ಬೆಳಗಾವಿ: ಅಂತರರಾಜ್ಯ ಮನೆ ಕಳ್ಳನನ್ನ ಬಂಧಿಸುವಲ್ಲಿ ಖಾನಾಪೂರ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತನಿಂದ ಲಕ್ಷಾಂತರ ಮೌಲ್ಯದ ಬಂಗಾರದ ಆಭರಣ ಮತ್ತು ಒಡವೆ ವಶಕ್ಕೆ  ಪಡೆದು ಆರೋಪಿಯನ್ನ ಜೈಲಿಗಟ್ಟಿದ್ದಾರೆ.


COMMERCIAL BREAK
SCROLL TO CONTINUE READING

ಹೌದು, ಬೆಳಗಾವಿ ಜಿಲ್ಲೆಯ ಖಾ‌ನಾಪೂರ ತಾಲೂಕಿನ ಗ್ರಾಮೀಣ ಭಾಗದಲ್ಲಿ 2021 ರಿಂದ 2024 ವರೆಗೆ ಕಳ್ಳತನ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿರುವ  ಪೊಲೀಸರು  ಕಳ್ಳನನ್ನ  ಬಂಧಿಸಿದ್ದಾರೆ.


ಇದನ್ನೂ ಓದಿ- Bangalore robbery case: ಉಂಡ ಮನೆಗೆ ಕನ್ನ ಹಾಕಿ ನವರಂಗಿ ನಾಟಕವಾಡಿದ್ದ ಕಳ್ಳಿ ಅಂದರ್


ಕಲ್ಲೇಹೊಳ ಗ್ರಾಮದ 35 ವರ್ಷದ ಪರಶುರಾಮ ನಾನಾ ಗೌಂಡಾಡಕರ ಬಂಧಿತ ಆರೋಪಿಯಾಗಿದ್ದಾನೆ.


ಇದನ್ನೂ ಓದಿ- ಬೆಂಕಿಗೆ ಫ್ಯಾಕ್ಟರಿ ಸುಟ್ಟು ಭಸ್ಮ: ಸಾಲ ತೀರಿಸಲು ಕಳ್ಳತನಕ್ಕಿಳಿದ ಎಂಜಿನಿಯರ್ ಬಂಧನ


ಬೆಳಗಾವಿ ಜಿಲ್ಲೆಯ ಖಾನಾಪೂರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸುಮಾರು 12 ಹಗಲು ಮನೆ ಕಳ್ಳತನ ಪ್ರಕರಣಗಳನ್ನು ಪತ್ತೆ ಮಾಡಿ ಆತನಿಂದ ಒಟ್ಟು 673.4 ಗ್ರಾಂ. ಬಂಗಾರದ ಆಭರಣಗಳು ಹಾಗೂ ಒಟ್ಟು 627 ಗ್ರಾಂ. ಬೆಳ್ಳಿಯ ಆಭರಣ ಸೇರಿದಂತೆ  16,000 ರೂಪಾಯಿ  ನಗದು ಹಣವನ್ನು ವಶಪಡಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.