ಪಿಂಚಣಿದಾರರಿಗೆ ಸಿಹಿ ಸುದ್ದಿ! ಇನ್ನು ಸಿಗುವುದು 20 % ಹೆಚ್ಚುವರಿ ಪೆನ್ಶನ್

ಪಿಂಚಣಿದಾರರ ಕುಂದುಕೊರತೆಗಳ ಕುರಿತು ಸಂಸದೀಯ ಸ್ಥಾಯಿ ಸಮಿತಿಯ ಶಿಫಾರಸನ್ನು ಜಾರಿಗೊಳಿಸುವಂತೆ ರೈಲ್ವೆ ಹಿರಿಯ ನಾಗರಿಕರ ಕಲ್ಯಾಣ ಸಂಘ (ಆರ್‌ಎಸ್‌ಸಿಡಬ್ಲ್ಯುಎಸ್) ಇತ್ತೀಚೆಗೆ ಸರ್ಕಾರಕ್ಕೆ ಮನವಿ ಮಾಡಿದೆ.

Written by - Ranjitha R K | Last Updated : Sep 28, 2023, 11:04 AM IST
  • ಸಂಸದೀಯ ಸ್ಥಾಯಿ ಸಮಿತಿ ಶಿಫಾರಸು
  • ಶಿಫಾರಸುಗಳ ಶೀಘ್ರ ಅನುಷ್ಠಾನಕ್ಕೆ ಒತ್ತಾಯ
  • ಹೆಚ್ಚುವರಿ ಪಿಂಚಣಿ ಜಾರಿಗೆ ಮನವಿ
ಪಿಂಚಣಿದಾರರಿಗೆ ಸಿಹಿ ಸುದ್ದಿ! ಇನ್ನು ಸಿಗುವುದು 20 % ಹೆಚ್ಚುವರಿ ಪೆನ್ಶನ್  title=

ಬೆಂಗಳೂರು : ಕೇಂದ್ರ ನೌಕರರ ಡಿಎ ಮತ್ತು ಪಿಂಚಣಿದಾರರ ಡಿಆರ್ ಕುರಿತು ಶೀಘ್ರದಲ್ಲೇ ನಿರ್ಧಾರ ಹೊರ ಬೀಳಲಿದೆ. ಜುಲೈ ತಿಂಗಳ ಬಾಕಿ ಇರುವ ಡಿಎ ಮತ್ತು ಡಿಆರ್ ಬಗ್ಗೆ ಅಕ್ಟೋಬರ್‌ನಲ್ಲಿ ಸರ್ಕಾರ ನಿರ್ಧಾರ ತೆಗೆದುಕೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ. ಆದರೆ ಇದಕ್ಕೂ ಮುನ್ನ ಪಿಂಚಣಿದಾರರ ಕುಂದುಕೊರತೆಗಳ ಕುರಿತು ಸಂಸದೀಯ ಸ್ಥಾಯಿ ಸಮಿತಿಯ ಶಿಫಾರಸನ್ನು ಜಾರಿಗೊಳಿಸುವಂತೆ, ರೈಲ್ವೆ ಹಿರಿಯ ನಾಗರಿಕರ ಕಲ್ಯಾಣ ಸಂಘ (ಆರ್‌ಎಸ್‌ಸಿಡಬ್ಲ್ಯುಎಸ್) ಇತ್ತೀಚೆಗೆ ಸರ್ಕಾರಕ್ಕೆ ಮನವಿ ಮಾಡಿದೆ.

ಸಂಸದೀಯ ಸ್ಥಾಯಿ ಸಮಿತಿ ಶಿಫಾರಸು  : 
ಪಿಂಚಣಿದಾರರ ಕುಂದುಕೊರತೆಗಳ ಬಗ್ಗೆ ಸಮಿತಿಯು ಸರ್ಕರಾದ ಗಮನ ಸೆಳೆದಿದೆ. 'ಸರ್ಕಾರವು ಪಿಂಚಣಿದಾರರ ಬೇಡಿಕೆ ಈಡೇರಿಸುವ ಬಗ್ಗೆ ಗಮನ ಹರಿಸಬೇಕು ಎಂದು  ತನ್ನ 110ನೇ ವರದಿಯ ಶಿಫಾರಸು ಸಂಖ್ಯೆ. 3.28 ರ ಅಡಿಯಲ್ಲಿ  ಮನವಿ ಮಾಡಿದೆ.  ಪಿಂಚಣಿದಾರರಿಗೆ 65 ವರ್ಷ ವಯಸ್ಸಿನಲ್ಲಿ 5% ಹೆಚ್ಚುವರಿ ಪಿಂಚಣಿ, 70 ನೇ ವಯಸ್ಸಿನಲ್ಲಿ 10%, 75 ನೇ ವಯಸ್ಸಿನಲ್ಲಿ 15% ಮತ್ತು 80 ನೇ ವಯಸ್ಸಿನಲ್ಲಿ 20% ಹೆಚ್ಚುವರಿ ಪಿಂಚಣಿ ನೀಡಬೇಕು ಎಂದು ಸಮಿತಿ ಶಿಫಾರಸು ಮಾಡಿತ್ತು. 

ಇದನ್ನೂ ಓದಿ : ಮತ್ತೆ ಇಳಿಕೆ ಕಂಡ ಚಿನ್ನದ ಬೆಲೆ ! 10 ಗ್ರಾಂ ಚಿನ್ನದ ಬೆಲೆ ಎಷ್ಟು ನೋಡಿ ?

ಶಿಫಾರಸುಗಳ ಶೀಘ್ರ ಅನುಷ್ಠಾನಕ್ಕೆ ಒತ್ತಾಯ : 
ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆ ಏಪ್ರಿಲ್ 4, 2022 ರಂದು ಪತ್ರದ ಮೂಲಕ  ಮೇಲಿನ ಶಿಫಾರಸುಗಳನ್ನು ಶೀಘ್ರವಾಗಿ ಜಾರಿಗೊಳಿಸುವಂತೆ ಸಂಸದೀಯ ಸಮಿತಿ ಒತ್ತಾಯಿಸಿತ್ತು. ಇದೀಗ 65, 70 ಮತ್ತು 75 ವರ್ಷಕ್ಕಿಂತ ಮೇಲ್ಪಟ್ಟವರ ಪಿಂಚಣಿಯ ವಿಷಯವಾಗಿ ಮಾಡಿರುವ ಶಿಫಾರಸುಗಳನ್ನು ಸರ್ಕಾರ ಒಪ್ಪುವಂತೆ ತೋರುತ್ತಿದೆ ಎಂದು RSCWS ಹೇಳಿದೆ. ಆದರೆ, ಅದರ ಆರ್ಥಿಕ ಪರಿಣಾಮಗಳಿಂದಾಗಿ ಅದು ಕಾರ್ಯರೂಪಕ್ಕೆ  ಬಂದಿಲ್ಲ ಎನ್ನಲಾಗುತ್ತಿದೆ. 

ಇದೀಗ ಮೇಲಿನ ಶಿಫಾರಸ್ಸುಗಳನ್ನು ಜಾರಿಗೆ ತರಬೇಕು ಎಂದು ಸಮಿತಿಯು ಮತ್ತೊಮ್ಮೆ ಮನವಿ ಮಾಡಿದೆ. 80 ವರ್ಷ ಮೇಲ್ಪಟ್ಟವರಿಗೆ ಈಗಾಗಲೇ ಶೇ.20ರಷ್ಟು ಹೆಚ್ಚುವರಿ ಪಿಂಚಣಿ ನೀಡಲಾಗಿದೆ ಎಂದು RSCWS ತಿಳಿಸಿದೆ. ಪಿಂಚಣಿದಾರರಿಗೆ ವೃದ್ಧಾಪ್ಯದಲ್ಲಿ ಆರೋಗ್ಯ ಸಮಸ್ಯೆ ಹೆಚ್ಚುತ್ತಿದೆ. ನಿರ್ವಹಣೆ ವೆಚ್ಚ, ಸಾಮಾಜಿಕ-ಕುಟುಂಬದ ಜವಾಬ್ದಾರಿಗಳ ಜೊತೆಗೆ ಔಷಧಗಳ ಬೆಲೆ ಏರಿಕೆಯಿಂದಾಗಿ ಸಮಸ್ಯೆಗಳನ್ನು ಎದುರಿಸುವಂತಾಗಿದೆ ಎಂದು ಸಮಿತಿಯ  ಜ್ಞಾಪಕ ಪತ್ರದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ : ಮೇಕ್ ಇನ್ ಇಂಡಿಯಾ ಯೋಜನೆಗೆ ದಶಕ: ಉತ್ಪಾದನಾ ಸವಾಲುಗಳು, ನೀತಿ ನಿಯಮಗಳ ತೊಡಕುಗಳು

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News