ಬೆಂಗಳೂರು: ಜೀವನದಲ್ಲಿ ಸಂಭವಿಸುವ ಘಟನೆಗಳ ಸೂಚನೆಯು ಮುಂಚಿತವಾಗಿ ದೊರೆತರೆ, ಆಗ ವ್ಯಕ್ತಿಯು ಎಚ್ಚರಗೊಳ್ಳುತ್ತಾನೆ. ಜ್ಯೋತಿಷ್ಯದಂತೆಯೇ, ಶಕುನ ಶಾಸ್ತ್ರದಲ್ಲಿಯೂ ಸಹ ಅಂತಹ ಕೆಲವು ವಿಷಯಗಳನ್ನು ಉಲ್ಲೇಖಿಸಲಾಗಿದೆ, ಅವು  ವ್ಯಕ್ತಿಯೊಬ್ಬನಿಗೆ ಆತನ ಜೀವನದಲ್ಲಿ ಸಂಭವಿಸುವ ಶುಭ ಮತ್ತು ಅಶುಭ ಘಟನೆಗಳ ಬಗ್ಗೆ ಮುಂಚಿತವಾಗಿ ಸಂಕೇತ ನೀಡುತ್ತವೆ. ಕೆಲವು ಶುಭ ಶಕುನಗಳು ಶೀಘ್ರದಲ್ಲಿಯೇ ಅದೃಷ್ಟದ ಬಾಗಿಲು ತೆರೆಯಲಿದೆ ಎಂಬುದರ ಸಂಕೇತಗಳಾಗಿವೆ. ಕೆಲವು ವಿಶೇಷ ಶುಭ ಶಕುನಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.


COMMERCIAL BREAK
SCROLL TO CONTINUE READING

ಈ ಅಂಶಗಳು ಅದೃಷ್ಟವನ್ನು ಸೂಚಿಸುತ್ತವೆ
>> ಶಕುನ್ ಶಾಸ್ತ್ರದ ಪ್ರಕಾರ, ಕನಸಿನಲ್ಲಿ ದೇವರನ್ನು ನೋಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಒಬ್ಬ ವ್ಯಕ್ತಿಯು ಕನಸಿನಲ್ಲಿ ದೇವರನ್ನು ನೋಡಿದರೆ, ಯಾವುದೇ ಬಯಕೆ ಶೀಘ್ರದಲ್ಲೇ ಈಡೇರುತ್ತದೆ ಎಂದು ಹೇಳಲಾಗುತ್ತದೆ.


>> ಮತ್ತೊಂದೆಡೆ, ನೀವು ಕೆಲವು ವಿಶೇಷ ಕೆಲಸಕ್ಕೆ ಹೋಗುತ್ತಿದ್ದು ಮತ್ತು ದಾರಿಯಲ್ಲಿ ನಿಮಗೆ ಎಲ್ಲೋ ನವಿಲು ನೃತ್ಯ ಮಾಡುತ್ತಿರುವುದನ್ನು ಕಂಡರೆ, ನಿಮ್ಮ ಅದೃಷ್ಟವು ತೆರೆದುಕೊಳ್ಳಲಿದೆ ಎಂದು ಅರ್ಥಮಾಡಿಕೊಳ್ಳಿ. ನರ್ತಿಸುವ ನವಿಲನ್ನು ನೋಡುವುದು ಕೆಲಸದಲ್ಲಿ ಯಶಸ್ಸನ್ನು ಸೂಚಿಸುತ್ತದೆ.


>> ಶಕುನ್ ಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯು ತನ್ನ ಕನಸಿನಲ್ಲಿ ಶೃಂಗಾರ ಮಾಡಿಕೊಂಡ ಮಹಿಳೆಯನ್ನು ನೋಡಿದರೆ, ಅದನ್ನು ಮಂಗಳಕರ ಸಂಕೇತವೆಂದು ಪರಿಗಣಿಸಲಾಗುತ್ತದೆ. ಶೃಂಗಾರ ಮಾಡಿಕೊಂಡ ಮಹಿಳೆಯನ್ನು ನೋಡುವುದು ವಿಶೇಷ ಫಲಿತಾಂಶಗಳನ್ನು ನೀಡುತ್ತದೆ ಎಂಬುದನ್ನು ಸೂಚಿಸುತ್ತದೆ. ಬಹುತೇಕ ಸನ್ನಿವೇಶಗಳಲ್ಲಿ, ಮುಂಬರುವ ದಿನಗಳಲ್ಲಿ ಹಠಾತ್ ವಿತ್ತೀಯ ಲಾಭದ ಸಂಕೇತ ಇದಾಗಿದೆ.


>> ನೀವು ಹಣವನ್ನು ನಿಮ್ಮ ಜೇಬಿನಲ್ಲಿ ಇಟ್ಟುಕೊಳ್ಳುವಾಗ, ಅದು ಕೆಳಗೆ ಬಿದ್ದರೆ, ಅದು ಒಳ್ಳೆಯ ಶಕುನವೆಂದು ಪರಿಗಣಿಸಲಾಗುತ್ತದೆ. ಇದರರ್ಥ ಶೀಘ್ರದಲ್ಲೇ ನಿಮಗೆ ಹಣ ಸಿಗಲಿದೆ ಎಂದಾಗುತ್ತದೆ. ಇದರ ಹೊರತಾಗಿ, ಕಪ್ಪು ನಾಯಿಯು ಅರಿಶಿನವನ್ನು ಹಚ್ಚಿದ ಮಾಂಸದ ತುಂಡನ್ನು ತಿನ್ನುವುದನ್ನು ನೋಡಿದರೆ, ನಿಮ್ಮ ಅತ್ಯಾವಶ್ಯಕ ಕೆಲಸ ಶೀಘ್ರದಲ್ಲಿಯೇ ಕೈಗೂಡಲಿದೆ ಎಂದಾಗುತ್ತದೆ. 


>> ಮತ್ತೊಂದೆಡೆ, ಒಬ್ಬ ವ್ಯಕ್ತಿಯು ಕುದುರೆಯು ತನ್ನ ಹಲ್ಲುಗಳಿಂದ ದೇಹದ ಎಡಭಾಗವನ್ನು ಉಚ್ಚಿಕೊಳ್ಳುತ್ತಿರುವುದನ್ನು ನೋಡಿದರೆ, ನೀವು ಶೀಘ್ರದಲ್ಲೇ ನೀವು ಕೆಲವು ಕೆಲಸಗಳಲ್ಲಿ ಯಶಸ್ಸನ್ನು ಪಡೆಯುತ್ತೀರಿ ಎಂಬುದನ್ನೂ ಸೂಚಿಸುತ್ತದೆ. ಆರ್ಥಿಕ ವಹಿವಾಟಿಗೆ ಹೋಗುವಾಗ ಈ ರೀತಿ ಕಾಣಿಸುವುದು ವಿಶೇಷ ಲಾಭದಾಯಕ.


ಇದನ್ನೂ ಓದಿ-ಆಶ್ಲೇಷಾ ನಕ್ಷತ್ರದಲ್ಲಿ ಸೂರ್ಯನ ಪ್ರವೇಶ, ಮೂರು ರಾಶಿಗಳ ಜನರಿಗೆ ಅಪಾರ ಧನಪ್ರಾಪ್ತಿಯ ಯೋಗ!


>> ಕೆಲವು ಶುಭ ಕಾರ್ಯಗಳಿಗೆ ಹೋಗುವಾಗ ಕಿನ್ನರರು ಕಂಡರೆ  ಅದೂ ಕೂಡ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ನೀವು ಸಹ ನಪುಂಸಕನನ್ನು ನೋಡಿದರೆ, ಅವನಿಗೆ ಸ್ವಲ್ಪ ಹಣವನ್ನು ನೀಡಿ. ಮತ್ತೊಂದೆಡೆ, ನಪುಂಸಕನು ನಿಮಗೆ ಸ್ವಲ್ಪ ಹಣವನ್ನು ಹಿಂದಿರುಗಿಸಿದರೆ, ಅದನ್ನು ಎಚ್ಚರಿಕೆಯಿಂದ ಇರಿಸಿ, ಅದು ನಿಮ್ಮ ಸಂಪತ್ತನ್ನು ಹೆಚ್ಚಿಸುತ್ತದೆ.


ಇದನ್ನೂ ಓದಿ-ಆಗಸ್ಟ್ 7 ರಂದು ನಿರ್ಮಾಣಗೊಳ್ಳಲಿದೆ ಗಜಕೇಸರಿ ರಾಜಯೋಗ, ಈ ಜನರಿಗೆ ಅಪಾರ ಧನ ವೃದ್ಧಿಯೋಗ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.