ಬೆಂಗಳೂರು: Pitru Paksha 2021:- ಭಾದ್ರಪದ ತಿಂಗಳ ಹುಣ್ಣಿಮೆ ಅಂದರೆ ಪಿತೃ ಪಕ್ಷ 2021 (Pitru Paksha 2021) ಇಂದಿನಿಂದ 2021 ರ ಸೆಪ್ಟೆಂಬರ್ 20 ರಂದು ಆರಂಭವಾಗುತ್ತದೆ. ಹಿಂದೂ ಧರ್ಮದಲ್ಲಿ ಪಿತೃ ಪಕ್ಷವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. 15 ದಿನಗಳ ಈ ಸಮಯದಲ್ಲಿ, ಜನರು ತಮ್ಮ ಪೂರ್ವಜರನ್ನು ನೆನಪಿಸಿಕೊಳ್ಳುತ್ತಾರೆ ಮತ್ತು ಪೂರ್ವಜರ ಅಂದರೆ ಪಿತೃಗಳ ಆತ್ಮಗಳ ಶಾಂತಿಗಾಗಿ ಪಿಂಡ ದಾನ, ತರ್ಪಣ, ಶ್ರಾದ್ಧವನ್ನು ಮಾಡುತ್ತಾರೆ. ಈ ರೀತಿಯಾಗಿ ಪೂರ್ವಜರ ಆಶೀರ್ವಾದ ಪಡೆಯುವುದರಿಂದ ಜೀವನದಲ್ಲಿ ಯಶಸ್ಸು, ಸಂತೋಷ ಮತ್ತು ಸಮೃದ್ಧಿಯನ್ನು ಪಡೆಯಬಹುದು ಎಂಬ ನಂಬಿಕೆ ಇದೆ. ಅದೇ ಸಮಯದಲ್ಲಿ, ಪೂರ್ವಜರ ಅಸಮಾಧಾನವು ಅನೇಕ ತೊಂದರೆಗಳನ್ನು ಉಂಟುಮಾಡುತ್ತದೆ ಎಂದು ಕೂಡ ಹೇಳಲಾಗುತ್ತದೆ. ಧರ್ಮ ಪುರಾಣಗಳಲ್ಲಿ, ಪಿತೃ ಪಕ್ಷಕ್ಕೆ ಸಂಬಂಧಿಸಿದಂತೆ ಕೆಲವು ನಿಯಮಗಳನ್ನು (Pitru Paksha Rules)  ಹೇಳಲಾಗಿದೆ.  ಪಿತೃ ಪಕ್ಷದ ಸಂದರ್ಭದಲ್ಲಿ ನಾವು ಏನು ಮಾಡಬೇಕು ಮತ್ತು ಏನನ್ನು ಮಾಡಬಾರದು ಎಂಬ ಬಗ್ಗೆ ಉಲ್ಲೇಖಿಸಲಾಗಿದೆ.


COMMERCIAL BREAK
SCROLL TO CONTINUE READING

ಪಿತೃ ಪಕ್ಷದ ಸಮಯದಲ್ಲಿ ಈ ಕೆಲಸವನ್ನು ಮಾಡಬೇಡಿ :
ಪಿತೃ ಪಕ್ಷದ (Pitru Paksha 2021)  15 ದಿನಗಳಲ್ಲಿ, ಪೂರ್ವಜರು ತಮ್ಮ ಕುಟುಂಬದೊಂದಿಗೆ ಇರಲು ಭೂಮಿಗೆ ಬರುತ್ತಾರೆ ಎಂದು ನಂಬಲಾಗಿದೆ. ಆದ್ದರಿಂದ, ಈ ಸಮಯದಲ್ಲಿ  ಪೂರ್ವಜರನ್ನು ಸಂತೋಷಪಡಿಸುವಂತಹ ಕೆಲಸಗಳನ್ನು ಮಾಡಬೇಕು.  ಪೂರ್ವಜರ ಮುನಿಸಿಗೆ ಅಥವಾ ಅಸಮಾಧಾನಕ್ಕೆ ಕಾರಣವಾಗುವ ಕೆಲಸಗಳನ್ನು ಮಾಡಬಾರದು. ಈ ಸಮಯದಲ್ಲಿ ಯಾವ ಕೆಲಸಗಳನ್ನು ಮಾಡಬಾರದು ಎಂಬ ಬಗ್ಗೆ ತಿಳಿಯೋಣ...


ಇದನ್ನೂ ಓದಿ- Career Remedies: ಕೆಲಸ ಕಳೆದುಕೊಳ್ಳುವ ಭಯವೇ? ತುಳಸಿಯ ಈ ಪರಿಹಾರವನ್ನು ಮಾಡಿ, ಬಡ್ತಿಯೊಂದಿಗೆ ಸಂಬಳವೂ ಹೆಚ್ಚಾಗುತ್ತದೆ


>> ಅಪ್ಪಿ-ತಪ್ಪಿಯೂ ಕೂಡ ಸೂರ್ಯಾಸ್ತದ ನಂತರ ಶ್ರಾದ್ಧ  (Shradh 2021) ಮಾಡಬೇಡಿ. ಹಾಗೆ ಮಾಡುವುದು ಅಶುಭ.


>> ಈ ಸಮಯದಲ್ಲಿ, ಕೆಟ್ಟ ಅಭ್ಯಾಸಗಳು, ಅಮಲು ಪದಾರ್ಥಗಳು, ಪ್ರತೀಕಾರದ ಆಹಾರಗಳಿಂದ ದೂರವಿರಿ. ಮದ್ಯ-ಮಾಂಸಾಹಾರಿ, ಬೆಳ್ಳುಳ್ಳಿ-ಈರುಳ್ಳಿಯನ್ನು ಪಿತೃ ಪಕ್ಷದಲ್ಲಿ ಎಂದಿಗೂ ಸೇವಿಸಬಾರದು. ಸೋರೆಕಾಯಿ, ಸೌತೆಕಾಯಿ, ಸಾಸಿವೆ ಸೊಪ್ಪು ಮತ್ತು ಜೀರಿಗೆಯನ್ನು ತಿನ್ನಬಾರದು. 


>> ಈ ಸಮಯದಲ್ಲಿ, ನಿಮ್ಮ ಪೂರ್ವಜರಿಗೆ ಗೌರವವನ್ನು ತೋರಿಸುವ ಸರಳ ಜೀವನವನ್ನು ನಡೆಸಿ. ಯಾವುದೇ ಶುಭ ಕಾರ್ಯವನ್ನು ಮಾಡಬೇಡಿ.


>> ಪಿಂಡ ದಾನ, ತರ್ಪಣ ಇತ್ಯಾದಿಗಳನ್ನು ಮಾಡುತ್ತಿರುವ ವ್ಯಕ್ತಿಯು ಕೂದಲು ಮತ್ತು ಉಗುರುಗಳನ್ನು ಕತ್ತರಿಸಬಾರದು. ಹಾಗೆಯೇ, ಬ್ರಹ್ಮಚರ್ಯವನ್ನು ಅನುಸರಿಸಬೇಕು. 


ಇದನ್ನೂ ಓದಿ- ಶಿವಲಿಂಗ ಪ್ರದಕ್ಷಿಣೆ ವೇಳೆ ಆಗುವ ಈ ದೊಡ್ಡ ತಪ್ಪನ್ನು ಸರಿಪಡಿಸಿಕೊಳ್ಳಿ, ಸರಿಯಾದ ನಿಯಮ ಹೀಗಿದೆ ..!


>> ಪಿತೃ ಪಕ್ಷದ (Pitru Paksha) ಸಮಯದಲ್ಲಿ ಯಾವುದೇ ಪ್ರಾಣಿ ಮತ್ತು ಪಕ್ಷಿಗಳಿಗೆ ಕಿರುಕುಳ ನೀಡಬೇಡಿ. ಹಾಗೆ ಮಾಡುವುದು ತೊಂದರೆಯನ್ನು ಆಹ್ವಾನಿಸಿದಂತಾಗುವುದು. ಬದಲಾಗಿ, ಈ ಸಮಯದಲ್ಲಿ ಮನೆಗೆ ಬರುವ ಪ್ರಾಣಿಗಳು ಮತ್ತು ಪಕ್ಷಿಗಳಿಗೆ ಆಹಾರವನ್ನು ನೀಡಿ. ಪೂರ್ವಜರು ತಮ್ಮ ಕುಟುಂಬಗಳನ್ನು ಪ್ರಾಣಿಗಳು ಮತ್ತು ಪಕ್ಷಿಗಳ ರೂಪದಲ್ಲಿ ಭೇಟಿ ಮಾಡಲು ಬರುತ್ತಾರೆ ಎಂದು ನಂಬಲಾಗಿದೆ. 


>> ಈ ಸಮಯದಲ್ಲಿ, ಬ್ರಾಹ್ಮಣರಿಗೆ ಎಲೆಯಲ್ಲಿ ಭೋಜನ ಮಾಡಿಸಿ ಮತ್ತು ನೀವೂ ಕೂಡ ಎಲೆಯಲ್ಲಿಯೇ ಆಹಾರವನ್ನು ತಿನ್ನಿರಿ. 


(ಸೂಚನೆ: ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. ಜೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ.)


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.