ದೇವ ಉತ್ಥಾನ ಏಕಾದಶಿಯಂದು ಈ ಪರಿಹಾರ ಕೈಗೊಳ್ಳುವುದರಿಂದ ಶೀಘ್ರವೇ ಕೂಡಿಬರಲಿದೆ ಕಂಕಣ ಭಾಗ್ಯ

Thu, 23 Nov 2023-6:23 am,

ಕಾರ್ತಿಕ ಮಾಸದ ಶುಕ್ಲ ಪಕ್ಷದ ಏಕಾದಶಿಯನ್ನು  ದೇವ ಉತ್ಥಾನ ಏಕಾದಶಿ ಎಂದು ಆಚರಿಸಲಾಗುತ್ತದೆ. ದೇವುತನಿ ಏಕಾದಶಿ ಅಥವಾ ದೇವೋತ್ಥಾನ ಏಕಾದಶಿಯನ್ನು ಪ್ರಬೋಧಿನಿ ಏಕಾದಶಿ ಎಂತಲೂ ಕರೆಯಲಾಗುತ್ತದೆ. 

ದೇವ ಉತ್ಥಾನ ಏಕಾದಶಿಯನ್ನು ಉಳಿದ ಎಲ್ಲಾ ಏಕಾದಶಿಗಿಂತಲೂ ಬಹಳ ಪವಿತ್ರವಾದ ಏಕಾದಶಿ ಎಂದು ನಂಬಲಾಗಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ದೇವ ಉತ್ಥಾನ ಏಕಾದಶಿಯು ಯಾವುದೇ ರೀತಿಯ ಶುಭ ಕಾರ್ಯಗಳನ್ನು ಆರಂಭಿಸಲು ತುಂಬಾ ಪ್ರಾಶಸ್ತ್ಯವಾದ ದಿನ ಎನ್ನಲಾಗುತ್ತದೆ. 

ಪೌರಾಣಿಕ ನಂಬಿಕೆಗಳ ಪ್ರಕಾರ, ಭಗವಾನ್ ವಿಷ್ಣುವು ಐದು ತಿಂಗಳುಗಳ ನಿದ್ರೆಯ ಬಳಿಯ ಎಚ್ಚರಗೊಳ್ಳುವ ಸಮಯವನ್ನು ದೇವ ಉತ್ಥಾನ ಏಕಾದಶಿಯಾಗಿ ಆಚರಿಸಲಾಗುತ್ತದೆ. 

ಈ ವರ್ಷ ನವೆಂಬರ್ 23 ರಂದು ಗುರುವಾರದಂದು ದೇವ ಉತ್ಥಾನ ಏಕಾದಶಿಯನ್ನು ಆಚರಿಸಲಾಗುತ್ತಿದೆ. 

ಶುಭ ಕಾರ್ಯಗಳ ಆರಂಭ 

ಯಾರಿಗಾದರೂ ಮದುವೆ ವಿಳಂಬವಾಗುತ್ತಿದ್ದರೆ ಉತ್ಥಾನ ಏಕಾದಶಿಯಲ್ಲಿ ಕೆಲವು ಪರಿಹಾರಗಳನ್ನು ಕೈಗೊಳ್ಳುವುದರಿಂದ ಶೀಘ್ರದಲ್ಲೇ ಕಂಕಣ ಭಾಗ್ಯ ಕೂಡಿಬರಲಿದೆ ಎಂದು ಹೇಳಲಾಗುತ್ತದೆ.  

ದೇವ ಉತ್ಥಾನ ಏಕಾದಶಿಯ ದಿನ ಭಗವಾನ್ ವಿಷ್ಣುವಿನ ಪೂಜೆಯ ಸಮಯದಲ್ಲಿ, ಕುಂಕುಮ, ಹಳದಿ ಚಂದನ ಅಥವಾ ಅರಿಶಿನದ ತಿಲಕವನ್ನು ಅನ್ವಯಿಸಿ.  ಪೂಜೆಯ ವೇಳೆ ಹಳದಿ ಹೂವುಗಳನ್ನು ಅರ್ಪಿಸಿ.  ಇದರಿಂದ ಮದುವೆ ವಿಷಯದಲ್ಲಿ ಉಂಟಾಗಿರುವ ಅಡೆತಡೆಗಳು ನಿವಾರಣೆಯಾಗುತ್ತವೆ ಎನ್ನಲಾಗುತ್ತದೆ. 

ದೇವ ಉತ್ಥಾನ ಏಕಾದಶಿಯ ಈ ದಿನ ಅರಳಿ ಮರಕ್ಕೆ ನೀರು ಅರ್ಪಿಸುವುದರಿಂದ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂದು ನಂಬಲಾಗಿದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link