KL Rahul in Ghati Subramanya : ಭಾರತದ ಕ್ರಿಕೆಟಿಗ ಕೆ.ಎಲ್.ರಾಹುಲ್ ದಂಪತಿ ಇಂದು ಪ್ರಸಿದ್ಧ ಘಾಟಿ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ‌ ನೀಡಿ ಪೂಜೆ ಸಲ್ಲಿಸಿದ್ದಾರೆ. ಇಂದು ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಕೆ.ಎಲ್.ರಾಹುಲ್ ದಂಪತಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಸದ್ಯ ಗಾಯದ ಸಮಸ್ಯೆಯಿಂದ ಟೀಮ್  ಇಂಡಿಯಾದಿಂದ ಹೊರಗುಳಿದಿರುವ ಕೆ.ಎಲ್.ರಾಹುಲ್ ರೆಸ್ಟ್ ನಲ್ಲಿದ್ದಾರೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಉತ್ತರಾಖಂಡ್‌ನಲ್ಲಿ ತಲೈವಾ ಡಿವೈನ್‌ ಜರ್ನಿ : ಮಹಾವತಾರ್ ಬಾಬಾ ಗುಹೆ ತಲುಪುವುದು ಎಷ್ಟು ಕಷ್ಟ ಗೊತ್ತಾ.?


ಏಷ್ಯಾ ಕಪ್ ಪಂದ್ಯಗಳು ಪ್ರಾರಂಭವಾಗಿ ಇಂದು ಬದ್ದ ವೈರಿ ಪಾಕಿಸ್ತಾನದ ಜೊತೆ ಹೈವೋಲ್ಟೇಜ್ ಮ್ಯಾಚ್‌ನಲ್ಲೂ ರಾಹುಲ್ ಅಲಭ್ಯರಾಗಿದ್ದಾರೆ. ಏಷ್ಯಾ ಕಪ್ ನ ಎರಡು ಪಂದ್ಯಗಳಿಂದ ರಾಹುಲ್ ಹೊರಗುಳಿಯಲಿದ್ದು, ಮೂರನೆ ಮ್ಯಾಚ್ ಗೆ ಟೀಮ್ ಇಂಡಿಯಾವನ್ನು ಸೇರಿಕೊಳ್ಳಲಿದ್ದಾರೆ ಎನ್ನಲಾಗ್ತಿದೆ.


ಕರ್ನಾಟಕದವರಾದ ಕೆ.ಎಲ್.ರಾಹುಲ್ ರೆಸ್ಟ್ ವೇಳೆ ಹೆಂಡತಿ ಜೊತೆ ಶ್ರಾವಣ ಶನಿವಾರದ ವಿಶೇಷ ಪೂಜೆಗೆ ಆಗಮಿಸಿದ್ದರು. ಇದು ಶ್ರಾವಣ ಮಾಸದ ಮೂರನೇ ಶನಿವಾರವಾಗಿದ್ದು, ಕಡೆಯ ಶನಿವಾರವೂ ಸಹ ಘಾಟಿ ಕ್ಷೇತ್ರಕ್ಕೆ ಹೆಚ್ಚಿನ‌ ಭಕ್ತರು ಆಗಮಿಸಿಲಿದ್ದಾರೆ. ಶ್ರಾವಣ ಮಾಸದ ಪ್ರಯುಕ್ತ ಕ್ರಿಕೆಟಿಗ ಕೆ.ಎಲ್.ರಾಹುಲ್ ಘಾಟಿ ಸುಬ್ರಹ್ಮಣ್ಯ ದೇವರಿಗೆ ಪೂಜೆ ಸಲ್ಲಿಸಿ, ಇಷ್ಟಾರ್ಥ ಸಿದ್ದಿಗೆ ಸುಬ್ರಹ್ಮಣ್ಯ ದೇವರನ್ನು ಪ್ರಾರ್ಥಿಸಿದ್ದಾರೆ.


ಇದನ್ನೂ ಓದಿ: ಗಂಗೂಲಿ ಪಾತ್ರದಲ್ಲಿ ಆಯುಷ್ಮಾನ್.. ಶೀಘ್ರದಲ್ಲೇ ಸೆಟ್ಟೇರಲಿದೆ ದಾದಾ ಬಯೋಪಿಕ್.!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.