ನಿನ್ನೆ ಜೆಡಿಎಸ್, ಬಿಜೆಪಿ ನಾಯಕರು ಬೆಂಗಳೂರಿನಲ್ಲಿ ಒಕ್ಕಲಿಗ ನಾಯಕರ ಒಗ್ಗಟ್ಟು ಪ್ರದರ್ಶನ ಮಾಡಿದ್ದಾರೆ.. ಬೆಂಗಳೂರಿನ ವಿಜಯನಗರದಲ್ಲಿರುವ ಆದಿಚುಂಚನಗಿರಿ ಮಠಕ್ಕೆ ಎನ್ಡಿಎ ಒಕ್ಕಲಿಗ ನಾಯಕರ ಭೇಟಿ ನೀಡಿದ್ದಾರೆ..
CM Siddaramaiah: ಮೋದಿ ಅವರು ಸಿ.ಎಂ ಆಗಿದ್ದಾಗ ಗುಜರಾತ್ ರಾಜ್ಯಕ್ಕೆ ಶೇ50 ರಷ್ಟು ತೆರಿಗೆ ಪಾಲು ಕೇಳಿದ್ದರು. ಈಗ ಅವರು ಪ್ರಧಾನಿ ಆಗಿ ಕರ್ನಾಟಕ ರಾಜ್ಯಕ್ಕೆ ಕೇವಲ ಶೇ 12 ರಷ್ಟು ವಾಪಾಸ್ ಕೊಡುತ್ತಿದ್ದಾರೆ: ಮೋದಿ ಅವರ ಮಾತು ಮತ್ತು ವರ್ತನೆಗೆ ಅಂಕಿ ಅಂಶಗಳ ಕನ್ನಡಿ ಹಿಡಿದ ಸಿ.ಎಂ.ಸಿದ್ದರಾಮಯ್ಯ
ಬಿಜೆಪಿಯವರು ಕಾಂಗ್ರೆಸ್ ನಾಯಕರ ಖಾತೆಗಳನ್ನು ಸೀಜ್ ಮಾಡಿಸಿರುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾಸಕ ಅಬ್ಬಯ್ಯಾ ಪ್ರಸಾದ್, ಇವರಿಗೆಲ್ಲ ಯಾವಾಗ ಯಾವಾಗ ಚುನಾವಣೆ ಬರುತ್ತದೆಯೋ, ಅಂತಹ ಸಂದರ್ಭದಲ್ಲಿ ಕೀಳು ಮಟ್ಟದ ರಾಜಕೀಯ ಮಾಡುತ್ತಾರೆ. ಇವರ 9 ವರ್ಷಗಳ ಅಧಿಕಾರಾವಧಿಯಲ್ಲಿ ಇದನ್ನು ಎಲ್ಲರೂ ಗಮನಿಸಿದ್ದೀರಿ ಎಂದು ಹೇಳಿದರು.
2004-2012ರ ಅವಧಿಯಲ್ಲಿ, ಅಂದರೆ ಯುಪಿಎ ಅವಧಿಯಲ್ಲಿ ಪ್ರತಿವರ್ಷ 75 ಲಕ್ಷ ಉದ್ಯೋಗಗಳು ಸೃಷ್ಟಿಯಾಗುತ್ತಿದ್ದವು. ಆದರೆ ಈ ಪ್ರಮಾಣ 2013ರ ನಂತರದಲ್ಲಿ 29 ಲಕ್ಷಕ್ಕೆ ಇಳಿದಿದೆ. ನಿರುದ್ಯೋಗದ ತೀವ್ರತೆ ನಮ್ಮ ದೇಶದಲ್ಲಿ ಎಷ್ಟರಮಟ್ಟಿಗೆ ಇದೆಯೆಂದರೆ, ಎನ್.ಸಿ.ಆರ್.ಬಿ ಪ್ರಕಾರ ಪ್ರತಿ ಗಂಟೆಗೆ ಇಬ್ಬರು ನಿರುದ್ಯೋಗಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ!
Parameshwar's Views on UPA Governance in Karnataka: ಜಿಎಸ್ಟಿ ಜಾರಿಯಾದ ನಂತರ ತೆರಿಗೆ ಸಂಗ್ರಹದಲ್ಲಿ ಕರ್ನಾಟಕ ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ. ನಮ್ಮ ರಾಜ್ಯಕ್ಕೆ ಬರಬೇಕಾದ ಜಿಎಸ್ಟಿ ಪಾಲು ಸಂಪೂರ್ಣವಾಗಿ ಸಿಕ್ಕಿಲ್ಲ. ಬರ ಪರಿಹಾರಕ್ಕೆ 17 ಸಾವಿರ ಕೋಟಿ ರೂ. ಕೇಳಿದರು ಈವರೆಗೂ ಕೊಟ್ಟಿಲ್ಲ.
Make In India: ಯುಪಿಎ ಅವಧಿಯಲ್ಲಿ ಉತ್ಪಾದನಾ ವಲಯದಲ್ಲಿನ ಅಭಿವೃದ್ಧಿಯ ಕಾರಣದಿಂದ, ಉದ್ಯೋಗಾವಕಾಶಗಳೂ ಹೆಚ್ಚಾಗಿದ್ದವು. ಕಾರ್ಖಾನೆಗಳಲ್ಲಿನ ಉದ್ಯೋಗ ದರ ವಾರ್ಷಿಕವಾಗಿ 6.2% ಹೆಚ್ಚಳ ಕಂಡಿತ್ತು. ಆದರೆ, ಮೋದಿ ಸರ್ಕಾರದ ಅವಧಿಯಲ್ಲಿ ಈ ಉದ್ಯೋಗ ದರ 2.8%ಕ್ಕೆ ಕುಸಿತ ಕಂಡಿದೆ. ಅದೇ ರೀತಿ, ಯುಪಿಎ ಆಡಳಿತದ ಅವಧಿಯಲ್ಲಿ ಉದ್ಯೋಗಿಗಳ ಸಂಬಳ ವಾರ್ಷಿಕವಾಗಿ 17.1% ದರದಲ್ಲಿ ಹೆಚ್ಚುತ್ತಿದ್ದರೆ, 2014ರ ಬಳಿಕ ಸಂಬಳ ಹೆಚ್ಚಳದ ದರ 8.4%ಗೆ ಇಳಿಕೆ ಕಂಡಿದೆ.
2024ರ ಲೋಕಸಭಾ ಚುನಾವಣೆ ಗೆಲುವಿಗಾಗಿ ಬಿಜೆಪಿ ಭಾರೀ ರಣತಂತ್ರ ರೂಪಿಸುತ್ತಿದೆ. ಈ ಬಾರಿ ಬಿಜೆಪಿ ಹಲವು ಹಂತಗಳಲ್ಲಿ ಪ್ರತಿಕ್ರಿಯೆಯನ್ನು ತೆಗೆದುಕೊಳ್ಳುತ್ತಿದೆ, ತನ್ನ ಪಕ್ಷದ ಲೋಕಸಭಾ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಹುಡುಕಲು ಸಮೀಕ್ಷೆಗಳನ್ನು ನಡೆಸುತ್ತಿದೆ. NDAಯ ಮಿತ್ರಪಕ್ಷಗಳಿಗೆ ಹೇಗೆ ಸ್ಥಾನ ಹಂಚಿಕೆ ಮಾಡಬೇಕು ಅನ್ನೋದರ ಬಗ್ಗೆ ಬಿಜೆಪಿ ಚಿಂತನೆ ನಡೆಸುತ್ತಿದೆ.
ಮೋದಿ ಸರ್ಕಾರದಲ್ಲಿ ಸಚಿವರಾಗಿರುವ ರಾಮದಾಸ್ ಅಠಾವಳೆ ಅವರು ವಿವಾದಾತ್ಮಕ ಹೇಳಿಕೆಗಳಿಂದ ಸದಾ ಸುದ್ದಿಯಲ್ಲಿರುತ್ತಾರೆ. ನಿತೀಶ್ ಕುಮಾರ್ ಎನ್ಡಿಎಗೆ ಸೇರ್ಪಡೆಗೊಳ್ಳುವ ಬಗ್ಗೆ ಆಶ್ಚರ್ಯಕರ ಹೇಳಿಕೆಗಾಗಿ ಅವರು ಮತ್ತೊಮ್ಮೆ ಸುದ್ದಿಯಾಗಿದ್ದಾರೆ.ನಿತೀಶ್ ಕುಮಾರ್ ಅವರು ಯಾವಾಗ ಬೇಕಾದರೂ ಎನ್ ಡಿಎ ಸೇರಬಹುದು ಮತ್ತು ಅವರು ನಮ್ಮವರು ಎಂದು ಹೇಳಿದರು.ಪಾಟ್ನಾದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಈ ಹೇಳಿಕೆ ನೀಡಿದ್ದಾರೆ.
ಮಾಜಿ ಪಿಎಂ ಎಚ್ಡಿ ದೇವೇಗೌಡರ ದೆಹಲಿ ಪ್ರವಾಸ ರದ್ದು
ಅನಾರೋಗ್ಯದ ಕಾರಣದಿಂದ ಬೆಂಗಳೂರಿನಲ್ಲೇ ಉಳಿದ ಗೌಡ್ರು
ಸೋಮವಾರ ತೆರಳಿ ಎನ್ಡಿಎ ನಾಯಕರ ಜೊತೆ ಮಾತುಕತೆ ಸಾಧ್ಯತೆ
ಬಿಜೆಪಿ ಜೆಡಿಎಸ್ ಮೈತ್ರಿ ಕುರಿತು ಮಾತುಕತೆ ನಡೆಸಲಿರುವ ಗೌಡ್ರು
ಕುತೂಹಲ ಮೂಡಿಸಿರುವ ಉಭಯ ಪಕ್ಷಗಳ ನಾಯಕರ ಭೇಟಿ
ಇಂದಿನ ಸಭೆಗೆ ಗೈರಾಗಲಿರೋ ಎನ್ ಸಿ ಪಿ ನಾಯಕ ಶರದ್ ಪವರ್ ಮಹಾರಾಷ್ಟ್ರದಲ್ಲಿ ಇಂದಿನಿಂದ ಮುಂಗಾರು ಅಧಿವೇಶನ ಹಿನ್ನಲೆ ಇಂದು ತಮ್ಮ ಪಕ್ಷದ ನಾಯಕರ ಸಭೆ ಕರೆದಿರೋ ಶರದ್ ಪವಾರ್ ಅಜೀತ್ ಪವರ್ ಪಕ್ಷದಿಂದ ದೂರ ಸರಿದ ನಂತರ ಮೊದಲ ಅಧಿವೇಶನ ಹಿನ್ನಲೆ ವಿಪಕ್ಷ ಸ್ಥಾನ ಎನ್ ಸಿ ಪಿಯಲ್ಲೆ ಉಳಿಸಿಕೊಳಲು ತಂತ್ರ ಈ ಹಿನ್ನಲೆ ಸಭೆಗೆ ಶರದ್ ಪವರ್ ಗೈರಾಗುವ ಸಾದ್ಯತೆ
ಎರಡು ಪಕ್ಷಗಳ ನಡುವೆ ಹೈ ವೋಲ್ಟೇಜ್ ರಾಜಕೀಯ ಹಣಾಹಣಿ NDAಗೆ ಬಲ ತುಂಬಲು ನರೇಂದ್ರ ಮೋದಿ, ನಡ್ಡಾ ಮೆಗಾ ಪ್ಲ್ಯಾನ್ 34 VS 20 ರಾಜಕೀಯ ಪಕ್ಷಗಳ ಮೀಟಿಂಗ್.. ಮೀಟಿಂಗ್...! ಮುಂದಿನ ಲೋಕಸಭೆ ಚುನಾವಣೆ ಹಿನ್ನೆಲೆ ಒಗ್ಗಟ್ಟು ಪ್ರದರ್ಶನ
ಮುಂದಿನ ವರ್ಷ ರಾಜ್ಯದ 40 ಲೋಕಸಭಾ ಸ್ಥಾನಗಳ ಪೈಕಿ 36 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಬಿಜೆಪಿ ಹೇಳುತ್ತಿದೆ ಎಂದು ವ್ಯಂಗ್ಯವಾಡಿದರು.ತೇಜಸ್ವಿ ಯಾದವ್ ಮತ್ತು ನಂತರದ ತಂದೆ ಲಾಲು ಪ್ರಸಾದ್ ವಿರುದ್ಧದ ಆಧಾರರಹಿತ ಭ್ರಷ್ಟಾಚಾರ ಪ್ರಕರಣಗಳ ನಂತರ 2017 ರಲ್ಲಿ ಎನ್ಡಿಎಗೆ ಮರಳಿದ್ದು ತಮ್ಮದು ತಪ್ಪು ನಿರ್ಧಾರ ಎಂದು ಅವರು ಹೇಳಿದರು.
ಕೇಂದ್ರ ಸರ್ಕಾರ ದೇಶದಾದ್ಯಂತ ದೇಶದ್ರೋಹಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದೆ ಎಂದು ಇಸ್ಲಾಮಿಕ್ ತೀವ್ರವಾದಿ ಸಂಘಟನೆ ಪಿಎಫ್ಐನ ಮೇಲೆ 5 ವರ್ಷಗಳ ನಿಷೇಧ ಹೇರುವ ಮೂಲಕ ದೇಶವಿರೋಧಿ, ಮತೀಯ ಗಲಭೆ ತರಹದ ಕೃತ್ಯಗಳಲ್ಲಿ ತೊಡಗಿಕೊಂಡರೆ ಉಳಿಗಾಲವಿಲ್ಲ ಎಂಬ ಸಂದೇಶ ರವಾನೆ ಮಾಡಿದೆ.
ಹಾಗಾದರೆ ಈ ಯುಎಪಿಎ ಕಾಯ್ದೆ ಎಂದರೇನು ? ಈ ಕಾಯ್ದೆಯಡಿ ಕೇಂದ್ರ ಗೃಹ ಇಲಾಖೆಗೆ ಇರುವ ಅಧಿಕಾರಗಳೇನು ? ದೇಶದಲ್ಲಿ ಗಲಭೆಗಳಿಗೆ ಕಾರಣವಾಗುವ ವಿಚಿದ್ರಕಾರಿ ಶಕ್ತಿಗಳಿಗೆ ಇದು ಹೇಗೆ ಭಯ ಹುಟ್ಟಿಸುತ್ತಿದೆ ? ಎಂಬುದಕ್ಕೆ ನಾವು ಈ ವರದಿಯಲ್ಲಿ ಸಂಪೂರ್ಣ ಮಾಹಿತಿ ತಿಳಿಯೋಣ.
ಯುಎಪಿಎ ಕಾನೂನು ಎಂದರೇನು?
Vice President Election 2022: NDA ತನ್ನ ಉಪರಾಷ್ಟ್ರಪತಿ ಅಭ್ಯರ್ಥಿಯನ್ನು ಘೋಷಿಸಿದ ಒಂದು ದಿನ ಬಳಿಕ ವಿಪಕ್ಷಗಳೂ ಕೂಡ ತನ್ನ ಉಪರಾಷ್ಟ್ರಪತಿ ಅಭ್ಯರ್ಥಿಯನ್ನು ಘೋಷಿಸಿವೆ. ಮಾರ್ಗಾರೆಟ್ ಆಳ್ವಾ ವಿಪಕ್ಷಗಳ ಉಪರಾಷ್ಟ್ರಪತಿ ಅಭ್ಯರ್ಥಿಯಾಗಲಿದ್ದಾರೆ. ಎಲ್ಲಾ ಪ್ರತಿಪಕ್ಷಗಳ ಸಭೆಯ ಬಳಿಕ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಮಾರ್ಗಾರೆಟ್ ಆಳ್ವಾ ಅವರ ಹೆಸರಿನ ಘೋಷಣೆ ಮಾಡಿದ್ದಾರೆ.
ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್ಡಿಎ) ಶನಿವಾರದಂದು ಭಾರತದ ಉಪರಾಷ್ಟ್ರಪತಿ ಹುದ್ದೆಗೆ ತನ್ನ ಅಭ್ಯರ್ಥಿಯಾಗಿ ಜಗದೀಪ್ ಧನಕರ್ ಅವರನ್ನು ಹೆಸರನ್ನು ಘೋಷಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.