ಬೆಂಕಿಗೆ ಫ್ಯಾಕ್ಟರಿ ಸುಟ್ಟು ಭಸ್ಮ: ಸಾಲ ತೀರಿಸಲು ಕಳ್ಳತನಕ್ಕಿಳಿದ ಎಂಜಿನಿಯರ್ ಬಂಧನ

ಒಂದು ಕಡೆ ಇನ್ಶುರೆನ್ಸ್ ನಿಂದ ಬಂದ ಹಣ ಫ್ಯಾಕ್ಟರಿ ಕ್ಲೀನ್ ಮಾಡಿಸೋಕೆ ಮಾಡಿದ ಸಾಲಕ್ಕೆ ಬಡ್ಡಿ ಕಟ್ಟಲು ಆಗದೆ ಸಾಲದ ಮೇಲೆ ಸಾಲ‌ ಮಾಡಿದ್ದ. ಇದೇ ಸಾಲ ತೀರಿಸೋಕೆ ಸ್ವಂತ ಮನೆ ಕೂಡ ಮಾರಿಕೊಂಡಿದ್ದ. ಕೊನೆಗೆ ಸಾಲ ಹೆಚ್ಚಾದಾಗ ಆತ ಆಯ್ಕೆ ಮಾಡಿಕೊಂಡಿದ್ದು ಮನೆಗಳ್ಳತನವನ್ನು.   

Written by - VISHWANATH HARIHARA | Last Updated : Jan 30, 2024, 01:11 PM IST
  • ಪ್ಯಾಕ್ಟರಿಗೆ ಬೆಂಕಿ ಬಿದ್ದು ಸಂಪೂರ್ಣ ಸುಟ್ಟು ಹೋಗಿತ್ತು
  • ಪ್ಯಾಕ್ಟರಿಗೆ ಬೆಂಕಿ ಬಿದ್ದ ಹಿನ್ನೆಲೆ 80 ಲಕ್ಷ ನಷ್ಟ ಉಂಟಾಗಿತ್ತು
  • ಅದರೆ ಇನ್ಶ್ಯೂರೆನ್ಸ್ ಕ್ಲೈ ಮಾಡಿದ ಮದನ್ ಕುಮಾರ್ ಗೆ ಕೇವಲ ಎರಡು ಲಕ್ಷ ಸಿಕ್ಕಿತ್ತು
ಬೆಂಕಿಗೆ ಫ್ಯಾಕ್ಟರಿ ಸುಟ್ಟು ಭಸ್ಮ: ಸಾಲ ತೀರಿಸಲು ಕಳ್ಳತನಕ್ಕಿಳಿದ ಎಂಜಿನಿಯರ್ ಬಂಧನ title=

ಬೆಂಗಳೂರು: ಆತ ಓದಿದ್ದು ಬಿಇ ಮೆಕ್ಯಾನಿಕಲ್ ಎಂಜಿನಿಯರಿಂಗ್. ಹೆಸರು ಮದನ್ ಕುಮಾರ್. ಸ್ವಂತ ಫ್ಯಾಕ್ಟರಿ ಇಟ್ಟುಕೊಂಡು ಹತ್ತಾರು ಜನಕ್ಕೆ ಉದ್ಯೋಗ ನೀಡಿ ಐಷಾರಾಮಿ ಜೀವನ ನಡೆಸುತ್ತಿದ್ದ. ಆದರೆ ವಿಧಿ ಆತನ ಲೈಫ್ ನಲ್ಲಿ ಆಟ ಆಡಿತ್ತು.‌ ಕಳೆದ ಎರಡು ವರ್ಷದ ಹಿಂದೆ ಆತ ನಡೆಸುತ್ತಿದ್ದ ಅಲ್ಯೂಮಿನಿಯಂ ಫ್ಯಾಕ್ಟರಿ ಗೆ ಬೆಂಕಿ ಬಿದ್ದಿತ್ತು. ಬೆಂಕಿಯಿಂದ ಇಡೀ ಫ್ಯಾಕ್ಟರಿ ಸುಟ್ಟು ಭಸ್ಮವಾಗಿ ಸುಮಾರು 80ಲಕ್ಷ ರೂ.ವರೆಗೆ‌ ಲಾಸ್ ಮಾಡಿಕೊಂಡಿದ್ದ. ಆದರೆ ಈತನ ದುರಾದೃಷ್ಟಕ್ಕೆ ಇನ್ಶುರೆನ್ಸ್ ಸಹ ಕೈ ಕೊಟ್ಟಿತ್ತು. 80 ಲಕ್ಷ ರೂ. ಲಾಸ್ ಆದರೂ ಸಹ ಇನ್ಶುರೆನ್ಸ್ ನಿಂದ ಬಂದಿದ್ದು ಕೇವಲ 2 ಲಕ್ಷ ಹಣವಂತೆ. 

ಒಂದು ಕಡೆ ಇನ್ಶುರೆನ್ಸ್ ನಿಂದ ಬಂದ ಹಣ ಫ್ಯಾಕ್ಟರಿ ಕ್ಲೀನ್ ಮಾಡಿಸೋಕೆ ಮಾಡಿದ ಸಾಲಕ್ಕೆ ಬಡ್ಡಿ ಕಟ್ಟಲು ಆಗದೆ ಸಾಲದ ಮೇಲೆ ಸಾಲ‌ ಮಾಡಿದ್ದ. ಇದೇ ಸಾಲ ತೀರಿಸೋಕೆ ಸ್ವಂತ ಮನೆ ಕೂಡ ಮಾರಿಕೊಂಡಿದ್ದ. ಕೊನೆಗೆ ಸಾಲ ಹೆಚ್ಚಾದಾಗ ಆತ ಆಯ್ಕೆ ಮಾಡಿಕೊಂಡಿದ್ದು ಮನೆಗಳ್ಳತನವನ್ನು. 

ಇದನ್ನೂ ಓದಿ- ಮೃತನ ಪ್ಯಾಂಟ್ ಜೇಬಿನಲ್ಲಿ ಸಿಕ್ಕ ನಂಬರ್ ಕೊಟ್ಟಿತ್ತು ಹಂತಕರ ಸುಳಿವು..!

ಮೊದಲೇ ಎಂಜಿನಿಯರ್‌ ಆಗಿದ್ದ ಮದನ್ ಕಳ್ಳತನ ಮಾಡುವ ಮೊದಲು ಯೂಟ್ಯೂಬ್ , ಸಿನಿಮಾ ಕ್ರೈಂ ಸ್ಟೋರಿ ನೋಡಿ ಹೇಗೆ ಕಳ್ಳತನ ಮಾಡಬೇಕು. ಸಾಕ್ಷಿ ಸಿಗದಂತೆ ಏನೂ ಮಾಡಬೇಕು ಎಂದು ತಿಳಿದುಕೊಂಡಿದ್ದ. ತನ್ನ ಫ್ಯಾಕ್ಟರಿ ಇದ್ದ ಕೆಪಿ ಅಗ್ರಹಾರದ ಟೆಲಿಕಾಂ ಲೇಔಟ್ ನಲ್ಲೆ ಒಂದು ಮನೆಯನ್ನ ಕಳ್ಳತನಕ್ಕೆ ಆಯ್ಕೆ  ಮಾಡಿಕೊಂಡಿದ್ದ. 

ಇದನ್ನೂ ಓದಿ- ಮೊಬೈಲ್ ಪತ್ತೆಯಲ್ಲಿ ರಾಜ್ಯದಲ್ಲೇ ಮುಂಚೂಣಿಯಲ್ಲಿದೆ ಈ ಜಿಲ್ಲೆ

ವುಡ್ ಕಟರ್ ಮಶಿನ್ ನಿಂದ ಬಾಗಿಲನ್ನ ಕಟ್ ಮಾಡಿದ ಮದನ್ ಸೀದಾ ಮನೆಗೆ ನುಗ್ಗಿ ಸುಮಾರು 300ಗ್ರಾಂ ಚಿನ್ನಾಭರಣ ದೋಚಿದ್ದಾನೆ. ಪಕ್ಕದಲ್ಲಿದ್ದ ಮತ್ತೊಂದು ಕಬ್ಬಿಣದ ಲಾಕರ್ ನಲ್ಲಿ ಸುಮಾರು 2 ಕೆಜಿ ಚಿನ್ನಾಭರಣವಿತ್ತು. ಮನೆಯವರ ಅದೃಷ್ಟಕ್ಕೆ ಕಬ್ಬಿಣದ ಲಾಕರ್ ಬ್ರೇಕ್ ಮಾಡಲಾಗದೆ ಮದನ್ ಹಾಗೆ ಬಿಟ್ಟು ಬಂದಿದ್ದ. ಚಿನ್ನಾಭರಣದ ಜೊತೆಗೆ ಇದ್ದ ಪಾಸ್ ಪೋರ್ಟ್  ಸೇರಿ ವಿವಿಧ ದಾಖಲಾತಿಗಳನ್ನು ಮದನ್ ಕದ್ದು ಪರಾರಿಯಾಗಿದ್ದ. ಇನ್ನು ಫಿಂಗರ್ ಪ್ರಿಂಟ್ ಸಿಗಬಾರದು ಅಂತ ಹ್ಯಾಂಡ್ ಗ್ಲೋಸ್ ಯೂಸ್ ಮಾಡಿದ್ನಂತೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಕೆಪಿ ಅಗ್ರಹಾರ ಇನ್ಸ್ಪೆಕ್ಟರ್ ರವಿಪ್ರಕಾಶ್ ಅಂಡ್ ಟೀಮ್ ಆರೋಪಿ ಮದನ್ ಬಂಧಿಸಿ 300 ಗ್ರಾಂ ಚಿನ್ನಾಭರಣ ಹಾಗೂ ದಾಖಲೆಗಳನ್ನ ಸೀಜ್ ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News