Pitru Paksha 2024: ಈ ವರ್ಷ ಪಿತೃ ಪಕ್ಷ ಸೆಪ್ಟೆಂಬರ್ 17ರಿಂದ ಪ್ರಾರಂಭವಾಗಿದೆ. ಪಿತೃ ಪಕ್ಷದಲ್ಲಿ ಪೂರ್ವಜರಿಗೆ ನೈವೇದ್ಯ, ಪಿಂಡದಾನ ಮತ್ತು ಶ್ರಾದ್ಧವನ್ನು ಮಾಡಲಾಗುತ್ತದೆ. ಹೀಗೆ ಮಾಡುವುದರಿಂದ ಪೂರ್ವಜರು ಮೋಕ್ಷವನ್ನು ಪಡೆಯುತ್ತಾರೆ, ಸಂತೋಷಪಡುತ್ತಾರೆ ಮತ್ತು ಅವರ ವಂಶಸ್ಥರನ್ನು ಆಶೀರ್ವದಿಸುತ್ತಾರೆ. ಪಿತೃ ಪಕ್ಷವು ಪೂರ್ವಜರ ಋಣವನ್ನು ತೀರಿಸುವ ಸಮಯ ಎಂದು ಹೇಳಲಾಗುತ್ತದೆ. ಪಿತೃ ಪಕ್ಷದಲ್ಲಿ ಪೂರ್ವಜರ ಮರಣದ ದಿನಾಂಕದಂದು ಶ್ರಾದ್ಧವನ್ನು ಆಚರಿಸಲಾಗುತ್ತದೆ. ಇದರಿಂದ ಪಿತ್ರ ದೋಷದಿಂದ ಮುಕ್ತಿ ಸಿಗುತ್ತದೆ ಮತ್ತು ಪೂರ್ವಜರ ಆಶೀರ್ವಾದದಿಂದ ಮನೆಯಲ್ಲಿ ಸಂತೋಷ-ಸಮೃದ್ಧಿ ಇರುತ್ತದೆ. ಸರ್ವಪಿತೃ ಅಮಾವಾಸ್ಯೆ ಎಂದು ಕರೆಯಲ್ಪಡುವ ಅಕ್ಟೋಬರ್ 2ರಂದು ಪಿತೃ ಪಕ್ಷವು ಕೊನೆಗೊಳ್ಳುತ್ತದೆ. 


COMMERCIAL BREAK
SCROLL TO CONTINUE READING

ಪಿತೃಪಕ್ಷದ ಸಮಯದಲ್ಲಿ ಪೂರ್ವಜರ ಶ್ರಾದ್ಧಾಹಾರವನ್ನು ಕಾಗೆಗಳಿಗೆ ನೀಡಲಾಗುತ್ತದೆ. ಶ್ರಾದ್ಧದಲ್ಲಿ ಕಾಗೆಗೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಶ್ರಾದ್ಧಾಹಾರವನ್ನು ಕಾಗೆ ತಿಂದರೆ ಪೂರ್ವಜರೂ ಆ ಆಹಾರವನ್ನು ಸೇವಿಸುವರೆಂಬ ನಂಬಿಕೆ ಇದೆ. ಪಂಚಬಲಿ ಭೋಗವನ್ನು ಅಂದರೆ ಕಾಗೆ, ಹಸು, ನಾಯಿ, ಇರುವೆ ಮತ್ತು ದೇವರುಗಳಿಗೆ ಪೂರ್ವಜರಿಗೆ ತಯಾರಿಸಿದ ಆಹಾರದಿಂದ ನೈವೇದ್ಯ ಮಾಡುವುದು ಅಗತ್ಯವೆಂದು ಪರಿಗಣಿಸಲಾಗಿದೆ. ಪೂರ್ವಜರು ತಮ್ಮ ರೂಪದಲ್ಲಿ ಭೂಮಿಗೆ ಬರುತ್ತಾರೆಂದು ಹೇಳಲಾಗುತ್ತದೆ. 


ಇದನ್ನೂ ಓದಿಈ ಹಣ್ಣಿನ ಎಲೆಯ ರಸ ಕುಡಿದರೆ ನಿಮಿಷದಲ್ಲೇ ಬ್ಲಡ್‌ ಶುಗರ್‌ ಕಂಟ್ರೋಲ್‌ ಆಗುವುದು! ಬೊಜ್ಜು ಕರಗಿಸಲು ಸಹ ಇದು ಸಹಕಾರಿ


ಪಿತೃ ಪಕ್ಷದ ಸಮಯದಲ್ಲಿ ಕಾಗೆಗೆ ಶ್ರಾದ್ಧಾಹಾರ ಉಣಿಸುವ ಮಹತ್ವ


ಪಿತೃಪಕ್ಷದ ಸಮಯದಲ್ಲಿ ಕಾಗೆಗಳಿಗೆ ಖಂಡಿತವಾಗಿಯೂ ಆಹಾರವನ್ನು ನೀಡಲಾಗುತ್ತದೆ. ಗರುಡ ಪುರಾಣದ ಪ್ರಕಾರ ಕಾಗೆಯನ್ನು ಯಮನ ಸಂಕೇತವೆಂದು ಪರಿಗಣಿಸಲಾಗಿದೆ. ಕಾಗೆಗಳು ಶ್ರಾದ್ಧಾಹಾರವನ್ನು ಸೇವಿಸಿದರೆ ಪೂರ್ವಜರ ಆತ್ಮಗಳು ಸಂತೃಪ್ತವಾಗುತ್ತವೆ. ಅಷ್ಟೇ ಅಲ್ಲ ಕಾಗೆಗೆ ಆಹಾರವನ್ನು ನೀಡುವುದರಿಂದ ಯಮರಾಜನು ಸಂತೋಷಪಡುತ್ತಾನೆ ಮತ್ತು ಪೂರ್ವಜರ ಆತ್ಮಕ್ಕೂ ಶಾಂತಿ ಸಿಗುತ್ತದೆ. ಗರುಡ ಪುರಾಣದ ಪ್ರಕಾರ ಕಾಗೆಗೆ ಆಹಾರವನ್ನು ನೀಡಿದರೆ ಪೂರ್ವಜರ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದು ಯಮ ದೇವರು ಕಾಗೆಗೆ ವರವನ್ನು ನೀಡಿದ್ದನು. ಪಿತೃಪಕ್ಷದ ಸಮಯದಲ್ಲಿ ಕಾಗೆಗಳಿಗೆ ಆಹಾರ ನೀಡುವುದರಿಂದ ಹಲವು ಪಟ್ಟು ಹೆಚ್ಚು ಲಾಭವಾಗುತ್ತದೆ ಎಂದು ಹೇಳಲಾಗಿದೆ.


ಇದನ್ನೂ ಓದಿ: ದೇಹದ ಈ ಭಾಗದ ಮೇಲೆ ಹಲ್ಲಿ ಬಿದ್ದರೆ ಅಪಶಕುನ..! ಸಾವು ಸಂಭವಿಸಬಹುದು.. ಜ್ಯೋತಿಷ್ಯ ಏನ್‌ ಹೇಳುತ್ತೆ..?


(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆ ಮತ್ತು ಜಾನಪದ ನಂಬಿಕೆಗಳನ್ನು ಆಧರಿಸಿದೆ. ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. Zee Kannada News ಇದನ್ನು ದೃಢಪಡಿಸುವುದಿಲ್ಲ.)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.