ಕೊಪ್ಪಳ: ಚರಂಡಿಯಲ್ಲಿ ಅನಾಥ ನವಜಾತ ಶಿಶುವಿನ ಶವವೊಂದು ಪತ್ತೆಯಾಗಿದೆ. ಕೊಪ್ಪಳ ಜಿಲ್ಲೆ ‌ಕುಷ್ಟಗಿ ತಾಲೂಕಿನ ತಾವರಗೇರ ಪಟ್ಟಣದಲ್ಲಿ ಈ ಘಟನೆ ನಡೆದಿದೆ.


COMMERCIAL BREAK
SCROLL TO CONTINUE READING

ಚರಂಡಿ ನೀರಿನಲ್ಲಿ ಮಗುವಿನ ಮೃತ ದೇಹ ತೇಲಿ ಬಂದಿದೆ. ತಾವರಗೇರ ಪಟ್ಟಣದ ಹೃದಯ ಭಾಗದಲ್ಲಿನ ಚರಂಡಿಯಲ್ಲಿ ಶಿಶು ಕಳೆಬರ ಪತ್ತೆಯಾಗಿದೆ. ಅವಧಿ ಪೂರ್ವ ಹೆರಿಗೆ ಆಗಿರುವಂತೆ ಶಿಶು ಕಾಣುತ್ತಿದೆ. ಚರಂಡಿಗೆ ಎಸೆದಿರುವ ಶಿಶುವಿನ ತಾಯಿ ಯಾರು ಎಂದು ತಿಳಿದು ಬಂದಿಲ್ಲ.  


ಇದನ್ನೂ ಓದಿ: ರಾಜ್ಯದ ಸಚಿವ ಸಂಪುಟ ನಿರ್ಣಯಗಳ ಬಗ್ಗೆ ಹೆಚ್.ಡಿ.ಕುಮಾರಸ್ವಾಮಿ ಟೀಕೆ


ಚರಂಡಿಯಲ್ಲಿ ನವಜಾತ ಶಿಶುವಿನ ಮೃತದೇಹ ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನೆ ಹಿನ್ನೆಲೆ ಹತ್ತಾರು ಅನುಮಾನಗಳು ಹುಟ್ಟಿಕೊಂಡಿವೆ. ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ತಾವರಗೇರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.


ಇದನ್ನೂ ಓದಿ: Grey parrot: ಕೊನೆಗೂ ಮಾಲೀಕರ ಕೈಸೇರಿದ ಮಿಸ್ಸಿಂಗ್ ‘ರುಸ್ತುಮಾ’..!


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.