ರಾಹು ಗೋಚರ: ಅಶುಭ ಯೋಗದ ಅಂತ್ಯ, ಈ ರಾಶಿಗೆ ಉನ್ನತಿಯ ಪರ್ವಕಾಲ.. ಸಂಪತ್ತಿನ ದೇವತೆ ಮನೆಗೆ ಬರುವಳು!

Thu, 02 Nov 2023-7:32 am,

ರಾಹು ಗ್ರಹವು ಅಕ್ಟೋಬರ್ 30 ರಂದು ಮೇಷ ರಾಶಿಯಿಂದ ಮೀನ ರಾಶಿಗೆ ಸಾಗಿದೆ. ಇದೇ ಕಾರಣಕ್ಕೆ ಈಗ ಗುರು ಚಂಡಾಲ ಯೋಗ ಅಂತ್ಯಗೊಂಡಿದೆ. ಇದರಿಂದ ಕೆಲವು ರಾಶಿಗಳಿಗೆ ಗುರುಬಲ ಬಂದಿದೆ.   

ಗುರು ಚಂಡಾಲ ಯೋಗದ ಅಂತ್ಯದೊಂದಿಗೆ ಮೂರು ರಾಶಿಗಳ ಜನರ ಅದೃಷ್ಟವು ಸಂಪೂರ್ಣವಾಗಿ ಬದಲಾಗಲಿದೆ. ಇದರಿಂದ ಅವರು ಲಾಭ ಪಡೆಯಬಹುದು.    

ಮೇಷ ರಾಶಿಯವರಿಗೆ ಗುರು ಚಂಡಾಲ ಯೋಗದಿಂದ ಲಗ್ನ ಮನೆಯಲ್ಲಿ ಅಶುಭ ಯೋಗ ಉಂಟಾಗಿತ್ತು, ಇದರಿಂದ ವೈವಾಹಿಕ ಜೀವನದಲ್ಲೂ ಉದ್ವಿಗ್ನತೆ ಉಂಟಾಗುತ್ತಿತ್ತು. ಆದರೆ ಈಗ ಇಂತವರಿಗೆ ಒಳ್ಳೆಯ ದಿನಗಳು ಶುರುವಾಗಿದೆ. ಅವಿವಾಹಿತರಿಗೆ ವಿವಾಹದ ಅವಕಾಶಗಳಿವೆ. ಸಂಗಾತಿಯ ಸಹಾಯದಿಂದ ಆರ್ಥಿಕ ಲಾಭ ಪಡೆಯುವ ಅವಕಾಶಗಳಿವೆ.

ಮಿಥುನ ರಾಶಿಯ ಜನರು ಈಗ ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸನ್ನು ಪಡೆಯಬಹುದು. ಆದಾಯ ಹೆಚ್ಚಾಗುವ ಸಾಧ್ಯತೆ ಇದೆ. ವೃತ್ತಿಜೀವನದಲ್ಲಿ ಅನೇಕ ಹೊಸ ಅವಕಾಶಗಳು ಬರಲಿವೆ. ಷೇರು ಮಾರುಕಟ್ಟೆಯಲ್ಲಿ ಲಾಭದ ಅವಕಾಶಗಳಿವೆ ಮಕ್ಕಳಿಂದ ಒಳ್ಳೆಯ ಸುದ್ದಿ ಪಡೆಯಬಹುದು.  

ಕನ್ಯಾ ರಾಶಿಯವರು ವೃತ್ತಿ ಮತ್ತು ವ್ಯವಹಾರದಲ್ಲಿ ಲಾಭವನ್ನು ಪಡೆಯುತ್ತಾರೆ. ಈಗ ನೀವು ಆರೋಗ್ಯದಲ್ಲಿ ಸುಧಾರಣೆ ಕಾಣುವಿರಿ. ಹಠಾತ್ ಆರ್ಥಿಕ ಲಾಭದ ಬಾಗಿಲುಗಳು ತೆರೆಯಲಿವೆ. ಈ ಸಮಯವನ್ನು ಗೌರವ ಮತ್ತು ಪ್ರತಿಷ್ಠೆಗೆ ಮಂಗಳಕರವೆಂದು ಪರಿಗಣಿಸಲಾಗುತ್ತದೆ.  

ಗಮನಿಸಿ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link