Crime News In Kannada: ನಿಮ್ಮಂಗಡಿಗೆ ಅಥವಾ ನಿಮ್ಮ ಮನೆಗೆ ಬಂದು ಯಾರಾದ್ರೂ ಸ್ವಲ್ಪ ಹೊತ್ತು ಬ್ಯಾಗ್ ಇಲ್ಲಿ ಇಟ್ಟು ಹೋಗ್ತಿನಿ ಅಂದ್ರೆ, ನೀವು ಕೊಂಚ ಎಚ್ಚೆತ್ತುಕೊಳ್ಳಬೇಕಾಗುತ್ತೆ. ಯಾಕಂದ್ರೆ ಆ ಬ್ಯಾಗ್ ನಲ್ಲಿ ಏನಿರುತ್ತೆ ಎಂದು ಸುಲಭವಾಗಿ ಊಹಿಸಲು ಸಾಧ್ಯವೇ ಆಗುವುದಿಲ್ಲ.  ಹೀಗಾಗಿ ಸ್ವಲ್ಪ ನೀವು ಹುಷಾರಾಗಿರಬೇಕಾಗುತ್ತೆ.  ಇಲ್ಲೂ ಕೂಡ ಅಂತಹುದ್ದೇ ಒಂದು ದುರ್ಘಟನೆ ಸಂಭವಿಸಿದೆ. ಈ ಘಟನೆಯಲ್ಲಿ ಪರಿಚಯ ಇಲ್ಲದವರು, ಪರಿಚಯಸ್ಥರಂತೆ, ನಟಿಸಿ, ಈತನ ಅಂಗಡಿಯಲ್ಲಿ ಬ್ಯಾಗ್ ಗಳನ್ನು ಇಟ್ಟು ಸಂತೆಗೆ ಹೋಗಿದ್ದಾರೆ.  ಪರಿಣಾಮ ಆ ಬ್ಯಾಗ್ ಭಾರಿ ಸದ್ದಿನೊಂದಿಗೆ ಸ್ಫೋಟಗೊಂಡಿದೆ.  ಯಾಮಾರಿ ಅಂಗಡಿಯಲ್ಲಿ ಬ್ಯಾಗ್ ಇಟ್ಟುಕೊಂಡ ವರ್ತಕ ಈಗ ಸುಟ್ಟ ಗಾಯಗಳಿಂದ ಆಸ್ಪತ್ರೆ ಸೇರುವಂತಾಗಿದೆ.....!!


COMMERCIAL BREAK
SCROLL TO CONTINUE READING

ಹೌದು, ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಬಸ್ ನಿಲ್ದಾಣದ ಮುಂಭಾಗದಲ್ಲಿ ನಿನ್ನೆ (ಫೆ. 18) ಭಾನುವಾರ ನಡೆಯಬಾರದ ಘಟನೆಯೊಂದು ನಡೆದು ಹೋಗಿದೆ.  ಬೇಸಿಗೆಯ ಉರಿ ಬಿಸಿಲಿನ ನಡುವೆ ಭಾರಿ ಸದ್ದಿನೊಂದಿಗೆ ಸ್ಫೋಟ ಸಂಭವಿಸಿದ್ದು, ಕೆಲ ಕ್ಷಣ ಇಲ್ಲಿ ಏನಾಗುತ್ತಿದೆ ಎಂದು ಯಾರಿಗೂ ತಿಳಿಯದಾಗಿದೆ.  ಶಿರಾಳಕೊಪ್ಪದ ಸಂತೆಗಾಗಿ ಬಂದಿದ್ದ ಹಾವೇರಿಯ ಕುಟುಂಬವೊಂದು ಇಲ್ಲಿ ರಗ್ ಮಾರುವ ಆ್ಯಂಡೋನಿ ದಾಸ್ ಎಂಬುವವರ ಅಂಗಡಿಗೆ ಬಂದು ರಗ್ ಖರೀದಿಸಿದ್ದಾರಂತೆ.  ಈ ವೇಳೆ ಸಂತೆಗೆ ಹೋಗಿ ಬರ್ತಿವಿ, ನಮ್ಮ ಬ್ಯಾಗ್ ಇಟ್ಟುಕೊಳ್ಳಿ ಎಂದು ಹೇಳಿ ಹೋಗಿದ್ದಾರೆ ಅಷ್ಟೇ.  ಅಷ್ಟರಲ್ಲಿ ಆ ಬ್ಯಾಗ್ ಗೆ ಆ್ಯಂಡೋನಿ ದಾಸ್ ಕಾಲು ತಾಗಿದ್ದು, ಈ ವೇಳೆ ಭಾರಿ ಸದ್ದಿನೊಂದಿಗೆ ಸಿಡಿಮದ್ದು ಸ್ಫೋಟಗೊಂಡಿದೆ.


ಇದನ್ನೂ ಓದಿ- ತಂಗಿಯ ಎಂಗೆಜ್ಮೆಂಟ್‌ಗೆ ಬಾರದ ಪತ್ನಿಗೆ ಚಾಕು ಇರಿದ ಪತಿರಾಯ..!


ಅಂದಹಾಗೆ, ಕಾಡುಪ್ರಾಣಿಗಳ ಬೇಟೆಗೆ ಬಳಸುವ ಸಿಡಿಮದ್ದು ಇದಾಗಿದ್ದು, ವರ್ತಕನ ಕಾಲು ತಾಕಿದೊಡನೆ ಏಕಾಏಕಿ ಸಿಡಿಮದ್ದು ಸ್ಫೋಟಗೊಂಡಿದೆ.  ಉಮೇಶ್ ಹಾಗೂ ರೂಪ ದಂಪತಿ ತಂದಿದ್ದ ಬ್ಯಾಗ್ ನಲ್ಲಿದ್ದ ಈ ಸಿಡಿಮದ್ದು ಇತ್ತೆಂದು ವರದಿಯಾಗಿದೆ. ಆದಾಗ್ಯೂ, ಈ ದಂಪತಿ  ಏತಕ್ಕಾಗಿ ಸಿಡಿಮದ್ದನ್ನು ತಂದಿದ್ದರು.  ಯಾಕೆ, ಎಲ್ಲಿ ಕೊಂಡೊಯ್ಯುತ್ತಿದ್ದರು ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.  


ಈಗಾಗಲೇ ಸಿಡಿಮದ್ದು ತಂದಿದ್ದ ಉಮೇಶ್, ದಂಪತಿ ವಿಚಾರಣೆ ನಡೆಸಲಾಗುತ್ತಿದೆ.  ಪ್ರಾಥಮಿಕ ತನಿಖೆ ವರದಿ ಪ್ರಕಾರ ಕಾಡು ಹಂದಿಗೆ ಬಳಸಲು ತಂದಿದ್ದ ಸಿಡಿಮದ್ದು ಸ್ಪೋಟಗೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಗಾಯಾಳುವನ್ನು ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಲಾಗಿದೆ.


ಇದನ್ನೂ ಓದಿ- ರಶ್‌ ಬಸ್‌ನಲ್ಲಿ ಪ್ರಯಾಣಿಸುತ್ತೀರಾ..? ಎಚ್ಚರಿಕೆ..! ಇಂತಹ ಕಿಲಾಡಿ ಲೇಡಿ ಗ್ಯಾಂಗ್‌ ಇರುತ್ತೆ


ಒಟ್ಟಾರೆ, ಉರಿ ಬಿಸಿಲಿನ ನಡುವೆಯೂ ಕೂಲ್ ಆಗಿದ್ದ ಶಿವಮೊಗ್ಗದಲ್ಲಿ ಭಾರಿ ಸದ್ದಿನೊಂದಿಗೆ ಸ್ಫೋಟ ಸಂಭವಿಸಿದ್ದು, ಇದು ಎಲ್ಲರ ನಿದ್ದೆಗೆಡಿಸುವಂತಾಗಿದೆ.  ಈ ಸ್ಫೋಟ ಶಿವಮೊಗ್ಗ ಶಿರಾಳಕೊಪ್ಪದಲ್ಲಿ ಸಂಭವಿಸಿದ್ದು, ಎಲ್ಲರ ಚಿತ್ತ ಶಿವಮೊಗ್ಗದತ್ತ ಎಂಬಂತಾಗಿದೆ.  ಏನೆಯಾಗ್ಲೀ, ಈ ಪ್ರಕರಣದಿಂದಾಗಿ ಯಾರೇ ಪರಿಚಯಸ್ಥರು ಬಂದು ಒಂದೆರಡು ನಿಮಿಷ ನಮ್ಮ ಬ್ಯಾಗ್ ಇಲ್ಲಿ ಇಟ್ಟು ಹೋಗಿ ಬರ್ತೀವಿ ಎಂದರೂ ಅವರನ್ನೂ ಅನುಮಾನದಿಂದಲೇ ನೋಡುವಂತಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.