Covid-19 ಸಂತ್ರಸ್ತರಿಗೆ ನೆರವಿನ ಹಸ್ತ, 'ಎನ್‌ಸಿಸಿ ಯೋಗದಾನ'ಕ್ಕೆ ಚಾಲನೆ

ವ್ಯಕ್ತಿಯಲ್ಲಿ ಶಿಸ್ತು, ಸಾಮರ್ಥ್ಯ ಹೆಚ್ಚಿಸುವ ಮೂಲಕ ಉತ್ತಮ ವ್ಯಕ್ತಿತ್ವ ರೂಪಿಸುವಲ್ಲಿ ಎನ್‌ಸಿಸಿ ಪಾತ್ರ ದೊಡ್ಡದು- ಉಪಮುಖ್ಯಮಂತ್ರಿ ಡಾ. ಸಿ ಎನ್ ಅಶ್ವತ್ಥನಾರಾಯಣ 

Last Updated : Apr 10, 2020, 02:10 PM IST
Covid-19 ಸಂತ್ರಸ್ತರಿಗೆ ನೆರವಿನ ಹಸ್ತ, 'ಎನ್‌ಸಿಸಿ ಯೋಗದಾನ'ಕ್ಕೆ ಚಾಲನೆ title=

ಬೆಂಗಳೂರು: ಕರ್ನಾಟಕ ಮತ್ತು ಗೋವಾ ಹಿರಿಯ ವಿಭಾಗದ  ಸ್ವಯಂಸೇವಕ ಮಹಿಳಾ ಎನ್‍ಸಿಸಿ ಕೆಡೆಟ್‍ಗಳು ಕೊವಿಡ್‌ ಸಂತ್ರಸ್ತರಿಗಾಗಿ ಸಿದ್ಧಪಡಿಸಿರುವ ಅಗತ್ಯ ಸಾಮಗ್ರಿಗಳ ಕಿಟ್‌ಗಳನ್ನು ವಿತರಿಸುವ 'ಎಕ್ಸ್‌ ಎನ್‌ಸಿಸಿ ಯೋಗದಾನ್‌' ಕಾರ್ಯಕ್ರಮಕ್ಕೆ  ಉಪಮುಖ್ಯಮಂತ್ರಿ ಡಾ.ಸಿ.ಎನ್ ಅಶ್ಬತ್ಥನಾರಾಯಣ (Dr CN Ashwathnarayan)  ಶುಕ್ರವಾರ ಚಾಲನೆ ನೀಡಿದರು. 

ನಗರದ ವ್ಹೀಲರ್‌ ರಸ್ತೆಯ ಎನ್‍ಸಿಸಿ ಅಧಿಕಾರಿಗಳ ಮೆಸ್ (ಕರ್ನಾಟಕ ಮತ್ತು ಗೋವಾ) ನಿರ್ದೇಶನಾಲಯದ ಆವರಣದಲ್ಲಿ ಅಗತ್ಯ ವಸ್ತುಗಳ ಕಿಟ್‌ಗಳಿದ್ದ ವಾಹನಗಳನ್ನು ಅವರು ಬೀಳ್ಕೊಟ್ಟರು. ಇದೇ ವೇಳೆ ದಿನಗೂಲಿ ನೌಕರರು, ರಸ್ತೆಬದಿ ವ್ಯಾಪಾರಿಗಳು ಸೇರಿದಂತೆ ಸಂತ್ರಸ್ತರಿಗೆ 200 ಆಹಾರ ಪೊಟ್ಟಣಗಳ ವಿತರಣೆ ಮಾಡಲಾಯಿತು. 

ಎಪ್ರಿಲ್ 15ರಿಂದ ರೈಲು ಸಂಚಾರದ ಬಗ್ಗೆ ಭಾರತೀಯ ರೈಲ್ವೆಯ ಮಹತ್ವದ ಹೇಳಿಕೆ

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ, ಕೊರೊನಾವೈರಸ್  (Coronavirus) ಕೊವಿಡ್‌ 19 ನಿಂದ ಸಮಾಜ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಎನ್‌ಸಿಸಿ ನಿರ್ದೇಶನಾಲಯ ಅತ್ಯುತ್ತಮ ಕೆಲಸ ಮಾಡುತ್ತಿದೆ. ಸೋಂಕಿನ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಿದೆ.  ಈ ಸಂಕಷ್ಟದ ಸಮಯದಲ್ಲಿ ಸ್ವಯಂಸೇವಕರಾಗಿ ನೆರವು ಒದಗಿಸಲು ಎನ್‌ಸಿಸಿ (NCC) ಕೆಡೆಟ್‌ಗಳು ಮುಂದೆ ಬಂದಿದ್ದಾರೆ. ಸ್ವಂತ ಸಂಪನ್ಮೂಲದಿಂದ ದಿನಸಿ ಪದಾರ್ಥಗಳನ್ನು ಒದಗಿಸುವ ಮೂಲಕ ಹಸಿದವರ ಹೊಟ್ಟೆ ತುಂಬಿಸುವ ಕೆಲಸಕ್ಕೂ ಮುಂದಾಗಿದ್ದಾರೆ ಎಂದು ಹೇಳಿದರು.

ಸಾಮಾಜಿಕ ಅಂತರ, ಮುನ್ನೆಚ್ಚರಿಕಾ ಕ್ರಮಗಳು ಹಾಗೂ ಸೋಂಕಿನ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಮೂಲಕ ಎನ್‌ಸಿಸಿ ಕೆಡೆಟ್‌ಗಳು ಸಾರ್ವಜನಿಕ ಆರೋಗ್ಯ ರಕ್ಷಣೆಗೆ ನೆರವಾಗಬಹುದು. ಎನ್‌ಸಿಸಿ ನಿರ್ದೇಶನಾಲಯದ ಎಲ್ಲ ಸಾಮಾಜಿಕ ಕಾರ್ಯಗಳಿಗೆ  ಕರ್ನಾಟಕ ಸರ್ಕಾರದ ಬೆಂಬಲ ಇರುತ್ತದೆ ಎಂದು ಅವರು ಭರವಸೆ ನೀಡಿದರು. 

COVID-19: 13 ಲಕ್ಷ ಉದ್ಯೋಗಿಗಳನ್ನು ರಕ್ಷಿಸಲು ಪ್ರೋಟೋಕಾಲ್ ಸಿದ್ಧಪಡಿಸಿದ ಭಾರತೀಯ ರೈಲ್ವೆ

ವ್ಯಕ್ತಿಯಲ್ಲಿ ಶಿಸ್ತು, ಸಾಮರ್ಥ್ಯ ಹೆಚ್ಚಿಸುವ ಮೂಲಕ ಉತ್ತಮ ವ್ಯಕ್ತಿತ್ವ ರೂಪಿಸುವಲ್ಲಿ ಎನ್‌ಸಿಸಿ ಪಾತ್ರ ದೊಡ್ಡದು. ಉತ್ತಮ ನಾಗರಿಕರಾಗಿ ಸಮಾಜಕ್ಕೆ ಉತ್ತಮ ಕೊಡುಗೆಗಳನ್ನು ನೀಡುತ್ತಿರುವ ಎನ್‌ಸಿಸಿ ಕೆಡೆಟ್‌ಗಳ ಬಗ್ಗೆ ಹೆಮ್ಮೆ ಇದೆ.  ಒಬ್ಬ ಎನ್‌ಸಿಸಿ ಕೆಡೆಟ್‌ ಆಗಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಖುಷಿ ಆಗುತ್ತಿದೆ. ಇಂಥ ಹಲವು ಒಳ್ಳೆಯ ಕಾರ್ಯಗಳಿಗೆ ಎನ್‌ಸಿಸಿ ವೇದಿಕೆ ಆಗಿರುವುದು ಶ್ಲಾಘನೀಯ ಎಂದರು. 

ಕರೋನಾ ವಿರುದ್ಧದ ಯುದ್ಧದಲ್ಲಿ ದೇಶವಾಸಿಗಳಿಗೆ ಪ್ರಯೋಜನ ನೀಡಲಿದೆ ಸರ್ಕಾರದ ಈ ನಿರ್ಧಾರ

5000 ಎನ್‌ಸಿಸಿ ಕೆಡೆಟ್‌ಗಳ ಸಹಾಯ
ಸುಮಾರು 5000 ಎನ್‍ಸಿಸಿ ಕೆಡೆಟ್‍ಗಳು ಸಹಾಯವಾಣಿ ನಿರ್ವಹಣೆ, ಪರಿಹಾರ ವಸ್ತುಗಳು, ಔಷಧ , ಊಟ, ಅಗತ್ಯ ಸರಕುಗಳ ವಿತರಣೆ ಮತ್ತು ಸಮುದಾಯ ಸಹಾಯ ಕಾರ್ಯಕ್ರಮಗಳಲ್ಲಿ ಸ್ವಯಂಸೇವಕರಾಗಿ ಪಾಲ್ಗೊಳ್ಳಲಿದ್ದಾರೆ. ಮುಂದಿನ ದಿನಗಳಲ್ಲಿ ಎನ್‍ಜಿಒಗಳ ಸಹಕಾರದೊಂದಿಗೆ ರಾಜ್ಯದ ಇತರ ಸ್ಥಳಗಳಲ್ಲೂ ಆಹಾರ ಹಂಚಿಕೆ ಮಾಡುವ ಉದ್ದೇಶ ಹೊಂದಲಾಗಿದೆ.

ಕಾರ್ಯಕ್ರಮದಲ್ಲಿ ಎನ್‍ಸಿಸಿ ನಿರ್ದೇಶನಾಲಯದ ಉಪ ಮಹಾ ನಿರ್ದೇಶಕರಾದ ಏರ್ ಕಮಾಂಡರ್‌ ಲಲಿತ್ ಕುಮಾರ್ ಜೈನ್, ಪದಾಧಿಕಾರಿಗಳು, ಎನ್‌ಸಿಸಿ ಕೆಡೆಟ್‌ಗಳು ಭಾಗವಹಿಸಿದ್ದರು.

Trending News