ಪಶ್ಚಿಮ ಬಂಗಾಳ ಉಪಚುನಾವಣೆ: ಮುಖ್ಯಮಂತ್ರಿ ಮಮತಾ ಬ್ಯಾನರ್ಜೀ ಗೆ ಪ್ರಚಂಡ ಗೆಲುವು

ಪಶ್ಚಿಮ ಬಂಗಾಳದ ಉಪಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಭರ್ಜರಿ ಜಯ ಸಾಧಿಸಿದರು, ಇದು ಅವರು ನಂದಿಗ್ರಾಮದಲ್ಲಿ ಸೋಲಿನ ನಂತರ ಮುಖ್ಯಮಂತ್ರಿಯಾಗಿ ಮುಂದುವರಿಯಲು ನಿರ್ಣಾಯಕವಾಗಿತ್ತು. ಅವರು ತಮ್ಮ ಬಿಜೆಪಿ ಪ್ರತಿಸ್ಪರ್ಧಿಗಿಂತ 58,832 ಮತಗಳ ದಾಖಲೆಯ ಅಂತರದಿಂದ ಗೆದ್ದರು.

Written by - Zee Kannada News Desk | Last Updated : Oct 3, 2021, 03:55 PM IST
  • ಪಶ್ಚಿಮ ಬಂಗಾಳದ ಉಪಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಭರ್ಜರಿ ಜಯ ಸಾಧಿಸಿದರು, ಇದು ಅವರು ನಂದಿಗ್ರಾಮದಲ್ಲಿ ಸೋಲಿನ ನಂತರ ಮುಖ್ಯಮಂತ್ರಿಯಾಗಿ ಮುಂದುವರಿಯಲು ನಿರ್ಣಾಯಕವಾಗಿತ್ತು.ಅವರು ತಮ್ಮ ಬಿಜೆಪಿ ಪ್ರತಿಸ್ಪರ್ಧಿಗಿಂತ 58,832 ಮತಗಳ ದಾಖಲೆಯ ಅಂತರದಿಂದ ಗೆಲುವನ್ನು ಸಾಧಿಸಿದ್ದಾರೆ.
ಪಶ್ಚಿಮ ಬಂಗಾಳ ಉಪಚುನಾವಣೆ: ಮುಖ್ಯಮಂತ್ರಿ ಮಮತಾ ಬ್ಯಾನರ್ಜೀ ಗೆ ಪ್ರಚಂಡ ಗೆಲುವು title=

ನವದೆಹಲಿ: ಪಶ್ಚಿಮ ಬಂಗಾಳದ ಉಪಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಭರ್ಜರಿ ಜಯ ಸಾಧಿಸಿದರು, ಇದು ಅವರು ನಂದಿಗ್ರಾಮದಲ್ಲಿ ಸೋಲಿನ ನಂತರ ಮುಖ್ಯಮಂತ್ರಿಯಾಗಿ ಮುಂದುವರಿಯಲು ನಿರ್ಣಾಯಕವಾಗಿತ್ತು.ಅವರು ತಮ್ಮಬಿಜೆಪಿ ಪ್ರತಿಸ್ಪರ್ಧಿಗಿಂತ 58,832 ಮತಗಳ ದಾಖಲೆಯ ಅಂತರದಿಂದ ಗೆಲುವನ್ನು ಸಾಧಿಸಿದ್ದಾರೆ

ದಕ್ಷಿಣ ಕೊಲ್ಕತ್ತಾದ ಭಬನಿಪುರ ಕ್ಷೇತ್ರದಲ್ಲಿ 2011 ರಲ್ಲಿ ಪಡೆದದ್ದಕ್ಕಿಂತ ಹೆಚ್ಚು ಮತಗಳನ್ನು ಮಮತಾ ಬ್ಯಾನರ್ಜೀ (Mamata Banerjee) ಪಡೆದರು. ಅವರು ಮೂರು ಬೆರಳುಗಳನ್ನು ತೋರಿಸುವ ಮೂಲಕ 'ಮಾ, ಮಾಟಿ , ಮನುಶ್' ಎಂಬ ಅವರ ಚುನಾವಣಾ ಘೋಷವಾಕ್ಯವನ್ನು ಪ್ರತಿನಿಧಿಸಿದರು."ನಾವು ಶಂಶೇರ್ಗಂಜ್ ಮತ್ತು ಜಂಗೀಪುರದಲ್ಲಿಯೂ ಗೆಲ್ಲುತ್ತಿದ್ದೇವೆ"ಎಂದು ಅವರು ಹೇಳಿದರು.

ಇದನ್ನೂ ಓದಿ: ಆ ಹಣ ಎಲ್ಲಿದೆ ?: ಪಿಎಂ ಕೇರ್ಸ್ ಫಂಡ್ ಬಗ್ಗೆ ಕೇಂದ್ರಕ್ಕೆ ಮಮತಾ ಬ್ಯಾನರ್ಜಿ ಪ್ರಶ್ನೆ

'ಅತ್ಯಂತ ಸಂತಸದ ಸಂಗತಿಯೆಂದರೆ, ನಾನು ಕ್ಷೇತ್ರದಲ್ಲಿ ಒಂದೇ ಒಂದು ವಾರ್ಡ್‌ನಲ್ಲಿ ಸೋತಿಲ್ಲ.ಕಳೆದ ಬಾರಿ ನಾನು ಒಂದೆರಡು ವಾರ್ಡ್‌ಗಳಲ್ಲಿ ಹಿಂದುಳಿದಿದ್ದೆ.ಏಪ್ರಿಲ್ ಚುನಾವಣೆಯಲ್ಲಿ ನಮ್ಮ ವಿರುದ್ಧ ಸಾಕಷ್ಟು ಪಿತೂರಿಗಳು ನಡೆದಿವೆ.ನಂದಿಗ್ರಾಮದಲ್ಲಿ ನಾನು ಸೋತಿದ್ದೇನೆ, ಆದರೆ ಈಗ ವಿಷಯ ನ್ಯಾಯಾಲಯದಲ್ಲಿದೆ "ಎಂದು ಅವರು ಹೇಳಿದರು.

ಇದನ್ನೂ ಓದಿ: "ಮಮತಾ ದೀದಿ ಹೇಳಿದ್ದೆಲ್ಲವೂ ನನ್ನ ಕಿವಿಗೆ ಸಂಗೀತದಂತೆ"

ಏಪ್ರಿಲ್-ಮೇ ವಿಧಾನಸಭಾ ಚುನಾವಣೆಯಲ್ಲಿ ತನ್ನ ಪ್ರತಿಸ್ಪರ್ಧಿ ಸುವೇಂಡು ಅಧಿಕಾರಿಯ ವಿರುದ್ಧ ನಂದಿಗ್ರಾಮದ ಹೋರಾಟದಲ್ಲಿ ಸೋತ ಮಮತಾ ಬ್ಯಾನರ್ಜಿ, ಮುಖ್ಯಮಂತ್ರಿಯಾಗಿ ಮುಂದುವರಿಯಲು ಆರು ತಿಂಗಳು ಮುಗಿಯುವ ಮುನ್ನವೇ ವಿಧಾನಸಭಾ ಸ್ಥಾನವನ್ನು ಗೆಲ್ಲುವ ಅನಿವಾರ್ಯತೆ ಎದುರಾಗಿತ್ತು.

ಬ್ಯಾನರ್ಜಿ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಪ್ರಿಯಾಂಕಾ ಟಿಬ್ರೆವಾಲ್ ಅವರು ಸ್ಪರ್ಧಿಸಿದ್ದರು, ಅವರು ಇತ್ತೀಚಿನ ವಿಧಾನಸಭಾ ಚುನಾವಣೆ ಮತ್ತು 2015 ರ ಮುನ್ಸಿಪಲ್ ಚುನಾವಣೆಯಲ್ಲಿ ಸೋತಿದ್ದರೂ, ರಾಜ್ಯ ಸರ್ಕಾರದ ವಿರುದ್ಧದ ಚುನಾವಣೆಯ ನಂತರದ ಹಿಂಸಾಚಾರ ಪ್ರಕರಣದ ವಿಚಾರದಲ್ಲಿ ಅವರು ಪ್ರಮುಖ ಅರ್ಜಿದಾರರಾಗಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News