ನವದೆಹಲಿ: ದೀಪಾವಳಿ ಹಬ್ಬದಂದು ಜನರು ತಮ್ಮ ಮನೆ ಮತ್ತು ಕಚೇರಿಗಳನ್ನು ಬಹಳ ಉತ್ಸಾಹದಿಂದ ಅಲಂಕರಿಸುತ್ತಾರೆ. ಹೆಚ್ಚಿನ ಮಹಿಳೆಯರು ಈ ದಿನದಂದು ಮನೆಯ ಅಂಗಳ ಮತ್ತು ಮುಖ್ಯ ದ್ವಾರದಲ್ಲಿ ರಂಗೋಲಿಯನ್ನು ಬಿಡಿಸುತ್ತಾರೆ. ಇದು ಮನೆಯ ಸೌಂದರ್ಯವನ್ನು ಹೆಚ್ಚಿಸುವುದಲ್ಲದೆ, ವಾಸ್ತು ಶಾಸ್ತ್ರದ ಪ್ರಕಾರ, ರಂಗೋಲಿ ಕೂಡ ನಮ್ಮ ಜೀವನದ ಮೇಲೆ ವ್ಯಾಪಕ ಪರಿಣಾಮ ಬೀರುತ್ತದೆ.


COMMERCIAL BREAK
SCROLL TO CONTINUE READING

ಈ ಬಾರಿ ನವೆಂಬರ್ 14 ರಂದು ದೀಪಾವಳಿ ಹಬ್ಬ ಆಚರಿಸಲಾಗುತ್ತಿದೆ ಮತ್ತು ನಿಮ್ಮ ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಸಾಧನೆಗಳಿಗೆ ಯಾವುದೇ ಕೊರತೆಯಾಗಬಾರದು ಎಂದು ನೀವು ಬಯಸುತ್ತಿದ್ದರೆ, ನೀವು ಈ ಬಾರಿ ವಾಸ್ತು ಪ್ರಕಾರ ರಂಗೋಲಿಯನ್ನು ಬಿಡಿಸಿ. ಅದಕ್ಕಾಗಿಯೇ ಈ ದೀಪಾವಳಿಯ ವಾಸ್ತುಶಾಸ್ತ್ರವನ್ನು ಗಮನದಲ್ಲಿಟ್ಟುಕೊಂಡು ನೀವು ಯಾವ ರೀತಿಯ ರಂಗೋಲಿ ಬಿಡಿಸಬೇಕು ಎಂದು ನಾವು ನಿಮಗೆ ಹೇಳಲಿದ್ದೇವೆ.


ಇದನ್ನು ಓದಿ- Diwali 2020: ಈ 4 ರಾಶಿ ಜನರ ಪಾಲಿಗೆ 'ಅಚ್ಛೆ ದೀನ್'ಗಳು ಆರಂಭ, ನಿಮ್ಮ ರಾಶಿ ಯಾವುದು?


ಪೂರ್ವಮುಖಿ ಮನೆ
ನಿಮ್ಮ ಮನೆ ಪೂರ್ವಮುಖಿಯಾಗಿದ್ದರೆ ನೀವು ಅಂಡಾಕಾರದ ವಿನ್ಯಾಸದಲ್ಲಿ ರಂಗೋಲಿಯನ್ನು ಬಿಡಿಸಬೇಕು. ಏಕೆಂದರೆ ಮನೆಯಲ್ಲಿ ಸೌಹಾರ್ದಯುತ ವಾತಾವರಣದ ಜೊತೆಗೆ ಗೌರವವೂ ಹೆಚ್ಚಾಗುತ್ತದೆ. ಈ ದಿಕ್ಕಿನಲ್ಲಿ ರಂಗೋಲಿ ಮಾಡಲು ಕೆಂಪು, ಹಳದಿ, ಹಸಿರು, ಗುಲಾಬಿ, ಕಿತ್ತಳೆ ಬಣ್ಣಗಳ ಬಳಕೆ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ.


ಇದನ್ನು ಓದಿ- Dhanteras 2020: ಪೂಜೆ ಹಾಗೂ ಖರೀದಿಯ ಶುಭ ಮುಹೂರ್ತ, ಈ ದಿನ ದಾನಕ್ಕು ವಿಶೇಷ ಮಹತ್ವ


ಪಶ್ಚಿಮಮುಖಿ ಮನೆ
ಈ ದಿಕ್ಕಿನಲ್ಲಿ ನೀವು ರಂಗೋಲಿ ಮಾಡಲು ಬಯಸಿದರೆ, ಐದು ಕೋನಗಳನ್ನು ಹೊಂದಿರುವ ರಂಗೋಲಿ ಪರಿಪೂರ್ಣವಾಗಿರುತ್ತದೆ. ಅಲ್ಲದೆ, ಇದಕ್ಕಾಗಿ ಚಿನ್ನ ಮತ್ತು ಬಿಳಿ ಬಣ್ಣಗಳನ್ನು ಬಳಸುವುದು ಸೂಕ್ತವಾಗಿದೆ. ಇದಲ್ಲದೆ , ವೃತ್ತಾಕಾರದ ರಂಗೋಲಿಯನ್ನೂ ಸಹ ನೀವು ತಯಾರಿಸಬಹುದು, ಇದಕ್ಕಾಗಿ ಕೆಂಪು, ಹಳದಿ, ಕಂದು, ತಿಳಿ ಹಸಿರು ಮುಂತಾದ ಬಣ್ಣಗಳನ್ನು ಸಹ ಬಳಸಬಹುದು.


ಇದನ್ನು ಓದಿ-Diwali 2020: ಈ ದೀಪಾವಳಿ ವಾಸ್ತುಶಾಸ್ತ್ರದ ಪ್ರಕಾರ ತೋರಣ ಹಚ್ಚಿ, ಸಫಲತೆ ಹಾಗೂ ಸಮೃದ್ಧಿಯ ಬಾಗಿಲು ತೆರೆಯಿರಿ


ಉತ್ತರಮುಖಿ ಮನೆ 
ಮನೆಯ ಮುಖ್ಯ ಬಾಗಿಲು ಉತ್ತರ ದಿಕ್ಕಿನಲ್ಲಿದ್ದರೆ, ಅಲೆಯ ವಿನ್ಯಾಸದೊಂದಿಗೆ ರಂಗೋಲಿ ಬಿಡಿಸಿ ಮತ್ತು ಹಳದಿ, ಹಸಿರು, ಆಕಾಶ ಮತ್ತು ನೀಲಿ ಬಣ್ಣಗಳನ್ನು ಸಹ ಬಳಸಿ. ಇದು ಶುಭ ಫಲಿತಾಂಶಗಳಿಗೆ ಕಾರಣವಾಗುತ್ತದೆ.


ಇದನ್ನು ಓದಿ-Dhanteras 2020: ಧನತ್ರಯೋದಶಿಯ ದಿನ ಅಪ್ಪಿ-ತಪ್ಪಿಯೂ ಈ ವಸ್ತುಗಳನ್ನು ಖರೀದಿಸಬೇಡಿ, ಶುಭ ಎನ್ನಲಾಗಿದೆ


ದಕ್ಷಿಣಮುಖಿ ಮನೆ
ಈ ದಿಕ್ಕಿನಲ್ಲಿ, ಆಯತಾಕಾರದ ಆಕಾರದ ರಂಗೋಲಿ ತುಂಬಾ ಒಳ್ಳೆಯದು. ಮತ್ತು ಬಣ್ಣಗಳಲ್ಲಿ ನೀವು ಗಾಢ ಕೆಂಪು, ಕಿತ್ತಳೆ, ಗುಲಾಬಿ ಮತ್ತು ನೇರಳೆ ಬಣ್ಣಗಳನ್ನು ಬಳಸಬಹುದು. ಇದು ಜೀವನದಲ್ಲಿ ಸುರಕ್ಷತೆ ಮತ್ತು ವಿಶ್ವಾಸವನ್ನು ಹೆಚ್ಚಿಸುತ್ತದೆ.


ಇದನ್ನು ಓದಿ- ಈ ಬಾರಿಯ ಧನತ್ರಯೋದಶಿಯಂದು ನಿಮ್ಮ ರಾಶಿಗೆ ಅನುಗುಣವಾಗಿ ಖರೀದಿ ಮಾಡಿ, ಸಿಗಲಿದೆ ಶುಭ ಲಾಭ


ನಕಾರಾತ್ಮಕ ಶಕ್ತಿ ದೂರವಾಗುತ್ತದೆ
ರಂಗೋಲಿಯನ್ನು ಮನೆ ಅಲಂಕಾರಕ್ಕೆ ಮಾತ್ರವಲ್ಲದೆ ಅನೇಕ ಪ್ರಯೋಜನಗಳಿಗಾಗಿ ಬಿಡಿಸಲಾಗುತ್ತದೆ ಎನ್ನಲಾಗಿದೆ. ಇದು ಮನೆ ಮತ್ತು ಅದರ ಸುತ್ತಮುತ್ತಲಿನ ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕುತ್ತದೆ ಎಂದು ಹೇಳಲಾಗುತ್ತದೆ. ಮತ್ತು ಧನಾತ್ಮಕ ಶಕ್ತಿಯು ಹರಡುತ್ತದೆ.ಇದೆ ವೇಳೆ  ಈ ಬಣ್ಣಗಳನ್ನು ಶುಭದ ಸಂಕೇತವೆಂದು ಪರಿಗಣಿಸಲಾಗುತ್ತದೆ, ಇದರಿಂದ ದೇವರು ಮತ್ತು ದೇವತೆಗಳ ಆಶೀರ್ವಾದವು ಮನೆಯಲ್ಲಿಯೇ ಇರುತ್ತದೆ. ಅದಕ್ಕಾಗಿಯೇ ಬಣ್ಣಗಳಲ್ಲದೆ, ಹಿಟ್ಟು, ಅಕ್ಕಿ, ಅರಿಶಿನ, ಕುಂಕುಮ, ಹೂ-ಎಲೆಗಳು ಮತ್ತು ಇತರ ರೀತಿಯ ಬಣ್ಣಗಳನ್ನು ಸಹ ರಂಗೋಲಿ ತಯಾರಿಸಲು ಬಳಸಲಾಗುತ್ತದೆ.