ನವದೆಹಲಿ: ದೀಪಾವಳಿ ಹಬ್ಬಕ್ಕೆ ದೇಶದ ಜನತೆಗೆ ಟೀಂ ಇಂಡಿಯಾ ಆಟಗಾರರ ಭರ್ಜರಿ ಗಿಫ್ಟ್ ನೀಡಿದ್ದಾರೆ. ಒಂದು ದಿನ ಮುಂಚಿತವಾಗಿಯೇ ಮೆಲ್ಬೋರ್ನ್ ಮೈದಾನದಲ್ಲಿ ಭಾರತೀಯ ಆಟಗಾರರು ದೀಪಾವಳಿ ಆಚರಿಸಿದ್ದಾರೆ. ಭಾನುವಾರ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನಕ್ಕೆ ಮಣ್ಣುಮುಕ್ಕಿಸುವ ಮೂಲಕ ಟೀಂ ಇಂಡಿಯಾ ಕಳೆದ ಟಿ-20 ವಿಶ್ವಕಪ್ ಸೋಲಿನ ಸೇಡು ತೀರಿಸಿಕೊಂಡಿದೆ.


COMMERCIAL BREAK
SCROLL TO CONTINUE READING

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಪಾಕಿಸ್ತಾನ ನಿಗದಿತ 20 ಓವರ್‍ಗಳಲ್ಲಿ 159 ರನ್ ಗಳಿಸಿತು. ಸವಾಲಿನ ಟಾರ್ಗೆಟ್ ಬೆನ್ನುಹತ್ತಿದ ಭಾರತ ತಂಡ ಕೊನೆ ಎಸೆತದವರೆಗೂ ಹೋರಾಟ ನಡೆಸಿ ವಿರೋಚಿತ ಗೆಲುವು ಸಾಧಿಸಿತು. ಸ್ಫೋಟಕ ಆಟವಾಡಿದ ವಿರಾಟ್ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ ತಂಡಕ್ಕೆ ಅಮೋಘ ಗೆಲುವು ತಂದುಕೊಟ್ಟು ಸಂಭ್ರಮಿಸಿದರು.  


ಕೊನೆ ಎಸೆತದವರೆಗೂ ಗೆಲುವಿಗಾಗಿ ಹೋರಾಡಿದ ಪಾಕ್ ತಂಡ ತಾನು ಮಾಡಿಕೊಂಡ ಎಡವಟ್ಟುಗಳಿಂದಲೇ ಸೋಲು ಕಾಣಬೇಕಾಯಿತು. ಈ ಮಹತ್ವದ ಪಂದ್ಯದ ಗೆಲುವಿನ ಬಳಿಕ ಟೀಂ ಇಂಡಿಯಾ ಸಂತಸದ ಅಲೆಯಲ್ಲಿ ತೇಲಾಡಿದರೆ, ಅತ್ತ ಪಾಕ್ ಆಟಗಾರರು ಡ್ರೆಸ್ಸಿಂಗ್ ರೂಂನಲ್ಲಿ ತಲೆ ಮೇಲೆ ಕೈಹೊತ್ತು ಕುಳಿತ್ತಿದ್ದರು. ಸೋಲಿನ ಶಾಕ್‍ನಿಂದ ಕಂಗೆಟ್ಟಿರುವ ಪಾಕ್ ಆಟಗಾರರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.


ಇದನ್ನೂ ಓದಿ: T20 World Cup 2022: ಟೀಂ ಇಂಡಿಯಾ ಮೋಸದಿಂದ ಗೆದ್ದಿದೆ ಎಂದ ಪಾಕಿಸ್ತಾನ..!


ಬಾಬರ್ ಅಜಮ್ ತಂಡದ ಆಟಗಾರರನ್ನು ಸಮಾಧಾನಪಡಿಸಿದ್ದಾರೆ. ‘ನಾವು ಸೋತಿದ್ದು ಒಂದೇ ಒಂದು ಪಂದ್ಯ, ಟಿ-20 ವಿಶ್ವಕಪ್ ಅಲ್ಲ. ಪ್ರತಿಯೊಬ್ಬರು ಚೆನ್ನಾಗಿ ಆಡಿದ್ದೀರಿ. ಆದರೆ ಕೆಲವು ತಪ್ಪುಗಳಿಂದ ನಾವು ಸೋಲಬೇಕಾಯಿತು. ಮುಂದೆ ಇನ್ನೂ ನಮಗೆ ದೊಡ್ಡ ದೊಡ್ಡ ಪಂದ್ಯಗಳಿವೆ, ನಾವು ಅದಕ್ಕಾಗಿ ಸಿದ್ಧರಾಗಬೇಕಿದೆ. ಹೀಗಾಗಿ ಯಾರೂ ಧೈರ್ಯ ಕಳೆದುಕೊಳ್ಳಬೇಡಿ. ತಂಡದ ಸೋಲಿಗೆ ಕೇವಲ ಒಬ್ಬರತ್ತ ಬೆರಳು ಮಾಡಲು ಬರುವುದಿಲ್ಲ. ಇಲ್ಲಿ ಇಡೀ ತಂಡವೇ ಸೋತಿದೆ. ಹೀಗಾಗಿ ನಾವು ಮುಂದಿನ ಪಂದ್ಯಗಳಿಗೆ ಭರ್ಜರಿಯಾಗಿ ತಯಾರಿ ನಡೆಸಬೇಕಿದೆ ಧೈರ್ಯವಾಗಿರಿ’ ಅಂತಾ ಹೇಳಿದ್ದಾರೆ.    


ಇದನ್ನೂ ಓದಿ: T20 World Cup 2022: ಪಾಕಿಸ್ತಾನ ತಂಡಕ್ಕೆ ದೊಡ್ಡ ಅನ್ಯಾಯವಾಗಿದೆ ಎಂದ ರಮೀಝ್ ರಾಜಾ..!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ