ತಟ್ಟೆಯಲ್ಲಿ ಒಂದೇ ಬಾರಿ 3 ರೊಟ್ಟಿ ತಿಂದರೆ ಅಶುಭ..! ಇದರ ಹಿಂದೆ ವೈಜ್ಞಾನಿಕ ಕಾರಣವೂ ಇದೆ..
Three toris in Plate : ಮನೆಯಲ್ಲಿ ಊಟ ಮಾಡುವಾಗ ತಟ್ಟೆಯಲ್ಲಿ ಕೇವಲ 1 ಅಥವಾ 2 ರೊಟ್ಟಿಗಳನ್ನು ಮಾತ್ರ ನೀಡುವುದನ್ನು ನೀವು ಹೆಚ್ಚಾಗಿ ಗಮನಿಸಿರುತ್ತೀರಿ. ಯಾರಿಗೂ ಒಂದೇ ಬಾರಿಗೆ 3 ರೊಟ್ಟಿ ಕೊಡುವುದಿಲ್ಲ. ಇದರ ಹಿಂದೆ ಒಂದು ಕಾರಣವಿದೆ. ಈ ವಿಷಯವನ್ನು ಪರಿಗಣನೆಗೆ ತೆಗೆದುಕೊಳ್ಳದಿದ್ದರೆ, ದುರದೃಷ್ಟ ನಿಮ್ಮದಾಗುತ್ತದೆ..
Food vastu : ರೊಟ್ಟಿಯನ್ನು ಪ್ರತಿದಿನ ಪ್ರತಿ ಮನೆಯಲ್ಲೂ ಮಾಡಲಾಗುತ್ತದೆ. ಭಾರತೀಯ ಕುಟುಂಬದಲ್ಲಿ ದೈನಂದಿನ ಆಹಾರದಲ್ಲಿ ರೊಟ್ಟಿ ಕಡ್ಡಾಯ. ಊಟಕ್ಕೆ ಕುಳಿತಾಗಲೆಲ್ಲ ತಟ್ಟೆಯಲ್ಲಿ ಮೂರು ರೊಟ್ಟಿಯನ್ನ ನೀಡುವುದಿಲ್ಲ ಬದಲಿಗೆ ಒಂದು ಅಥವಾ ಎರಡು ರೊಟ್ಟಿ ನೀಡುತ್ತಾರೆ.. ಬಹುಷಃ ಇದನ್ನು ನೀವೂ ಗಮನಿಸಿರಬಹುದು. ಅನೇಕ ಜನರು ಮೂರು ರೊಟ್ಟಿಗಳಿಗಿಂತ ಹೆಚ್ಚು ತಿನ್ನುತ್ತಾರೆ ಆದರೆ ಒಂದೇ ಬಾರಿಗೆ ಅವರು 3 ರೊಟ್ಟಿಗಳನ್ನು ತೆಗೆದುಕೊಳ್ಳುವುದಿಲ್ಲ. ಈ ಸಂಪ್ರದಾಯಕ್ಕೆ ಒಂದು ವಿಶೇಷ ಕಾರಣವೂ ಇದೆ.
ಇದರ ಅರಿವಿಲ್ಲದ ಜನರು ಹಲವು ವರ್ಷಗಳಿಂದ ತಟ್ಟೆಯಲ್ಲಿ 3 ರೊಟ್ಟಿಗಳನ್ನು ಇಟ್ಟು ತಿನ್ನುತ್ತಾ ಬಂದಿದ್ದಾರೆ. ಧರ್ಮಗ್ರಂಥಗಳ ಪ್ರಕಾರ ಒಬ್ಬ ವ್ಯಕ್ತಿಗೆ ತಟ್ಟೆಯಲ್ಲಿ ಮೂರು ರೊಟ್ಟಿಗಳನ್ನು ಬಡಿಸಬಾರದು ಎಂದು ಉಲ್ಲೇಖಿಸಲಾಗಿದೆ. ಹಾಗೆ ಮಾಡುವುದರಿಂದ ಸತ್ತವರಿಗೆ ಆಹಾರ ನೀಡಿದಂತಾಗುತ್ತದೆ ಎಂದು ಹೇಳಲಾಗುತ್ತದೆ. ಕಟ್ಟುನಿಟ್ಟಾಗಿ ಹೇಳುವುದಾದರೆ, ವ್ಯಕ್ತಿಯು ಸತ್ತಿದ್ದರೆ ಅಥವಾ ಸಾಯುವ ಹಂತದಲ್ಲಿದ್ದರೆ, ಅವನಿಗೆ ಮೂರು ರೊಟ್ಟಿಗಳನ್ನು ನೀಡಲಾಗುತ್ತದೆಯಂತೆ.
ಇದನ್ನೂ ಓದಿ:ಕೇವಲ 'ಈ' ಒಂದು ಹಣ್ಣು ಬಳಸಿ ನಿಮ್ಮ ಪೂಜಾ ಕೊಠಡಿಯ ಪಾತ್ರೆಗಳನ್ನು ಹೊಳೆಯುವಂತೆ ಮಾಡಬಹುದು! ಹೇಗೆ ಗೊತ್ತಾ?
ಸನಾತನ ಧರ್ಮದ ನಂಬಿಕೆಯ ಪ್ರಕಾರ, ಒಬ್ಬ ವ್ಯಕ್ತಿಯ ಮರಣದ ನಂತರ ತಿಥಿ ವೇಳೆ ಮೂರು ರೊಟ್ಟಿಗಳನ್ನು ಇಡಲಾಗುತ್ತದೆ. ಮೂರು ರೊಟ್ಟಿಗಳಿರುವ ತಟ್ಟೆಯನ್ನು ಅಗಸಿಯ ಮೇಲೆ ಇಡಲಾಗುತ್ತದೆ. ಹೀಗೆ ಮಾಡುವುದರಿಂದ ಸತ್ತವರ ಆತ್ಮವು ಬಂದು ಅನದನು ತಿನ್ನುವ ಮೂಲಕ ತನ್ನ ಹಸಿವನ್ನು ಪೂರೈಸಿಕೊಳ್ಳುತ್ತದೆ ಎಂದು ನಂಬಲಾಗಿದೆ.
ಜ್ಯೋತಿಷಿಗಳ ಪ್ರಕಾರ, ಒಬ್ಬ ವ್ಯಕ್ತಿಯು ನಿಯಮಿತವಾಗಿ ಒಂದು ತಟ್ಟೆಯಲ್ಲಿ 3 ರೊಟ್ಟಿಗಳನ್ನು ಒಟ್ಟಿಗೆ ಸೇವಿಸಿದರೆ, ಅವನು ಭೀಕರ ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ. ಅವನೊಳಗೆ ದ್ವೇಷದ ಭಾವನೆ ಮೂಡುತ್ತದೆ, ನಕಾರಾತ್ಮಕ ಶಕ್ತಿಯ ಹರಿವು ವೇಗಗೊಳ್ಳುತ್ತದೆ, ರೋಗಗಳು ಹೆಚ್ಚಾಗಲು ಪ್ರಾರಂಭಿಸುತ್ತವೆ ಮತ್ತು ಹಣಕಾಸಿನ ಸಂಪನ್ಮೂಲಗಳು ಕಡಿಮೆಯಾಗಲು ಪ್ರಾರಂಭಿಸುತ್ತವೆ ಎನ್ನಲಾಗಿದೆ.
ಇದನ್ನೂ ಓದಿ:ಬಾತ್ ರೂಮ್ನಲ್ಲಿ ಫೋನ್ ಬಳಸುತ್ತೀರಾ..? ಈ ವಿಚಾರ ತಿಳಿದರೆ ಜನ್ಮದಲ್ಲೇ ಬಳಸುವುದಿಲ್ಲ ಬಿಡಿ..
ಈ ಪದ್ಧತಿಯನ್ನ ವೈಜ್ಞಾನಿಕ ದೃಷ್ಟಿಕೋನದಿಂದ ನೋಡುವುದಾದರೆ, ರೊಟ್ಟಿ, ಪಲ್ಯ, ತರಕಾರಿಗಳನ್ನು ತಟ್ಟೆಯಲ್ಲಿ ಸಮವಾಗಿ ಹಾಕಲಾಗುತ್ತದೆ. ಇದರ ಉದ್ದೇಶ ದೇಹದ ಪೋಷಣೆಗೆ ಈ ವಸ್ತುಗಳು ಅತ್ಯಗತ್ಯ ಆದರೆ ರೊಟ್ಟಿಗಳ ಸಂಖ್ಯೆ ಮೂರಕ್ಕೆ ಹೆಚ್ಚಾದರೆ ಅದು ಪೋಷಕಾಂಶಗಳ ಸಮತೋಲನವಾಗದು. ಹಸಿ ತರಕಾರಿ ಮತ್ತು ಕಾಳುಗಳ ಪಲ್ಯವನ್ನು ಸೇವಿಸದೇ ಹೆಚ್ಚಿನ ರೋಟ್ಟಿ ತಂದರೆ ಬಹುಬೇಗ ಹೊಟ್ಟೆ ತುಂಬುತ್ತದೆ.. ದೇಹಕ್ಕೆ ಪೋಷಕಾಂಶ ಸಿಗುವುದಿಲ್ಲ..
(ಸೂಚನೆ: ಇಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee Kannada News ಇದನ್ನು ಖಚಿತಪಡಿಸುವುದಿಲ್ಲ.)
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.