ಬಿಜೆಪಿ ಕಾರ್ಯಕರ್ತನಿಂದ ಮಹಾತ್ಮಾ ಗಾಂಧಿಜೀಗೆ ಅವಮಾನ

'ಮಧ್ಯರಾತ್ರಿಯಲ್ಲಿ ಹೆಂಗಸು ನಿರ್ಭೀತವಾಗಿ ಓಡಾಡುವಂತಾದಾಗ ನಿಜವಾದ ಸ್ವತಂತ್ರ್ಯ ಸಿಕ್ಕ ಹಾಗೆ' ಎಂಬ ಮಹಾತ್ಮಾ ಗಾಂಧೀಜಿಯವರ ಹೇಳಿಕೆಯನ್ನು ವ್ಯಂಗ್ಯ ಮಾಡಿರುವ ಬಿಜೆಪಿ ಕಾರ್ಯಕರ್ತ

Last Updated : Aug 17, 2020, 01:37 PM IST
  • ಮಹಾತ್ಮಾ ಗಾಂಧೀಜಿಯವರ ಹೇಳಿಕೆಯನ್ನು ವ್ಯಂಗ್ಯ ಮಾಡಿರುವ ಬಿಜೆಪಿ ಕಾರ್ಯಕರ್ತ
  • ಡಿ.ಜೆ. ಹಳ್ಳಿ ಮತ್ತು ಕೆ.ಜಿ. ಹಳ್ಳಿ ಗಲಭೆಗೆ ಸಂಬಂಧಿಸಿದಂತೆ ಫೇಸ್ ಬುಕ್ ಪೋಸ್ಟ್ ಹಾಕಿರುವ ಬಿಜೆಪಿ ಕಾರ್ಯಕರ್ತ ಸುಬ್ರಮಣ್ಯ ಹೆಬ್ಬಾರ್
ಬಿಜೆಪಿ ಕಾರ್ಯಕರ್ತನಿಂದ ಮಹಾತ್ಮಾ ಗಾಂಧಿಜೀಗೆ ಅವಮಾನ title=

ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ವತಿಯಿಂದ ಸ್ವತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣನಿಗೆ ಅವಮಾನ ಮಾಡಿದ ಬಳಿಕ ಈಗ ಬಿಜೆಪಿ ಕಾರ್ಯಕರ್ತನಿಂದ ಮಹಾತ್ಮ ಗಾಂಧಿ (Mahatma Gandhi) ಅವರಿಗೆ ಅವಮಾನ ಮಾಡಿರುವ ಘಟನೆ ನಡೆದಿದೆ‌.

ಬೆಂಗಳೂರಿನ ಡಿ.ಜೆ. ಹಳ್ಳಿ ಮತ್ತು ಕೆ.ಜಿ. ಹಳ್ಳಿ ಗಲಭೆಗೆ ಸಂಬಂಧಿಸಿದಂತೆ ಫೇಸ್ ಬುಕ್ (Facebook) ಪೋಸ್ಟ್ ಹಾಕಿರುವ ಬಿಜೆಪಿ ಕಾರ್ಯಕರ್ತ ಸುಬ್ರಮಣ್ಯ ಹೆಬ್ಬಾರ್, ಮಹಾತ್ಮಾ ಗಾಂಧೀಜಿ ಅವರ ಬಗ್ಗೆ ಅವಹೇಳನ ಮಾಡಿದ್ದಾನೆ‌.

"ಮುಸ್ಲಿಂ ಯುವಕನೊಬ್ಬ ಮಧ್ಯರಾತ್ರಿ ಸ್ವತಂತ್ರವಾಗಿ ಕೊತಂಬರಿ ಸೊಪ್ಪು ತರುವ ಹಾಗಾದಾಗ ಮಾತ್ರ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಹಾಗೆ" ಎಂದು ಹೇಳುವ ಮೂಲಕ 'ಮಧ್ಯರಾತ್ರಿಯಲ್ಲಿ ಹೆಂಗಸು ನಿರ್ಭೀತವಾಗಿ ಓಡಾಡುವಂತಾದಾಗ ನಿಜವಾದ ಸ್ವತಂತ್ರ್ಯ ಸಿಕ್ಕ ಹಾಗೆ' ಎಂಬ ಮಹಾತ್ಮಾ ಗಾಂಧೀಜಿಯವರ ಹೇಳಿಕೆಯನ್ನು ವ್ಯಂಗ್ಯ ಮಾಡಿದ್ದಾನೆ.
 
ಬಿಜೆಪಿ ಕಾರ್ಯಕರ್ತ ಸುಬ್ರಹ್ಮಣ್ಯ ಹೆಬ್ಬಾರ್ ಇಂಥ ಪೋಸ್ಟ್ ಹಾಕುತ್ತಿದ್ದಂತೆ ಆತನ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿದೆ. ತನ್ನ ಅವಹೇಳನಕಾರಿ ಪೋಸ್ಟ್ ವಿವಾದ ಆಗುತ್ತಿದ್ದಂತೆ ಬಿಜೆಪಿ ಕಾರ್ಯಕರ್ತ ತನ್ನ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದಾನೆ.
 

Trending News