ಲಿ ಗುಂಡು ಹಾರಿಸಿದ್ದು, ನಶೆಯಲ್ಲಿ ಕಾರು ಗುದ್ದಿಸಿ ಯುವಕರಿಬ್ಬರನ್ನ ಕೊಂದು ಅವರ ಕುಟುಂಬಕ್ಕೆ ಬೆದರಿಕೆಯೊಡ್ಡಿ ಸುಮ್ಮನಿರಿಸಿದ್ದು ನಿಮ್ಮ ಹಾಗೂ ನಿಮ್ಮ ಪಕ್ಷದ ತಾಲಿಬಾನ್ ಸಂಸ್ಕೃತಿಯಲ್ಲವೇ ಸಿ.ಟಿ.ರವಿಯವರೇ?’ ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಪ್ರಶ್ನಿಸಿದೆ.


ಇದನ್ನೂ ಓದಿ: Karnataka Rains Forecast: ರಾಜ್ಯದ ಈ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.