ಬೆಂಗಳೂರು: ಕರ್ನಾಟಕ ರತ್ನ ಡಾ‌. ರಾಜ್‌ಕುಮಾರ್ ಕುಟುಂಬದ ಕುರಿತು ಬೇಕಾಬಿಟ್ಟಿಯಾಗಿ ಕೆಟ್ಟದಾಗಿ ಮಾತಾಡಿದ್ದ ಆರೋಪದ ಮೇಲೆ ಪುನೀತ್ ಕೆರೆಹಳ್ಳಿಗೆ ಕನ್ನಡಪರ ಹೋರಾಟಗಾರರು ಧರ್ಮದೇಟು ಕೊಟ್ಟಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ : ನಕಲಿ ಭೂ ದಾಖಲೆ ಸೃಷ್ಟಿಸಿ ವಂಚನೆಗೆ ಯತ್ನ: ಬಿಬಿಎಂಪಿ ಕಚೇರಿ ಸಿಬ್ಬಂದಿ ಸಹಿತ ಐವರ ಬಂಧನ!


ಸದ್ಯ ಕೆರೆಹಳ್ಳಿಗೆ ಗೂಸಾ ಕೊಟ್ಟಿರುವ  ವಿಡಿಯೋ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಇಂದು ಚಾಮರಾಜಪೇಟೆಯಲ್ಲಿ ರಾಜ್‌ಕುಮಾರ್ ಫ್ಯಾಮಿಲಿ ಬಗ್ಗೆ ಹಗುರವಾಗಿ ಮಾತಾನಾಡುತ್ತೀಯಾ ಎಂದು ಕ್ಷಮೆ ಕೇಳು ಎಂದು ಕನ್ನಡಪರ ಹೋರಾಟಗಾರ ಶಿವಕುಮಾರ್ ಟೀಂನಿಂದ ಪುನೀತ್ ಕೆರೆಹಳ್ಳಿಗೆ ಆಗ್ರಹಿಸಿದ್ದಾರೆ. ಆದರೆ ಏಟು ಪುನೀತ್ ಕೆರೆಹಳ್ಳಿ ಮಾತ್ರ  ನಾನ್ಯಾಕೇ ಕ್ಷಮೆ ಕೇಳಲಿ ಎಂದು ಮೂಗಿನ ನೇರಕ್ಕೆ ಮಾತನಾಡಿದ್ದಾನೆ. ಆಗ ಮಾತಿಗೆ ಮಾತು ಬೆಳೆದು ಕನ್ನಡಪರ ಹೋರಾಟಗಾರರು ಕೆರೆಹಳ್ಳಿಗೆ ಸರಿಯಾಗಿ ಗೂಸಾ ಕೊಟ್ಟಿದ್ದಾರೆ. 


ಇದನ್ನೂ ಓದಿ : ಪ್ರಚಾರಕ್ಕೆ ಸ್ನೇಹಿತನ ಕಾರು ಪಡೆದು ವಾಪಸ್ ನೀಡೋಕೆ ನಲಪಾಡ್ ನಕ್ರ..!


ಈ ಮುನ್ನ ಫೋನ್ ಮಾಡಿ ಪುನೀತ್ ಕೆರೆಹಳ್ಳಿಗೆ ಕ್ಷಮೆ ಕೇಳು ಎಂದು ಶಿವಕುಮಾರ್  ಬಣ ಪಟ್ಟು ಹಿಡಿದಿತ್ತು.ಆಗ ನಾನು ಚಾಮರಾಜಪೇಟೆಯಲ್ಲೇ ಇದ್ದೇನೆ, ಬನ್ನಿ ಎಂದು ಪುನೀತ್ ಕೆರೆಹಳ್ಳಿ ಆವಾಜ್ ಹಾಕಿದ್ದಾನೆ ಎನ್ನಲಾಗಿದೆ. ಇದರಿಂದ ಕೋಪಗೊಂಡ ಶಿವಕುಮಾರ್  ಬಣ ಬಂದು ಪುನೀತ್ ಮೇಲೆ ಹಲ್ಲೆ ನಡೆಸಿದ್ದಾರೆ. ಘಟನೆ ನಂತರ ಚಾಮರಾಜಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.