ನವರಾತ್ರಿಯ ಮೊದಲ ದಿನ ಈ ಕೆಲಸಗಳನ್ನು ಮಾಡಿ; ತಾಯಿ ದುರ್ಗಾದೇವಿ ನಿಮ್ಮ ಮನೆಗೆ ಸುಖ-ಸಂಪತ್ತನ್ನು ಕರುಣಿಸುತ್ತಾಳೆ!

Shardiya Navratri 2024: ಶಾರದೀಯ ನವರಾತ್ರಿಯ ಮೊದಲ ದಿನದಂದು ನೀವು ಈ ಕೆಲಸಗಳನ್ನು ಮಾಡಿದರೆ, ತಾಯಿ ದುರ್ಗೆಯ ವಿಶೇಷ ಆಶೀರ್ವಾದವನ್ನು ಪಡೆಯುತ್ತೀರಿ. ಹಾಗಾದರೆ ನವರಾತ್ರಿಯ ಆರಂಭದಲ್ಲಿ ಏನು ಮಾಡುವುದು ಶುಭವೆಂದು ಇಲ್ಲಿ ತಿಳಿಯಿರಿ.

Navratri 2024: ಭಕ್ತರು ಶಾರದೀಯ ನವರಾತ್ರಿಗಾಗಿ ಬಹಳ ಉತ್ಸುಕತೆಯಿಂದ ಕಾಯುತ್ತಾರೆ. ದುರ್ಗಾ ದೇವಿಯು ಭೂಮಿಗೆ ಯಾವಾಗ ಆಗಮಿಸುತ್ತಾಳೆ ಅಂತಾ ನೋಡಲು ಮಾತೆಯ ಭಕ್ತರು ವರ್ಷವಿಡೀ ಕಾಯುತ್ತಾರೆ. ಶಾರದೀಯ ನವರಾತ್ರಿಯ ಸಮಯದಲ್ಲಿ ಮಾತಾ ರಾಣಿ ಭೂಮಿಗೆ ಬಂದು 9 ದಿನಗಳ ಕಾಲ ಇಲ್ಲಿ ನೆಲೆಸುತ್ತಾಳೆಂದು ನಂಬಲಾಗಿದೆ. ನವರಾತ್ರಿಯ ೯ ದಿನಗಳ ಕಾಲ ದುರ್ಗಾದೇವಿಗೆ ಭವ್ಯವಾಗಿ ಅಲಂಕರಿಸಲು ಇದುವೇ ಕಾರಣ. ದೇವಸ್ಥಾನಗಳಲ್ಲೂ ದೇವಿಗೆ ವಿಶೇಷ ಪೂಜೆ ನಡೆಯುತ್ತದೆ. ಅಷ್ಟೇ ಅಲ್ಲ ಮಾತಾ ರಾಣಿಯನ್ನು ಸ್ವಾಗತಿಸಲು ಜನರು ತಮ್ಮ ಮನೆಗಳಲ್ಲಿ ಕಲಶವನ್ನು ಸ್ಥಾಪಿಸುತ್ತಾರೆ, ಶಾಶ್ವತ ಜ್ಯೋತಿ ಬೆಳಗಿಸುತ್ತಾರೆ. 9 ದಿನಗಳ ಕಾಲ ಶಾಸ್ತ್ರೋಕ್ತವಾಗಿ ಮಾತೃದೇವತೆಯನ್ನು ಪೂಜಿಸುತ್ತಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

ಈ ವರ್ಷ ಶಾರದೀಯ ನವರಾತ್ರಿಯು ಅಕ್ಟೋಬರ್ 3ರಿಂದ ಪ್ರಾರಂಭವಾಗಿ ಅಕ್ಟೋಬರ್ 12ರಂದು ದುರ್ಗಾ ವಿಸರ್ಜನದೊಂದಿಗೆ ಕೊನೆಗೊಳ್ಳಲಿದೆ. ದುರ್ಗಾ ವಿಸರ್ಜನೆಯ ಜೊತೆಗೆ ವಿಜಯದಶಮಿ ಅಂದರೆ ದಸರಾವನ್ನು ಶಾರದೀಯ ನವರಾತ್ರಿಯ ಕೊನೆಯ ದಿನದಂದು ಆಚರಿಸಲಾಗುತ್ತದೆ. ಶಾರದೀಯ ನವರಾತ್ರಿಯು ಅಶ್ವಿನ ಮಾಸದ ಶುಕ್ಲ ಪಕ್ಷದ ಪ್ರತಿಪದ ದಿನಾಂಕದಿಂದ ಪ್ರಾರಂಭವಾಗುತ್ತದೆ. ಮಾತೃದೇವತೆಯನ್ನು ಮೆಚ್ಚಿಸಲು ಭಕ್ತರು ವಿವಿಧ ಕ್ರಮಗಳನ್ನು ಅಳವಡಿಸಿಕೊಳ್ಳುತ್ತಾರೆ. ಹೀಗಾಗಿ ಇಂದು ನಾವು ನವರಾತ್ರಿಯ ಮೊದಲ ದಿನದಂದು ದುರ್ಗಾದೇವಿಯನ್ನು ಮೆಚ್ಚಿಸಲು ಮತ್ತು ತಾಯಿಯ ಆಶೀರ್ವಾದ ಪಡೆಯಲು ಮಾಡಬಹುದಾದ ಕೆಲವು ಪರಿಹಾರ ಕ್ರಮಗಳ ಬಗ್ಗೆ ತಿಳಿಸಲಿದ್ದೇವೆ.

2 /6

ನವರಾತ್ರಿಯ ಆರಂಭದಲ್ಲಿ ನಿಮ್ಮ ಮನೆಯಲ್ಲಿ ಪಾರಿಜಾತ ಗಿಡವನ್ನು ನೆಡಿ. ಈ ಸಸ್ಯವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ನವರಾತ್ರಿಯ ಸಮಯದಲ್ಲಿ ಪಾರಿಜಾತ ಗಿಡವನ್ನು ನೆಡುವುದರಿಂದ ಮನೆಗೆ ಸಂತೋಷ, ಶಾಂತಿ ಮತ್ತು ಸಮೃದ್ಧಿ ದೊರೆಯಲಿದೆ.   

3 /6

ಬಾಳೆ ಗಿಡವನ್ನು ಹಿಂದೂ ಧರ್ಮದಲ್ಲಿ ಪೂಜ್ಯವೆಂದು ಪರಿಗಣಿಸಲಾಗಿದೆ. ನವರಾತ್ರಿಯಲ್ಲಿ ಬಾಳೆಗಿಡವನ್ನು ನೆಟ್ಟು ಪೂಜಿಸುವುದರಿಂದ ಮನೆಯಲ್ಲಿ ಸುಖ-ಸಮೃದ್ಧಿ ನೆಲೆಸುತ್ತದೆ. ನವರಾತ್ರಿಯಲ್ಲಿ ಬಾಳೆಗಿಡವನ್ನು ನೆಡುವುದು ಶುಭ ಮತ್ತು ಫಲಪ್ರದವಾಗಿದೆ.

4 /6

ತುಳಸಿ ಗಿಡ ಇರುವ ಮನೆಯಲ್ಲಿ ಸದಾ ಧನಾತ್ಮಕ ಶಕ್ತಿ ಇರುತ್ತದೆ. ನಿಮ್ಮ ಮನೆ ಅಥವಾ ಅಂಗಳದಲ್ಲಿ ತುಳಸಿ ಗಿಡವನ್ನು ನೆಟ್ಟಿಲ್ಲದಿದ್ದರೆ, ನವರಾತ್ರಿಯಲ್ಲಿ ಅದನ್ನು ಖಂಡಿತವಾಗಿ ನೆಡಬೇಕು. ತುಳಸಿಯನ್ನು ಹಚ್ಚಿ ಪೂಜಿಸುವುದರಿಂದ ದುರ್ಗಾ ಮಾತೆ ಪ್ರಸನ್ನಳಾಗುತ್ತಾಳೆ ಮತ್ತು ಆ ವ್ಯಕ್ತಿಯ ಮೇಲೆ ತನ್ನ ಆಶೀರ್ವಾದವನ್ನು ನೀಡುತ್ತಾಳೆ. 

5 /6

ಶಾರದೀಯ ನವರಾತ್ರಿಯ ಮೊದಲ ದಿನ ಶಂಖಪುಷ್ಪಿ ಗಿಡ ನೆಡಬೇಕು. ಅಲ್ಲದೆ ನವರಾತ್ರಿಯ ಸಮಯದಲ್ಲಿ ಪೂಜೆಯ ಸಮಯದಲ್ಲಿ ಮಾತಾ ರಾಣಿಯ ಪಾದಗಳಿಗೆ ಶಂಖಪುಷ್ಪಿ ಹೂವುಗಳನ್ನು ಅರ್ಪಿಸಿ. ಮಾತೆ ದುರ್ಗೆಗೆ ಈ ಹೂವನ್ನು ಅರ್ಪಿಸುವುದರಿಂದ ಭಕ್ತರ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ ಎಂದು ಹೇಳಲಾಗುತ್ತದೆ.

6 /6

ದುರ್ಗಾದೇವಿಗೆ ಕೆಂಪು ಗುಲಾಬಿ ಹೂವು ಎಂದರೆ ತುಂಬಾ ಇಷ್ಟ. ನವರಾತ್ರಿಯ ಸಮಯದಲ್ಲಿ ತಾಯಿ ದೇವಿಗೆ ಕೆಂಪು ಗುಲಾಬಿ ಹೂವುಗಳನ್ನು ಅರ್ಪಿಸಿ, ಮಾತಾ ರಾಣಿ ನಿಮ್ಮ ಎಲ್ಲಾ ಆಸೆಗಳನ್ನು ಶೀಘ್ರದಲ್ಲೇ ಪೂರೈಸುತ್ತಾಳೆ. ಇದರೊಂದಿಗೆ ನವರಾತ್ರಿಯ ಸಮಯದಲ್ಲಿ ನಿಮ್ಮ ಮನೆಯಲ್ಲಿ ಕೆಂಪು ಗುಲಾಬಿ ಹೂವಿನ ಗಿಡವನ್ನೂ ನೆಡಬೇಕು. ಮನೆಯಲ್ಲಿ ಯಾವಾಗಲೂ ಶಾಂತಿ ಮತ್ತು ಸಮೃದ್ಧಿ ಇರುತ್ತದೆ. (ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆ ಮತ್ತು ಜಾನಪದ ನಂಬಿಕೆಗಳನ್ನು ಆಧರಿಸಿದೆ. ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. Zee Kannada News ಇದನ್ನು ದೃಢಪಡಿಸುವುದಿಲ್ಲ.)