NRI News: ಉದಯಪುರ ರಾಜಕುಮಾರ, ಮೇವಾರ್ ರಾಜಮನೆತನದ ಲಕ್ಷ್ಯರಾಜ್ ಸಿಂಗ್ ಮೇವಾರ್ ಅವರು ಶನಿವಾರ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾಗಿದ್ದಾರೆ. ಇಲ್ಲಿ ಭೇಟಿಯಾಗುತ್ತಿದ್ದಂತೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆ ಆರಂಭವಾಗಿದೆ.


COMMERCIAL BREAK
SCROLL TO CONTINUE READING

ಇದೇ ವೇಳೆ ಸಾಹಿತ್ಯ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಇಂದೋರ್ ಗೆ ಬಂದಿದ್ದ ಅವರು ಸಿಎಂ ಯೋಗಿ ಅವರನ್ನು ಭೇಟಿಯಾದ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ಇನ್ನು ಇದೇ ಸಂದರ್ಭದಲ್ಲಿ ಇಂದೋರ್ ನಗರ ಮತ್ತು ಜನವರಿಯಲ್ಲಿ ನಡೆಯಲಿರುವ ಎನ್‌ಆರ್‌ಐ ಸಮ್ಮೇಳನದ ಕುರಿತು ಮಹಾರಾಣಾ ಪ್ರತಾಪ್ ವಂಶಸ್ಥರು ಮಾತನಾಡಿದ್ದಾರೆ.


ಇದನ್ನೂ ಓದಿ: NRIಗಳು ಫಾರ್ಮ್ 10Fನ್ನು ಸಲ್ಲಿಕೆ ಮಾಡಲು ಗಡುವು ವಿಸ್ತರಿಸಿದ CBDT


ಅನಿವಾಸಿ ಭಾರತೀಯರ ಸಮಾವೇಶಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಲಕ್ಷ್ಯರಾಜ್ ಸಿಂಗ್ ಮೇವಾರ್, “ಇದು ಅತ್ಯಂತ ಸಂತಸದ ವಿಷಯ. ಕೊರೊನಾದಿಂದಾಗಿ ಕಳೆದ ಮೂರು ವರ್ಷಗಳು ಹೋರಾಟದಲ್ಲಿಯೇ ಕಳೆದಿವೆ. ಜನರಿಗೆ ಬಹಳ ಕಿರುಕುಳ ಅನುಭವಿಸುವಂತಾಗಿದೆ. ದೇಶವಷ್ಟೇ ಅಲ್ಲ, ಇಡೀ ವಿಶ್ವವೇ ಈ ವಿಷಯದ ಬಗ್ಗೆ ಆತಂಕ ವ್ಯಕ್ತಪಡಿಸಿತ್ತು. ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ವಿಷಯಗಳು ಮತ್ತೆ ತೆರೆದುಕೊಳ್ಳುತ್ತಿವೆ. ಜನರು ಹಿಂತಿರುಗುತ್ತಿದ್ದಾರೆ. ಎನ್ ಆರ್ ಐ ಸಮಾವೇಶ ಈ ನಗರದಿಂದ ಪ್ರಾರಂಭವಾಗುತ್ತಿದೆ. ಈ ಬಗ್ಗೆ ತುಂಬಾ ಸಂತೋಷವಾಗಿದೆ” ಎಂದು ಹೇಳಿದ್ದಾರೆ.


ಲಕ್ನೋದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾದ ಬಗ್ಗೆ ಪ್ರತಿಕ್ರಿಯಿಸಿದ ಲಕ್ಷ್ಯರಾಜ್ ಸಿಂಗ್ ಮೇವಾರ್, “ಇದು ಸೌಜನ್ಯದ ಭೇಟಿ. ನಾನು ಅಲ್ಲಿಗೆ ತೆರಳಿದ್ದೆ. ಅವರು ತಮ್ಮ ಅಮೂಲ್ಯ ಸಮಯವನ್ನು ತೆಗೆದುಕೊಂಡಿದ್ದಕ್ಕಾಗಿ ನಾನು ಅವರಿಗೆ ತುಂಬಾ ಕೃತಜ್ಞನಾಗಿದ್ದೇನೆ. ನಮ್ಮ ಭೇಟಿಯ ಸಂದರ್ಭದಲ್ಲಿ ಮೇವಾರದ ಇತಿಹಾಸದ ಬಗ್ಗೆ ಚರ್ಚಿಸಿದ್ದೇವೆ. ಇದು ನಮ್ಮ ಮನೋಬಲವನ್ನೂ ಹೆಚ್ಚಿಸಿದೆ. ಇದು ಒಂದು ದೊಡ್ಡ ಸಂತೋಷ” ಎಂದು ಹೇಳಿದರು.


ಇದನ್ನೂ ಓದಿ: NRIಗಳಿಗೆ ಪ್ರಾಕ್ಸಿ ಮತದಾನಕ್ಕೆ ಅನುಮತಿ ನೀಡುವ ಯಾವುದೇ ಪ್ರಸ್ತಾವನೆಯು ಪರಿಗಣನೆಯಲ್ಲಿಲ್ಲ: ಕೇಂದ್ರ ಸ್ಪಷ್ಟನೆ


ಇಂದೋರ್‌ಗೆ ಬಂದ ನಂತರ ನಿಮ್ಮ ಭಾವನೆ ಹೇಗಿದೆ ಎಂದು ಕೇಳಿದಾಗ, ಲಕ್ಷ್ಯರಾಜ್ ಸಿಂಗ್ ಮೇವಾರ್ ಅವರು “ಮನೆಯಿಂದ ಹೊರಗೆ ಬಂದಾಗ, ಅದು ಹೇಗೆ ಎಂದು ಯೋಚಿಸುತ್ತಿದ್ದೇನೆ ಎಂದು ಹೇಳಲು ನನಗೆ ಯಾವುದೇ ಹಿಂಜರಿಕೆಯಿಲ್ಲ. ಇಲ್ಲಿ ನನಗೆ ಮನೆಯಲ್ಲಿದ್ದಂತೆ ಭಾಸವಾಗುತ್ತದೆ. ನೀವು ನಿಮ್ಮ ಸ್ವಂತ ಮನೆಯೊಳಗೆ ಒಂದು ಕೋಣೆಯಿಂದ ಇನ್ನೊಂದು ಕೋಣೆಗೆ ಬಂದಿದ್ದೀರಿ ಎಂದು ಅನಿಸುತ್ತಿದೆ” ಎಂದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.