ನವದೆಹಲಿ : ಕನಸಿನ ಕುರಿತು ಹಲವಾರು ಜಿಜ್ಞಾಸೆಗಳಿವೆ. ಮನೋವಿಜ್ಞಾನಿಗಳು ಕನಸಿಗೆ (dreams) ನೀಡುವ ವ್ಯಾಖ್ಯಾನವೇ ಬೇರೆ. ಅವರು ಕನಸಿನ ವಿಚಾರಗಳನ್ನು ತರ್ಕಿಸುವ ವಿಧಾನವೇ ಬೇರೆ.  ಆದರೆ, ಮನೋ ಜ್ಯೋತಿಷಿಗಳು ಕನಸಿನ ಸಂಜ್ಞೆಗಳಿಗೆ ಬೇರೆ ಬೇರೆ ಅರ್ಥಗಳನ್ನು ನೀಡುತ್ತಾರೆ. ಅದನ್ನು ಶಕುನಶಾಸ್ತ್ರದ ಹಿನ್ನೆಲೆಯಲ್ಲಿ ತರ್ಕಿಸುತ್ತಾರೆ. ಇದೇ ವಿಚಾರದಲ್ಲಿ ಸ್ವಪ್ನ ಶಾಸ್ತ್ರ (Swapna Shastra) ಕೂಡಾ ಚಾಲ್ತಿಯಲ್ಲಿದೆ. ಸ್ವಪ್ನ ಶಾಸ್ತ್ರ ದ  ಪ್ರಕಾರ ನಾವು ಕನಸ್ಸಿನಲ್ಲಿ ನೋಡಿದ್ದು ನಿಜ ಜೀವನದಲ್ಲಿ ಎಲ್ಲಾದರೂ ಸತ್ಯವಾಗುತ್ತದೆ.  ಸ್ವಪ್ನದಲ್ಲಿ ಕೆಲವೊಂದು ವಸ್ತುಗಳು ಬಂದರೆ ಅದು ಶುಭ ಎಂದು ತರ್ಕಿಸಲಾಗುತ್ತದೆ. ಇನ್ನು ಕೆಲವು ವಸ್ತುಗಳು ಕನಸಿನಲ್ಲಿ ಕಾಣಿಸಿಕೊಂಡರೆ ಅದು ಅಶುಭ ಎನ್ನಲಾಗುತ್ತೆ.  ಸ್ವಪ್ನದಲ್ಲಿ ಕೆಲವೊಂದು ಪ್ರಾಣಿ (Animals), ಪಕ್ಷಿಗಳನ್ನು ನೋಡುವುದು ಶುಭ ಎಂದು ಹೇಳಲಾಗುತ್ತದೆ.  ಇನ್ನೂ ಕೆಲವು ಸ್ವಪ್ನ ಶಾಸ್ತ್ರ ಪಂಡಿತರ ಪ್ರಕಾರ ಸ್ವಪ್ನ ದಲ್ಲಿ ಕೆಲವೊಂದು ವಿಶೇಷ ಪ್ರಾಣಿ ಪಕ್ಷಿಗಳನ್ನು ನೋಡಿದರೆ, ಅದು ನಮ್ಮ ಯೋಗ ಬದಲಾಗುವ ಮುನ್ಸೂಚನೆಯಂತೆ.  ಅದನ್ನು ಒಂದೊಂದಾಗಿ ವಿಶ್ಲೇಷಣೆ ಮಾಡೋಣ


COMMERCIAL BREAK
SCROLL TO CONTINUE READING

1.ಗೋವು ಕಾಣಿಸಿಕೊಂಡರೆ ಸರ್ವ ಕಾರ್ಯ ಸಂಪನ್ನ.!
ಸ್ವಪ್ನ ಶಾಸ್ತ್ರದ (Swapna Shastra) ಪ್ರಕಾರ ಕನಸಿನಲ್ಲಿ ಗೋವು ಕಾಣಿಸಿಕೊಂಡರೆ ಅದು ಶುಭಫಲಗಳು ಸಿಗುವ ಮುನ್ಸೂಚನೆಯಂತೆ.  ಗೋವು ಕಾಣಿಸಿಕೊಳ್ಳುವ ಅರ್ಥವೆಂದರೆ, ಅಂಥಹ ವ್ಯಕ್ತಿಗೆ ದೇವರ ಅನುಗ್ರಹ ಸಾಕಷ್ಟು ಇದೆ. ಯಾವುದಕ್ಕೂ ಅಂಜಬೇಕಾದ ಅಗತ್ಯವಿಲ್ಲ ಎನ್ನುವಂತದ್ದು.  ಕನಸಿನಲ್ಲಿ ಗೋವು (Cow)ಕಾಣಿಸಿಕೊಂಡರೆ ಸರ್ವಕಾರ್ಯದಲ್ಲೂ ಯಶಸ್ಸು ನಿಮ್ಮದಾಗಿರುತ್ತದೆ. 


ಇದನ್ನೂ ಓದಿ : Staircase Vastu Tips - ಮನೆಯ Staircaseನಲ್ಲಿ ಅಡಗಿದೆ ಯಶಸ್ಸಿನ ಗುಟ್ಟು


2.ಆನೆ ಕಾಣಿಸಿಕೊಂಡರೆ ಐಶ್ವರ್ಯ ಪ್ರಾಪ್ತಿ..!
ಎಲ್ಲರ ಕನಸಿನಲ್ಲೂ ಆನೆ ಕಾಣಿಸಿಕೊಳ್ಳುವುದಿಲ್ಲ. ಒಂದು ವೇಳೆ ಆನೆ ನಿಮ್ಮ ಕನಸಿನಲ್ಲಿ ಬಂದರೆ ನಿಮ್ಮ ಕಾಲ ಬದಲಾಗಲಿದೆ ಎಂದೇ ಅರ್ಥ. ನಿಮಗೆ ಸಕಲ ಐಶ್ವರ್ಯವೂ ಸಿಗಲಿದೆ.  ನಿಮ್ಮ ಜೀವನದಲ್ಲಿ ಮುಂದೆ ಸುಖ ಸಮೃದ್ಧಿ ಸಿಗಲಿದೆ ಎಂಬುದು ಅದರ ಮುನ್ಸೂಚನೆಯಂತೆ.


3.ಗೂಬೆ ಕಾಣಿಸಿಕೊಂಡರೆ ಲಕ್ಷ್ಮೀ ಕಟಾಕ್ಷ.!
ಗೂಬೆಯನ್ನು ಲಕ್ಷ್ಮಿಯ (Godess Lakshmi) ವಾಹನ ಎಂದು ಪರಿಗಣಿಸಲಾಗುತ್ತದೆ. ಕನಸಿನಲ್ಲಿ ಗೂಬೆ ಕಾಣಿಸಿಕೊಳ್ಳುವುದು ಕೂಡಾ ಶುಭಕರವಂತೆ.  ಗೂಬೆ ಕಾಣಿಸಿಕೊಂಡರೆ ಧನ, ಧಾನ್ಯ ಪ್ರಾಪ್ತಿಯಾಗುತ್ತದೆಯಂತೆ. ಗೂಬೆ ಕಾಣಿಸಿಕೊಂಡರೆ ಮಹಾಲಕ್ಷ್ಮಿ ಅನುಗ್ರಹವಾಗಿದೆಯೆಂದೇ ಅರ್ಥ. 


ಇದನ್ನೂ ಓದಿ :Lord Hanuman Birth Place: ಅಂಜನೇಯ ಸ್ವಾಮಿ ಜನ್ಮಸ್ಥಾನದ ಕುರಿತು ಮುಖಾಮುಖಿಯಾದ ಕರ್ನಾಟಕ-ಆಂಧ್ರಪ್ರದೇಶ


4.ಕಾಳಸರ್ಪ ಕಾಣಿಸಿಕೊಂಡರೆ ಮನೋಕಾಮನೆ ಪ್ರಾಪ್ತಿ:
ಕನಸ್ಸಿನಲ್ಲಿ ಕಾಳಸರ್ಪ (Kala sarpa) ಕಾಣಿಸಿಕೊಂಡರೆ ಹೆದರಬೇಡಿ. ಅದು ಶುಭ ಶಕುನ. ಅದರ ಅರ್ಥ ಮುಂದಿನ ಜೀವನದಲ್ಲಿ ನಿಮಗೆ ಯಶಸ್ಸು ಸಿಗಲಿದೆ ಎನ್ನುವುದು. ಕಾಳಸರ್ಪ ಕಾಣಿಸಿಕೊಂಡರೆ ಸಕಲ ಮನೋಕಾಮನೆ ಪ್ರಾಪ್ತಿಯಾಗುತ್ತದೆ. 


5.ಮೊಲ  ಕಾಣಿಸಿಕೊಂಡರೆ ಕಾರ್ಯಸಿದ್ದಿ.!
ಕನಸಿನಲ್ಲಿ ಮೊಲ (Rabbit) ಕಾಣಿಸಿಕೊಂಡರೆ, ನಿಮ್ಮ ಪ್ರೇಮ ಜೀವನ ಅರಳಲಿದೆ. ಮೊಲ ಕಾಣಿಸಿಕೊಳ್ಳುವುದು ಸಾಕಷ್ಟು ಶುಭ ಎನ್ನಲಾಗಿದೆ. ಮೊಲ ಕಾಣಿಸಿಕೊಂಡರೆ ಸಕಲ ಕಾರ್ಯ ಸಿದ್ದಿಯಾಗುತ್ತದೆಯಂತೆ. ಎಲ್ಲಾ ರಂಗದಲ್ಲೂ ಸಫಲತೆ ಸಿಗುತ್ತದೆಯಂತೆ..


ಇದನ್ನೂ ಓದಿ : Vastu Tips for food: ಊಟದ ಹೊತ್ತಲ್ಲಿ ಈ ತಪ್ಪನ್ನು ಮಾಡಿದರೆ ಲಕ್ಷ್ಮೀಯ ಅವಕೃಪೆಗೆ ಒಳಗಾಗುವಿರಿ


6.ಹಲ್ಲಿ ಕಾಣಿಸಿಕೊಂಡರೆ ಆಕಸ್ಮಿಕ ಧನಪ್ರಾಪ್ತಿ :
ಹಲ್ಲಿ (Lizard) ಕಾಣಿಸಿಕೊಳ್ಳುವುದು ಅಶುಭ ಅಲ್ಲ. ಅದರಿಂದ ಸಾಕಷ್ಟು ಶುಭ ಫಲ ನಿರೀಕ್ಷೆ ಮಾಡಬಹುದು. ಹಲ್ಲಿ ಕಾಣಿಸಿಕೊಂಡರೆ ಆಕಸ್ಮಿಕ ಧನಪ್ರಾಪ್ತಿಯಾಗುತ್ತದೆಯಂತೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.