ಗಂಡು ಮಗು ಹೆರಲಿಲ್ಲವೆಂದು ಚಿತ್ರಹಿಂಸೆ: ಮಕ್ಕಳನ್ನು ಕೊಂದು ಮಹಿಳೆ ಆತ್ಮಹತ್ಯೆ..!

ಭೋಪಾಲ್ ಜಿಲ್ಲೆಯ ಗುಂಗಾ ಪೊಲೀಸ್ ಠಾಣೆ ವ್ಯಾಪ್ತಿಯ ರೋಡಿಯಾ ಗ್ರಾಮದ ನಿವಾಸಿ ರಜತ್ ಯಾದವ್ ಪತ್ನಿ 28 ವರ್ಷದ ಸಂಗೀತಾ ಯಾದವ್ ಅವರು ತಮ್ಮ 5 ವರ್ಷದ ಮಗಳು ಆರಾಧ್ಯ ಮತ್ತು ಎರಡೂವರೆ ವರ್ಷದ ಸೃಷ್ಟಿಯನ್ನು ಹತ್ಯೆ ಮಾಡಿ ತಾವೂ ಆತ್ಮಹತ್ಯೆಗೆ ಶರಣಾಗಿದ್ದಾರೆ.

Written by - Puttaraj K Alur | Last Updated : Mar 27, 2024, 10:50 PM IST
  • ಗಂಡು ಮಗು ಹೆರಲಿಲ್ಲವೆಂದು ಪತಿಯಿಂದ ನಿರಂತರ ಕಿರುಕುಳ
  • ಚಿತ್ರಹಿಂಸೆಯಿಂದ ಬೇಸತ್ತು ಮಕ್ಕಳ ಹತ್ಯೆಗೈದು ತಾಯಿ ಆತ್ಮಹತ್ಯೆ
  • ಮಧ್ಯಪ್ರದೇಶದ ಭೋಪಾಲ್​ನಲ್ಲಿ ನಡೆದಿರುವ ಹೃದಯ ವಿದ್ರಾವಕ ಘಟನೆ
ಗಂಡು ಮಗು ಹೆರಲಿಲ್ಲವೆಂದು ಚಿತ್ರಹಿಂಸೆ: ಮಕ್ಕಳನ್ನು ಕೊಂದು ಮಹಿಳೆ ಆತ್ಮಹತ್ಯೆ..! title=
ಹೃದಯ ವಿದ್ರಾವಕ ಘಟನೆ

ನವದೆಹಲಿ: ಗಂಡು ಮಗು ಹೆರಲಿಲ್ಲವೆಂದು ಪತಿ ನೀಡುತ್ತಿದ್ದ ಕಿರುಕುಳದಿಂದ ಬೇಸತ್ತ ಮಹಿಳೆಯೊಬ್ಬರು ಇಬ್ಬರು ಹೆಣ್ಣುಮಕ್ಕಳನ್ನು ಹತ್ಯೆ ಮಾಡಿ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಧ್ಯಪ್ರದೇಶದ ಭೋಪಾಲ್​ನಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದೆ. ಘಟನೆಯಲ್ಲಿ ಇಬ್ಬರು ಹೆಣ್ಣುಮಕ್ಕಳು ಸಾವನ್ನಪ್ಪಿದ್ದು, ೩ನೇ ಮಗುವನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗುತ್ತಿದೆ.   

ಆತ್ಮಹತ್ಯೆಗೂ ಮುನ್ನ ಮಹಿಳೆ ತನ್ನ ಸಹೋದರಿನಿಗೆ ವಾಯ್ಸ್​ ಮೆಸೇಜ್ ಕಳುಹಿಸಿದ್ದಳಂತೆ. ತಾನು ಗಂಡು ಮಗು ಹೆತ್ತಿಲ್ಲವೆನ್ನುವ ಕಾರಣಕ್ಕೆ ಅತ್ತೆಯ ಮನೆಯಲ್ಲಿ ಎಲ್ಲರೂ ಕಿರುಕುಳ ನೀಡುತ್ತಿದ್ದಾರೆ ಎಂದು ಆಕೆ ಅಳಲು ತೋಡಿಕೊಂಡಿದ್ದಾಳೆ. 

ಇದನ್ನೂ ಓದಿ: ಹಾವಿನ ಈ ಒಂದು ಭಾಗವನ್ನು ತಂದು ರಹಸ್ಯವಾಗಿ ಮನೆಯಲ್ಲಿಟ್ಟರೆ ಹಣದ ಹೊಳೆ ಹರಿಯುತ್ತದೆ.!

ಭೋಪಾಲ್ ಜಿಲ್ಲೆಯ ಗುಂಗಾ ಪೊಲೀಸ್ ಠಾಣೆ ವ್ಯಾಪ್ತಿಯ ರೋಡಿಯಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ರೋಡಿಯಾ ಗ್ರಾಮದ ನಿವಾಸಿ ರಜತ್ ಯಾದವ್ ಪತ್ನಿ 28 ವರ್ಷದ ಸಂಗೀತಾ ಯಾದವ್ ಅವರು ತಮ್ಮ 5 ವರ್ಷದ ಮಗಳು ಆರಾಧ್ಯ ಮತ್ತು ಎರಡೂವರೆ ವರ್ಷದ ಸೃಷ್ಟಿಯನ್ನು ಹತ್ಯೆ ಮಾಡಿ ತಾವೂ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇನ್ನೊಬ್ಬ ಬಾಲಕಿಯ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

ಸಂಗೀತಾ ಯಾದವ್ ಅವರು ತಡರಾತ್ರಿ ತಮ್ಮ ಅಣ್ಣ ನೀರಜ್‌ಗೆ ಸಂದೇಶ ಕಳುಹಿಸಿದ್ದರಂತೆ. ಆದರೆ ಅವರು ನಿದ್ರೆಯಲ್ಲಿದ್ದ ಕಾರಣ ನೋಡಿರಲಿಲ್ಲ. ಬೆಳಗ್ಗೆ ಎದ್ದು ಮೆಸೇಜ್ ನೋಡುವಷ್ಟರಲ್ಲಿ ಕಾಲ ಮಿಂಚಿತ್ತು.

ಮೆಸೇಜ್ ನೋಡಿದ ನೀರಜ್ ಸಂಗೀತಾಗೆ ಕರೆ ಮಾಡಿದರೂ ಫೋನ್ ರಿಸೀವ್ ಮಾಡಿಲ್ಲ. ನಂತರ ಸಂಗೀತಾರ ಸೋದರ ಮಾವನಿಗೆ ಕರೆ ಮಾಡಿದ್ರೆ ಅವರು ಸರಿಯಾರಿ ಪ್ರತಿಕ್ರಿಯಿಸಿರಲಿಲ್ಲ. ಘಟನಾ ಸ್ಥಳದಲ್ಲಿ ಪತ್ರವೊಂದು ಸಿಕ್ಕಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.  

ಇದನ್ನೂ ಓದಿ: ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಎರಡು ವಿಮಾನಗಳ ಡಿಕ್ಕಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News