ಶೂಟಿಂಗ್‌ನಲ್ಲಿ ಬ್ಯುಸಿ, ಮೊದಲ ರಾತ್ರಿಗೆ ಸಮಯವೇ ಇಲ್ಲ.. ರೈಲಿನಲ್ಲಿಯೇ ಅದನ್ನ ಮಾಡಿ ಮುಗಿಸಿದ ಸ್ಟಾರ್‌ ನಟ..!

Wed, 10 Jul 2024-2:14 pm,

ಮೆಗಾ ಫ್ಯಾಮಿಲಿ ಇಲ್ಲದೆ ತೆಲುಗು ಚಿತ್ರರಂಗವನ್ನು ಯಾರೂ ಊಹಿಸಲು ಸಾಧ್ಯವಿಲ್ಲ. ಮೆಗಾಸ್ಟಾರ್ ಚಿರಂಜೀವಿ ಸುಮಾರು 30 ವರ್ಷಗಳ ಕಾಲ ತಮ್ಮ ಚಿತ್ರಗಳ ಮೂಲಕ ಟಾಲಿವುಡ್‌ ಅನ್ನು ನೆಕ್ಸ್ಟ್‌ ಲೆವೆಲ್‌ಗೆ ತೆಗೆದುಕೊಂಡು ಹೋದರು.   

ಚಿರುಗೆ ಸಂಬಂಧಿಸಿದ ಇತ್ತೀಚಿನ ಸುದ್ದಿಯೊಂದು ಸದ್ಯ ವೈರಲ್ ಆಗುತ್ತಿದೆ. ಕೆ. ರಾಘವೇಂದ್ರ ರಾವ್ ನಿರ್ದೇಶನದ ಮೆಗಾಸ್ಟಾರ್ ಚಿರಂಜೀವಿ ನಟನೆಯ ಬಹುತೇಕ ಸಿನಿಮಾಗಳು ಹಿಟ್ ಗಳಿಸಿದರು.  

ಚಿರಂಜೀವಿ ಹೀರೋ ಆಗಿ ಬೆಳೆಯುತ್ತಿದ್ದ ದಿನಗಳಲ್ಲಿ ಅಲ್ಲು ರಾಮಲಿಂಗಯ್ಯನವರು ಚಿರಂಜೀವಿಯವರಿಗೆ ತಮ್ಮ ಮಗಳು ಸುರೇಖಾ ಅವರನ್ನು ಕೊಟ್ಟು ಮದುವೆ ಮಾಡಿಸಿದ್ದು ಎಲ್ಲರಿಗೂ ಗೊತ್ತೇ ಇದೆ.  

ಆ ಮದುವೆಯೂ ಒಂದೆರೆಡು ದಿನಗಳ ಗ್ಯಾಪ್‌ನಲ್ಲಿ ನಡೆಯಿತು. ಕನಿಷ್ಠ ಮೊದಲ ರಾತ್ರಿಗೂ ಸಮಯವಿರಲಿಲ್ಲವಂತೆ. ಇದರೊಂದಿಗೆ ರಾಘವೇಂದ್ರ ರಾವ್ ಅವರು ಪ್ಲ್ಯಾನ್‌ ಮಾಡಿ ಈ ನವಜೋಡಿಗೆ ಜೀವನದಲ್ಲಿ ಮರೆಯಲಾರದಂತೆ ಉತ್ತಮ ಉಡುಗೂರೆ ನೀಡಿದರು..   

ಚಿರಂಜೀವಿ ಮದುವೆಯಾದ ತಕ್ಷಣ ರಾಘವೇಂದ್ರ ರಾವ್ ನಿರ್ದೇಶಿಸುತ್ತಿದ್ದ ಚಿತ್ರದ ಶೂಟಿಂಗ್‌ನಲ್ಲಿ ಭಾಗವಹಿಸಿದ್ದರು. ಊಟಿಯಲ್ಲಿ ಚಿತ್ರದ ಶೂಟಿಂಗ್ ಶೆಡ್ಯೂಲ್ ಮುಗಿದ ನಂತರ ಮೆಗಾಸ್ಟಾರ್‌ ರೈಲಿನಲ್ಲಿ ಚೆನ್ನೈಗೆ ತೆರಳಿದರು.  

ರಾಘವೇಂದ್ರ ರಾವ್ ಅವರು ಚಿರಂಜೀವಿಗಾಗಿ ರೈಲು ಟಿಕೆಟ್ ಬುಕ್ ಮಾಡಿದ್ದರು. ಆ ವೇಳೆ ಚಿರು ಜೊತೆ ಅವರ ಪತ್ನಿ ಸುರೇಖಾ ಕೂಡ ಇದ್ದರು. ಇಬ್ಬರೂ ಒಟ್ಟಿಗೆ ರೈಲು ಹತ್ತಿದರು.   

ರಾಘವೇಂದ್ರ ರಾವ್‌ ಅವರು ಈ ಜೋಡಿಗೆ ವಿಶೇಷವಾಗಿ ಕೂಪ್ ಹೆಸರಿನ ಬರ್ತ್ ಅನ್ನು ಬುಕ್ ಮಾಡಿದ್ದಾರೆ. ಇದು ಎರಡು ಬರ್ತ್‌ಗಳನ್ನು ಹೊಂದಿದೆ. ಚಿರಂಜೀವಿ ಮತ್ತು ಸುರೇಖಾ ಇಬ್ಬರೂ ತಮ್ಮ ಬರ್ತ್‌ಗೆ ಹೋದಾಗ ಶಾಕ್ ಆದರು. ಆ ಬರ್ತ್ ಅನ್ನು ಸಂಪೂರ್ಣವಾಗಿ ಫಸ್ಟ್ ನೈಟ್ ಬೆಡ್ ರೂಮಿನಂತೆ ಅಲಂಕರಿಸಲಾಗಿತ್ತು.  

ಮೊನ್ನೆ ಮೊನ್ನೆಯಷ್ಟೇ ಸ್ವತಃ ಈ ವಿಚಾರವನ್ನು ಚಿರಂಜೀವಿ ಅವರೇ ಬಹಿರಂಗ ಪಡಿಸಿದರು. ಹೂವು, ಹಣ್ಣು, ಅಲಂಕಾರಗಳನ್ನೆಲ್ಲ ಫಸ್ಟ್ ನೈಟ್ ಬೆಡ್ ರೂಂ ಹೋಲುವಂತೆ ಬರ್ತ್‌ ಡಿಸೈನ್ ಮಾಡಿದ್ದಾಗಿ ತಿಳಿಸಿದರು. ಇದರಿಂದ ಸುರೇಖಾ ಬೆಚ್ಚಿಬಿದ್ದಿದ್ದಲ್ಲದೆ ಮುಜುಗರಕ್ಕೊಳಗಾಗಿದ್ದರು.  

 ಇದು ಎಂದಿಗೂ ಮರೆಯಲಾಗದ ನೆನಪು ಎಂದು ತೆಲುಗು ಹಿರಿಯ ನಟ ಮೆಗಾಸ್ಟಾರ್‌ ಚಿರಂಜೀವಿ ಈ ವಿಚಾರವನ್ನು ಹಲವಾರು ಸಂದರ್ಭಗಳಲ್ಲಿ ಹೇಳಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link