ನವದೆಹಲಿ: ಕೇರಳದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಅಂತರ್ ಧರ್ಮೀಯ ದಂಪತಿಗಳು ಕೇರಳದ ದೇವಸ್ಥಾನದಲ್ಲಿ ಸಪ್ತಪದಿ ತುಳಿಯಲು ಸಜ್ಜಾಗುತ್ತಿದ್ದ ಕೆಲವೇ ನಿಮಿಷಗಳ ಮೊದಲು ವಧುವನ್ನು ಪೊಲೀಸರು ಬಂಧಿಸಿ ಬಲವಂತವಾಗಿ ಕರೆದೊಯ್ದಿದ್ದಾರೆ.


COMMERCIAL BREAK
SCROLL TO CONTINUE READING

ವರದಿಗಳ ಪ್ರಕಾರ ಜೂನ್ 18ರಂದು (ಭಾನುವಾರ) ಕೇರಳದ ಕೋವಲಂ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಈ ಇಡೀ ಘಟನೆಯು ಥೇಟ್ ಸಿನಿಮಾ ರೀತಿಯಲ್ಲಿ ನಡೆದಿದೆ. ವರನ ಬಿಟ್ಟು ತನಗೆ ಹೋಗಲು ಇಷ್ಟವಿಲ್ಲವೆಂದು ಕಿರುಚಾಡುತ್ತಾ ವಧು ರಂಪ ಮಾಡುತ್ತಿದ್ದಳು. ಈ ವೇಳೆ ಕೋವಲಂ ಪೊಲೀಸ್ ಠಾಣೆಯ ಸಿಬ್ಬಂದಿ ಖಾಸಗಿ ವಾಹನದ ಕಡೆಗೆ ಆಕೆಯನ್ನು ಹಿಡಿದು ತಳ್ಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಪೊಲೀಸರು ಆಕೆಯನ್ನು ವರನ ಬಳಿ ಹೋಗದಂತೆ ತಡೆದು ಬಲವಂತವಾಗಿ ಕರೆದೊಯ್ದಿದ್ದಾರೆ.


ಇದನ್ನೂ ಓದಿ: Viral Video: ಬೋಳು ತಲೆಯ ವಿಷಯ ಮುಚ್ಚಿಟ್ಟು ಮದುವೆಗೆ ಸಿದ್ಧನಾಗಿದ್ದ ವರನಿಗೆ ಏನಾಯ್ತು ನೋಡಿ!


Viral Video: ನಡುರಸ್ತೆಯಲ್ಲೇ ಜಡೆಜಗಳ; ಪರಸ್ಪರ ಹೊಡೆದಾಡಿಕೊಂಡ ಕಾಲೇಜು ಯುವತಿಯರು!


ಈ ಬಗ್ಗೆ ಮಾತನಾಡಿರುವ ಆಲಪ್ಪುಳ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿ, ‘ಕಾಯಂಕುಲಂ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ವ್ಯಕ್ತಿಯ ಬಗ್ಗೆ ದೂರು ದಾಖಲಾಗಿದ್ದು, ಪ್ರಕರಣ ಸಂಬಂಧ ಮಹಿಳೆಯನ್ನು ಅಲ್ಲಿನ ನ್ಯಾಯಾಲಯಕ್ಕೆ ಹಾಜರುಪಡಿಸಬೇಕಾಯಿತು’ ಎಂದು ತಿಳಿಸಿದ್ದಾರೆ.


‘ಮದುವೆಗೆ ಸಜ್ಜಾಗಿದ್ದ ಮಹಿಳೆಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಹೀಗಾಗಿ ಅವರು ತಮ್ಮ ಕರ್ತವ್ಯವನ್ನು ನಿರ್ವಹಿಸಿದ್ದಾರೆ. ಆಕೆ ತಾನು ವರನೊಂದಿಗೆ ಹೋಗಬೇಕೆಂದು ನ್ಯಾಯಾಲಯಕ್ಕೆ ತಿಳಿಸಿದಳು. ನಂತರ ಅವನೊಂದಿಗೆ ಹೋಗಲು ಅವಕಾಶ ಮಾಡಿಕೊಡಲಾಯಿತು’ ಎಂದು ಅಧಿಕಾರಿ ಹೇಳಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ