BBK9: ಕಿಚ್ಚನ ‘ಕಿಚ್ಚು’: ಬಿಗ್ ಬಾಸ್ ವೇದಿಕೆಯಲ್ಲಿ ಕೆಂಡಾಮಂಡಲವಾದ ಸುದೀಪ್: ಕಾರಣವೇನು?

Sun, 16 Oct 2022-3:38 pm,

ಕನ್ನಡದ ಸೂಪರ್ ಹಿಟ್ ರಿಯಾಲಿಟಿ ಶೋ ಬಿಗ್ ಬಾಸ್ ಇದೀಗ ಸೀಸನ್ 9ರಲ್ಲಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಇನ್ನು ಇಂದು ನಡೆದ ಸೂಪರ್ ಸಂಡೇ ವಿತ್ ಸುದೀಪ್ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಈ ಬಾರಿ ಟಾಪ್ 2 ನಲ್ಲಿ ಯಾರು ಇರ್ತಾರೆ ಎಂಬ ಪ್ರಶ್ನೆಯನ್ನು ಸ್ಪರ್ಧಿಗಳ ಬಳಿಕ ಕೇಳಿದರು.

ಈ ಸಂದರ್ಭದಲ್ಲಿ ಆರ್ಯವರ್ಧನ್ ಗುರೂಜಿ ನೀಡಿರುವ ಹೇಳಿಕೆ ಕಿಚ್ಚ ಸುದೀಪ್ ಮಾತ್ರವಲ್ಲದೆ, ಸ್ಪರ್ಧಿಗಳು- ವೀಕ್ಷಕರನ್ನೂ ಸಹ ಶಾಕ್ ಆಗುವಂತೆ ಮಾಡಿದೆ.  

ಇಂದು ನಡೆದ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಅವರು ಈ ಬಾರಿ ಟಾಪ್ 2 ನಲ್ಲಿ ಯಾರು ಇರ್ತಾರೆ ಎಂದು ಮೊದಲು ರಾಕೇಶ್ ಗೆ ಪ್ರಶ್ನೆ ಕೇಳುತ್ತಾರೆ. ಅದಕ್ಕೆ ಉತ್ತರಿಸಿದ ಅವರು ಅರುಣ್ ಸಾಗರ್ ಎಂದು ಹೇಳುತ್ತಾರೆ.

ಬಳಿಕ ಅದೇ ಪ್ರಶ್ನೆಯನ್ನು ಸುದೀಪ್ ಗುರೂಜಿಗೆ ಕೇಳ್ತಾರೆ. ಆಗ ಮಾತನಾಡಿದ ಗುರೂಜಿ, “ಅನುಪಮಾ ಒಳಗೆ ಬರ್ಲಿ ಅನ್ನೋದು ಬಿಗ್ ಬಾಸ್‍ಗೆ ಆಸೆ ಇತ್ತು. ಎಷ್ಟು ಬಂಗಾರ ಇದೆ ಎಂದು ಗೊತ್ತಾದ ಮೇಲೆ ಒಳಗಡೆ ಕರೆಸುತ್ತಾರೆ ಎಂದ್ರೆ ಏನ್ ಅರ್ಥ. ಇದು ಮ್ಯಾಚ್ ಫಿಕ್ಸಿಂಗ್” ಎಂದು ಗಂಭೀರವಾಗಿ ಆರೋಪವನ್ನು ಮಾಡುತ್ತಾರೆ.

ಗುರೂಜಿ ಮಾತನ್ನು ಕೇಳಿದ ಅನುಪಮಾ ಗೌಡ ಸಹ ಶಾಕ್ ಆಗಿದ್ದಾರೆ. ಇನ್ನು ಮ್ಯಾಚ್ ಫಿಕ್ಸಿಂಗ್ ಎಂದಿದ್ದಕ್ಕೆ ಕೆಂಡಾಮಂಡಲವಾದ ಸುದೀಪ್ ವಾರ್ನ್ ಮಾಡ್ತಾರೆ.

“ಹಾಗೆಲ್ಲಾ ಮಾತನಾಡಬೇಡಿ. ಮಾತಿನ ಮೇಲೆ ನಿಗಾ ಇರಲಿ. ವಾಟ್ ಈಸ್ ದ್ಯಾಟ್ ಮ್ಯಾಚ್ ಫಿಕ್ಸಿಂಗ್? ಅಲ್ಲಿ ಕುಳಿತುಕೊಂಡು ಆಡುವವರು ಏನ್ರಿ ಹಾಗಾದ್ರೆ? ಬಿಗ್ ಬಾಸ್ ಮನೆಗೆ ಬಂದವರಿಗೆ ಯೋಗ್ಯತೆ ಇಲ್ವಾ? ಎಲ್ಲಾ ಮೋಸ ಮಾಡಿ ಆಡುತ್ತಿದ್ದಾರಾ?ಎಂದು ಸುದೀಪ್ ಖಡಕ್ ಆಗಿ ಪ್ರಶ್ನೆ ಮಾಡ್ತಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link