ನವದೆಹಲಿ: ಪ್ರತಿಯೊಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಸಂತೋಷ-ಸಮೃದ್ಧಿಯ ಜೊತೆಗೆ ಸುಖ-ಸಂಪತ್ತಿಗೆ ಕೊರತೆಯಾಗಬಾರದೆಂದು ಬಯಸುತ್ತಾನೆ. ಇದಕ್ಕಾಗಿ ಅನೇಕರು ಹಗಲಿರುಳು ಶ್ರಮಿಸುತ್ತಾರೆ. ಆದರೆ ಅನೇಕ ಬಾರಿ ಕಷ್ಟಪಟ್ಟು ಕೆಲಸ ಮಾಡುವ ವ್ಯಕ್ತಿಗೆ ಅದೃಷ್ಟದ ಬೆಂಬಲ ಸಿಗುವುದಿಲ್ಲ.  ಆತ ತನ್ನ ಶ್ರಮದ ಫಲವನ್ನು ಪಡೆಯುವುದಿಲ್ಲ. ಜ್ಯೋತಿಷ್ಯದಲ್ಲಿ ಈ ನಿರಾಶೆ ಹೋಗಲಾಡಿಸಲು ಹಲವಾರು ರೀತಿಯ ಕ್ರಮಗಳ ಬಗ್ಗೆ ಉಲ್ಲೇಖಿಸಲಾಗಿದೆ. ಈ ಪೈಕಿ ಕರಿಮೆಣಸಿನ ಕಾಳುಗಳಿಂದ ಮಾಡುವ ಪರಿಹಾರವೂ ಒಂದಾಗಿದೆ.


COMMERCIAL BREAK
SCROLL TO CONTINUE READING

ತಂತ್ರ ಶಾಸ್ತ್ರದ ಅಡಿಯಲ್ಲಿ ಇಂತಹ ಅನೇಕ ಕ್ರಮಗಳನ್ನು ಉಲ್ಲೇಖಿಸಲಾಗಿದೆ. ಇದನ್ನು ಮಾಡುವುದರಿಂದ ವ್ಯಕ್ತಿಯ ಸಂಪತ್ತಿನ ಬಯಕೆಯು ಪೂರ್ಣಗೊಳ್ಳುತ್ತದೆ. ಈ ಕ್ರಮಗಳನ್ನು ಮಾಡುವುದರಿಂದ ವ್ಯಕ್ತಿಯ ಜೀವನದಲ್ಲಿ ಇದ್ದಕ್ಕಿದ್ದಂತೆ ಹಣದ ಮಳೆಯಾಗಲು ಪ್ರಾರಂಭಿಸುತ್ತದೆ. ಬಳಿಕ ಆತನ ಜೀವನದಲ್ಲಿ ಹಣದ ಕೊರತೆಯೇ ಕಂಡುಬರುವುದಿಲ್ಲ. ಕರಿಮೆಣಸಿನ ಕೆಲವು ಜ್ಯೋತಿಷ್ಯ ಪರಿಹಾರಗಳ ಬಗ್ಗೆ ತಿಳಿದುಕೊಳ್ಳಿರಿ.


ಇದನ್ನೂ ಓದಿ: Horoscope Today: ಈ ರಾಶಿಯವರಿಗೆ ಆಕಸ್ಮಿಕ ಧನಪ್ರಾಪ್ತಿ, ಜ್ಞಾನಪ್ರಾಪ್ತಿ ಯೋಗವಿದೆ


ಸಂಪತ್ತಿಗೆ ಕರಿಮೆಣಸಿನ ಈ ಪರಿಹಾರ ಮಾಡಿ


  •  ಶನಿವಾರದಂದು ಅರಳಿ ಮರದಿಂದ ಎಲೆಯನ್ನು ಕಿತ್ತು ಗಂಗಾಜಲದಿಂದ ತೊಳೆಯಿರಿ. ಇದರ ನಂತರ ನಿಮ್ಮ ಕೈಯ ಉಂಗುರದ ಬೆರಳಿನಿಂದ ಅರಿಶಿನ ಮತ್ತು ಮೊಸರಿನ ದ್ರಾವಣದಿಂದ ಈ ಎಲೆಯ ಮೇಲೆ ಮಂತ್ರವನ್ನು ಬರೆಯಿರಿ. ಬಳಿಕ ಈ ಎಲೆಯನ್ನು ನಿಮ್ಮ ಪರ್ಸ್‌ನಲ್ಲಿ ಇರಿಸಿ. ಪ್ರತಿ ಶನಿವಾರ ಪೂಜೆಯೊಂದಿಗೆ ಈ ಎಲೆಯನ್ನು ಬದಲಾಯಿಸುತ್ತಿರಿ. ಈ ಪರಿಹಾರವು ನಿಮ್ಮ ಜೀವನದಿಂದ ಹಣದ ಕೊರತೆಯನ್ನು ತೆಗೆದುಹಾಕುತ್ತದೆ. ಈ ಪರಿಹಾರ  ಮಾಡುವುದರಿಂದ ನಿಮ್ಮ ಪರ್ಸ್ ಎಂದಿಗೂ ಖಾಲಿಯಾಗುವುದಿಲ್ಲ ಮತ್ತು ಪರ್ಸ್‌ನಲ್ಲಿ ಯಾವಾಗಲೂ ಹಣ ಇರುತ್ತದೆ. ದಯವಿಟ್ಟು ಹಳೆಯ ಎಲೆಯನ್ನು ಪವಿತ್ರ ಸ್ಥಳದಲ್ಲಿ ಮಾತ್ರ ಇರಿಸಬೇಕು.

  •  ಕರಿಮೆಣಸಿನ 5 ಧಾನ್ಯಗಳನ್ನು ತೆಗೆದುಕೊಂಡು ನಿಮ್ಮ ತಲೆಗೆ 7 ಬಾರಿ ಮುಟ್ಟಿಸಿಕೊಳ್ಳಿ. ಈಗ ಪ್ರತಿ ಧಾನ್ಯವನ್ನು ಎಲ್ಲಾ 4 ದಿಕ್ಕುಗಳಲ್ಲಿ ಎಸೆಯಿರಿ. ಆಕಾಶದತ್ತ ಒಂದು ಧಾನ್ಯವನ್ನು ಮೇಲಕ್ಕೆ ಎಸೆಯಿರಿ. ಈ ಟ್ರಿಕ್ ಮಾಡುವುದರಿಂದ ಜೀವನದಲ್ಲಿ ನೀವು ಹಠಾತ್ ಹಣಕಾಸಿನ ಲಾಭವನ್ನು ಪಡೆಯುತ್ತೀರಿ.

  •  ನೀವು ಇದ್ದಕ್ಕಿದ್ದಂತೆ ಬಹಳಷ್ಟು ಹಣವನ್ನು ಪಡೆಯಬಯಸಿದ್ರೆ ಸೋಮವಾರದಂದು ಸ್ಮಶಾನದಲ್ಲಿರುವ ಮಹಾದೇವನ ದೇವಸ್ಥಾನಕ್ಕೆ ಹೋಗಿ ಹಾಲಿನಲ್ಲಿ ಜೇನುತುಪ್ಪವನ್ನು ಬೆರೆಸಿ ದೇವರಿಗೆ ಅರ್ಪಿಸಿ.

  •  ನಿಮ್ಮ ಮನೆಯಲ್ಲಿ ಹಣ ನಿಲ್ಲದಿದ್ದರೆ ಕೆಂಪು ಬಣ್ಣದ ಬಟ್ಟೆಯನ್ನು ತಿಜೋರಿಯಲ್ಲಿ ಇಡಬೇಕು.   

  •  ಗುಂಜ ಕಾಳುಗಳನ್ನು ಕಪಾಟಿನಲ್ಲಿ ಇಡುವುದರಿಂದ ಸಂಪತ್ತು ಬರುತ್ತದೆ ಎಂದು ನಂಬಲಾಗಿದೆ.

  •  ಶ್ರೀ ಸೂಕ್ತವನ್ನು ನಿಯಮಿತವಾಗಿ ಪಠಿಸುವ ಮನೆಯಲ್ಲಿ ತಾಯಿ ಲಕ್ಷ್ಮಿದೇವಿ ನೆಲೆಸುತ್ತಾಳೆ ಎಂದು ನಂಬಲಾಗಿದೆ.


ಇದನ್ನೂ ಓದಿ: ವೃಶ್ಚಿಕ ರಾಶಿಗೆ ಸೂರ್ಯನ ಪ್ರವೇಶ: ಈ ರಾಶಿಯವರ ಅದೃಷ್ಟ ಬೆಳಗಲಿದ್ದು, ಸುಖ-ಸಂಪತ್ತು ದೊರೆಯಲಿದೆ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.