ಕರ್ನಾಟಕವನ್ನು ಜೂಲಿಯಸ್ ಸಿಜರ್ ಗೆ ಡೈಲಾಗ್ ಗೆ ಹೋಲಿಸಿದ ಒಮರ್ ಅಬ್ದುಲ್ಲಾ

      

Last Updated : May 15, 2018, 12:47 PM IST
ಕರ್ನಾಟಕವನ್ನು ಜೂಲಿಯಸ್ ಸಿಜರ್ ಗೆ ಡೈಲಾಗ್ ಗೆ ಹೋಲಿಸಿದ ಒಮರ್ ಅಬ್ದುಲ್ಲಾ  title=

ನವದೆಹಲಿ: ಕರ್ನಾಟಕದ ಚುನಾವಣೆಯಲ್ಲಿ ಬಿಜೆಪಿ ಮುನ್ನಡೆ ಸಾಧಿಸುತ್ತಿದ್ದಂತೆ ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಟ್ವೀಟ್ ಮೂಲಕ  ಶೇಕ್ಸಪಿಯರ್ ಪ್ರಸಿದ್ದ ದುರಂತ ನಾಟಕದ ಡೈಲಾಗ ನೆನಪಿಸಿದ್ದಾರೆ.

ಇಂದು ಬೆಳೆಗ್ಗೆ ಬಿಜೆಪಿ ಪಕ್ಷವು 110 ಕ್ಕೂ ಅಧಿಕ ಸೀಟುಗಳನ್ನು ಗೆಲ್ಲುತ್ತಿದ್ದಂತೆ ಟ್ವೀಟ್ ಮಾಡಿರುವ ಅವರು " Et tu #Karnataka. " ಅಂದರೆ "ನೀನೂ  ಕರ್ನಾಟಕ" ಎನ್ನುವ ಅರ್ಥದಲ್ಲಿ ಅವರು ಟ್ವೀಟ್ ಮಾಡಿದ್ದಾರೆ.

ಒಮರ್ ಅಬ್ದುಲ್ಲಾ ಪ್ರಸ್ತಾಪಿಸಿರುವ ಟ್ವೀಟ್ ನ ಹಿನ್ನಲೆಯ ಅರ್ಥವನ್ನು ಕೆದಕಿದರೆ ಅದು ಶೇಕ್ಸಪಿಯರ್ ನಾಟಕ   ಜೂಲಿಯಸ್ ಸಿಸರ್ ನಲ್ಲಿ ಬರುವ ಪ್ರಸಿದ್ದ ಡೈಲಾಗ. ಇದರಲ್ಲಿ ರೋಮನ್ ನಾಯಕ ಜೂಲಿಯಸ್ ಸಿಜರ್ ಅವನ ಮಿತ್ರ ಬೃಟಸ್ ಮತ್ತು ಸಹಚರರ ಮೂಲಕ ಕೊಲ್ಲಲ್ಪಡುತ್ತಾನೆ. ಇದರಲ್ಲಿ ಬೃಟಸ್  ಸಿಜರ್  ಹಿಂಬದಿ ಬಂದು ದಾಳಿ ಮಾಡುತ್ತಾನೆ. ಸಿಜರ್  ನೀನು ಕ್ರೂರಿ ಬೃಟಸ್ ಎಂದು ನಂಬಿಕೆ ದ್ರೋಹ ಬಗೆದಿರುವಿದಕ್ಕೆ ಪ್ರತಿಕ್ರಯಿಸುತ್ತಾನೆ.

Trending News