Car Accident: ಕಗ್ಗತ್ತಲಿನಲ್ಲಿ ದಾರಿ ಕಾಣದೆ ಕೆರೆಗೆ ಬಿದ್ದ ಕಾರು, ಉಸಿರುಗಟ್ಟಿ ವ್ಯಕ್ತಿ ಸಾವು

ಚಿತ್ರದುರ್ಗ ಜಿಲ್ಲೆಯ ಭರಮಸಾಗರ ಗ್ರಾಮದಲ್ಲಿ ದೊಡ್ಡಕೆರೆ ಏರಿ ಮೇಲೆ ಬರುತ್ತಿದ್ದ ಕಾರು ತಡೆಗೋಡೆ ಇಲ್ಲದೆ ಕೆರೆಗೆ ಪಲ್ಟಿ ಹೊಡೆದಿದೆ.

Written by - Zee Kannada News Desk | Last Updated : Dec 24, 2021, 01:11 PM IST
  • ಚಿತ್ರದುರ್ಗ ತಾಲೂಕಿನ ಭರಮಸಾಗರ ಗ್ರಾಮದಲ್ಲಿ ಕೆರೆಗೆ ಉರುಳಿದ ಕಾರು
  • 25 ವರ್ಷಗಳ ಬಳಿಕ ತುಂಬಿದ್ದ ದೊಡ್ಡಕೆರೆ
  • ಗ್ರಾಮದ ದೊಡ್ಡಕೆರೆ ಏರಿ ಮೇಲೆ ಬರುತ್ತಿದ್ದ ಕಾರು ಕೆರೆಗೆ ಪಲ್ಟಿ
Car Accident: ಕಗ್ಗತ್ತಲಿನಲ್ಲಿ ದಾರಿ ಕಾಣದೆ ಕೆರೆಗೆ ಬಿದ್ದ ಕಾರು, ಉಸಿರುಗಟ್ಟಿ ವ್ಯಕ್ತಿ ಸಾವು title=
Man dies due to car falls into lake at Chitradurga

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಭರಮಸಾಗರ ದೊಡ್ಡಕೆರೆಗೆ ಕಾರು ಉರುಳಿದ ಪರಿಣಾಮ ವ್ಯಕ್ತಿಯೋರ್ವ ಉಸಿರುಗಟ್ಟಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.

ಕೋಡಿ ರಂಗವ್ವನಹಳ್ಳಿಯಿಂದ ಭರಮಸಾಗರ ಕಡೆಗೆ ಬರುತ್ತಿರುವಾಗ ಭರಮಸಾಗರ (Bharamasagar) ಗ್ರಾಮದಲ್ಲಿ ದೊಡ್ಡಕೆರೆ ಏರಿ ಮೇಲೆ ಬರುತ್ತಿದ್ದ ಕಾರು ತಡೆಗೋಡೆ ಇಲ್ಲದೆ ಕೆರೆಗೆ ಪಲ್ಟಿ ಹೊಡೆದಿದೆ. ನೀರಿನ ಒಳಗೆ ಕಾರಿನ ಹೆಡ್ ಲೈಟ್ ಉರಿಯುತಿದ್ದನ್ನು ನೋಡಿದ ಗ್ರಾಮಸ್ಥರು ಹಗ್ಗ ಕಟ್ಟಿ ಜೆಸಿಬಿ ಸಹಾಯದಿಂದ ಕಾರನ್ನು ಹೊರ ತೆಗೆದಿದ್ದಾರೆ. ಆದಾಗ್ಯೂ, ಕಾರು ಹೊರ ತೆಗೆದಾಗ ಕಾರಿನಲ್ಲಿದ್ದ ವ್ಯಕ್ತಿ ಉಸಿರುಗಟ್ಟಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ-  New Year: ನ್ಯೂ ಇಯರ್ ಪಾರ್ಟಿಗೆ ಬ್ರೇಕ್..! ಹೊಸ ವರ್ಷಕ್ಕೆ ನಂದಿ ಬೆಟ್ಟಕ್ಕಿಲ್ಲ ಪ್ರವೇಶ

ಕಗ್ಗತ್ತಲಿನಲ್ಲಿ ದಾರಿ ಕಾಣದೆ ಕಾರು (Car) ಕೆರೆಗೆ ಉರುಳಿದ್ದು, ಗುರುವಾರ (ಡಿ. 23) ರಾತ್ರಿ ನಡೆದ ಘಟನೆ ಇಂದು (ಡಿ.24) ಬೆಳಗಿನ ಜಾವ ಬೆಳಕಿಗೆ ಬಂದಿದೆ. ಮೃತನ ಗುರುತು ಇನ್ನೂ ಪತ್ತೆಯಾಗಿಲ್ಲ.

ಇದನ್ನೂ ಓದಿ- ಮತಾಂತರ ನಿಷೇಧ ಕಾಯ್ದೆ ಆರ್.ಎಸ್.ಎಸ್ ಮತ್ತು ಬಿಜೆಪಿ ಸರ್ಕಾರದ ಕೂಸು- ಸಿದ್ಧರಾಮಯ್ಯ

ದೊಡ್ಡಕೆರೆ ಏರಿ ಮೇಲೆ ತಡೆಗೋಡೆಯೂ ಇಲ್ಲ ಹಾಗೂ ದಾರಿಯಲ್ಲಿ ವಿದ್ಯುತ್ ದೀಪವೂ ಇಲ್ಲದಿರುವುದೇ ಈ ಅವಘಡಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News