ನವದೆಹಲಿ: ಇಂಗ್ಲೆಂಡ್ ವಿರುದ್ಧ ಭಾರತ ಇನ್ನಿಂಗ್ಸ್ ಮತ್ತು 76 ರನ್‌ಗಳ ಹೀನಾಯ ಸೋಲಿನ ನಂತರ, ಮಾಜಿ ನಾಯಕ ದಿಲೀಪ್ ವೆಂಗ್‌ಸರ್ಕರ್ ಅವರು ಲಂಡನ್‌ನಲ್ಲಿ ಸೆಪ್ಟೆಂಬರ್ 2 ರಂದು ಆರಂಭವಾಗಲಿರುವ ನಾಲ್ಕನೇ ಟೆಸ್ಟ್‌ಗೆ ಸೂರ್ಯಕುಮಾರ್ ಯಾದವ್ ಅವರನ್ನು ಸೇರಿಸಿಕೊಳ್ಳುವಂತೆ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಸ್ಕೋರ್ ಬೋರ್ಡ್ ಒತ್ತಡದಿಂದಾಗಿ ತಂಡದ ಬ್ಯಾಟಿಂಗ್ ವಿಫಲವಾಯಿತು -ವಿರಾಟ್ ಕೊಹ್ಲಿ


ಮಧ್ಯಮ ಕ್ರಮಾಂಕದಲ್ಲಿ ರಿಷಬ್ ಪಂತ್, ರವೀಂದ್ರ ಜಡೇಜಾ ಮತ್ತು ಅಜಿಂಕ್ಯ ರಹಾನೆ ಅವರಂತಹ ಆಟಗಾರರು ನಿರೀಕ್ಷಿತ ಪ್ರದರ್ಶನವನ್ನು ನೀಡದಿರುವ ಹಿನ್ನಲೆಯಲ್ಲಿ ಭಾರತ ತಂಡವು ಬ್ಯಾಟಿಂಗ್ ನಲ್ಲಿ ತೀವ್ರ ಹಿನ್ನಡೆಯನ್ನು ಅನುಭವಿಸಿದೆ.


ಈ ಹಿನ್ನಲೆಯಲ್ಲಿ ಪಿಟಿಐ ಸುದ್ದಿಸಂಸ್ಥೆಯೊಂದಿಗಿನ ವಿಶೇಷ ಸಂವಾದದಲ್ಲಿ ಮಾತನಾಡಿದ ವೆಂಗಸರ್ಕರ್ ಅವರು ಭಾರತವು ಒಬ್ಬ ಬೌಲರ್ ಅನ್ನು ಕೈಬಿಡಬೇಕು ಮತ್ತು ಸೂರ್ಯಕುಮಾರ (Suryakumar Yadav) ನನ್ನು ಹೆಚ್ಚುವರಿ ಬ್ಯಾಟ್ಸ್‌ಮನ್‌ನಂತೆ ಹನುಮ ವಿಹಾರಿಗಿಂತ ಮುಂಚಿತವಾಗಿ ತರಬೇಕು ಎಂದು ಹೇಳಿದರು.


ಇದನ್ನೂ ಓದಿ:Tokyo Paralympics: ಖಾತೆ ತೆರೆದ ಭಾರತ; ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ ಭಾವಿನಾ ಪಟೇಲ್


"ಹನುಮ ವಿಹಾರಿಗಿಂತ ಮುಂಚಿತವಾಗಿ ಸೂರ್ಯಕುಮಾರ್ ಯಾದವ್ ಅವರನ್ನು ಸೇರಿಸಿಕೊಳ್ಳುವ ಮೂಲಕ ನಮ್ಮ ಬ್ಯಾಟಿಂಗ್ ನ್ನು ಬಲಪಡಿಸಬೇಕು ಎಂದು ನಾನು ದೃಢವಾಗಿ ನಂಬುತ್ತೇನೆ.ಒಬ್ಬ ಬೌಲರ್ ಅನ್ನು ಕೈಬಿಡಬೇಕು ಮತ್ತು ಆರು ಬ್ಯಾಟ್ಸ್‌ಮನ್‌ಗಳೊಂದಿಗೆ ಕಣಕ್ಕೆ ಇಳಿಯಬೇಕು "ಎಂದು ವೆಂಗ್‌ಸರ್ಕರ್ (Dilip Vengsarkar) ಪಿಟಿಐಗೆ ತಿಳಿಸಿದರು.


ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ 44 ಕ್ಕೂ ಅಧಿಕ ಸರಾಸರಿಯನ್ನು ಹೊಂದಿರುವ ಸೂರ್ಯ, ಮುಂದಿನ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ ವ್ಯತ್ಯಾಸವನ್ನುಂಟು ಮಾಡುವ ಪ್ರತಿಭೆ ಮತ್ತು ಮನೋಧರ್ಮವನ್ನು ಹೊಂದಿದ್ದಾರೆ ಎಂದು ವೆಂಗ್ ಸರ್ಕಾರ ವಿಶ್ವಾಸ ವ್ಯಕ್ತಪಡಿಸಿದರು.


ಕೌಶಲ್ಯದ ದೃಷ್ಟಿಯಿಂದ ಸೂರ್ಯನು ಈ ಭಾರತೀಯ ತಂಡದಲ್ಲಿ ಅತ್ಯುತ್ತಮವಾದವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬಹುದು ಮತ್ತು ಅವನು ಸ್ವಲ್ಪ ಸಮಯದವರೆಗೆ ಇರುವುದರಿಂದ ತಡವಾಗುವ ಮುನ್ನ ಅವನನ್ನು ಸೇರಿಸಿಕೊಳ್ಳಬೇಕು" ಎಂದು ವೆಂಗ್‌ಸರ್ಕರ್ ಹೇಳಿದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.