ಅನ್ನ ಹಾಕಿದ ಮಾಲೀಕರ ಹಣಕ್ಕೆ ಕಣ್ಣಾಕಿದ ಕಿರಾತಕ ಅಂದರ್‌..! 

ಖಾಲಿ ಪೀಲಿ ಓಡಾಡಿಕೊಂಡವನಿಗೆ ಕೆಲಸ ಕೊಟ್ಟು ಅನ್ನ ಹಾಕಿದವರು ಸೀರಿಯಲ್ ಪ್ರೊಡಕ್ಷನ್ ಹೌಸ್ ನ ಮಾಲೀಕರಾದ ಲಕ್ಷ್ಮೀ. ತನ್ನ ಪ್ರೊಡಕ್ಷನ್ ಹೌಸ್ ನ ಮ್ಯಾನೇಜರ್ ಅಗಿ ಮಾಡಿ ಹಣದ ವ್ಯವಹಾರ ನೋಡಿಕೊಳ್ಳಲು ಹೇಳಿದ್ರು. ಕೆಲಸಕ್ಕೆ ಸೇರಿದ ಆರಂಭದಲ್ಲಿ ಮಾಲೀಕರ ನಂಬಿಕೆ ಗಳಿಸಿದ್ದ.. ಆದರೆ...

Written by - VISHWANATH HARIHARA | Edited by - Krishna N K | Last Updated : Feb 16, 2024, 07:31 PM IST
  • ಆತ ಉಂಡ ಮನೆಗೆ ದ್ರೋಹ ಬಗೆದ ಕಿರಾತಕ
  • ಲಕ್ಷ ಲಕ್ಷ ಪಂಗನಾಮ ಹಾಕಿದ ಮನೆ ಮುರುಕ
  • ಕಿಡ್ನಾಪ್ ನಾಟಕ ಮಾಡಿ ಕೋಟಿ ಡಿಮ್ಯಾಂಡ್ ಮಾಡಿದ ಗ್ಯಾಂಗ್ ಬಂಧನ
ಅನ್ನ ಹಾಕಿದ ಮಾಲೀಕರ ಹಣಕ್ಕೆ ಕಣ್ಣಾಕಿದ ಕಿರಾತಕ ಅಂದರ್‌..!  title=

ಬೆಂಗಳೂರು : ಆತ ಉಂಡ ಮನೆಗೆ ದ್ರೋಹ ಬಗೆದ ಕಿರಾತಕ.. ನಂಬಿಕೆಯನ್ನೇ ಬಂಡವಾಳ ಮಾಡಿಕೊಂಡು‌ ಲಕ್ಷ ಲಕ್ಷ ಪಂಗನಾಮ ಹಾಕಿದ ಮನೆ ಮುರುಕ. ಅಗಿದ್ದು ಆಯ್ತು ಹೋಗು ಎಲ್ಲಾದ್ರು ಬದ್ಕೊ ಅಂತ ಕಳಿಸಿದವರಿಗೆ, ಈಗ ಸ್ಕೆಚ್ ಹಾಕಿ ಕಿಡ್ನಾಪ್ ಮಾಡಿಸಿದ್ದ. ಹೀಗೆ ದ್ವೇಷದ ಕೂಪಕ್ಕೆ ಬಿದ್ದು ತನ್ನ‌ ಜೊತೆಗೆ ಸಹಚರರನ್ನು ಜೈಲು ಸೇರುವಂತೆ ಮಾಡಿದ ಸ್ಟೋರಿ ಇಲ್ಲಿದೆ.

ಈತನ ಹೆಸರು ಕಿರಣ್.. ಖಾಲಿ ಪೀಲಿ ಓಡಾಡಿಕೊಂಡವನಿಗೆ ಕೆಲಸ ಕೊಟ್ಟು ಅನ್ನ ಹಾಕಿದವರು ಸೀರಿಯಲ್ ಪ್ರೊಡಕ್ಷನ್ ಹೌಸ್ ನ ಮಾಲೀಕರಾದ ಲಕ್ಷ್ಮೀ. ತನ್ನ ಪ್ರೊಡಕ್ಷನ್ ಹೌಸ್ ನ ಮ್ಯಾನೇಜರ್ ಅಗಿ ಮಾಡಿ ಹಣದ ವ್ಯವಹಾರ ನೋಡಿಕೊಳ್ಳಲು ಹೇಳಿದ್ರು. ಕೆಲಸಕ್ಕೆ ಸೇರಿದ ಆರಂಭದಲ್ಲಿ ಮಾಲೀಕರ ನಂಬಿಕೆ ಗಳಿಸಿದ್ದ. ಅದನ್ನೇ ಬಂಡವಾಳ ಮಾಡಿಕೊಂಡು ಸುಮಾರು‌ 70 ಲಕ್ಷ ಹಣವನ್ನು ವಂಚಿಸಿದ್ದ. ಈ ವಿಷಯ ತಿಳಿದ ಬೆನ್ನಲ್ಲೆ ಪೊಲೀಸರಿಗೆ ದೂರು ನೀಡದೆ, ಬದುಕಿಕೊಳ್ಳಲಿ ಅಂತಾ ಕಿರಣ್ ನನ್ನ ಕೆಲಸದಿದ್ದ ತೆಗೆದಿದ್ರು. ಆದ್ರೆ ಇದನ್ನ ವೈಯಕ್ತಿಕವಾಗಿ ತೆಗೆದುಕೊಂಡ ಕಿರಣ್ ಮಾಲೀಕರ ಹಣಕಾಸಿನ ವ್ಯವಹಾರ ಅರಿತಿದ್ದ ಹಿನ್ನೆಲೆ ಕೋಟಿ ಕೋಟಿ ದೋಚುವ ದುರಾಸಗೆ ಬಿದ್ದಿದ್ದ. ಅದಕ್ಕಾಗಿ ಮಾಸ್ಟರ್ ಪ್ಲಾನ್ ಮಾಡಿದ ಕಿರಣ್ ರೌಡಿಶೀಟರ್ ಸಂಪರ್ಕ ಮಾಡಿ ಇಬ್ಬರನ್ನ ಕಿಡ್ನಾಪ್ ಮಾಡಿ ಒಂದು ಕೋಟಿಗೆ ಡಿಮ್ಯಾಂಡ್ ಮಾಡಿಸಿದ್ದ. 

ಇದನ್ನೂ ಓದಿ:ಏನಿಲ್ಲಾ... ಏನಿಲ್ಲಾ... ಅಂತ ರಾಗ ಎಳೆದ, BJP ಯವರ ತಲೆಯಲ್ಲಿ ಏನೂ ಇಲ್ಲ : ಸಿಎಂ

ಇನ್ನು ಯಾವಾಗ ಮಾಲೀಕರು ಕೆಲಸದಿಂದ ತೆಗೆದ್ರೊ ತನ್ನ ದೊಡ್ಡಪ್ಪನ ಮಗ ರೌಡಿಶೀಟರ್ ಅಗಿದ್ದ ಶ್ರೀನಿವಾಸ್ ಅಲಿಯಾಸ್ ಸೀನಾನನ್ನ‌ ಮೀಟ್ ಮಾಡಿದ್ದ. ಲಕ್ಷ್ಮೀ ಎಂಬುವರು ಬ್ಲಾಕ್ ಮನಿ ಇಟ್ಟುಕೊಂಡು ಕೋಟ್ಯಾಂತರ ರೂಪಾಯಿ ವ್ಯವಹಾರ ಮಾಡುತ್ತಾರೆ. ಅವರ ಮ್ಯಾನೇಜರ್ ಕಿಡ್ನಾಪ್ ಮಾಡಿದ್ರೆ ಹಣ ಮಾಡಬಹುದು. ಅವರು ಬ್ಲಾಕ್ ಮನಿ ವ್ಯವಹಾರ ಮಾಡುವುದರಿಂದ ಕಂಪ್ಲೇಂಟ್ ಮಾಡುವುದಿಲ್ಲ ಎಂದು ನಂಬಿಸಿದ್ದ. ಇದನ್ನ ನಂಬಿದ ರೌಡಿಶೀಟರ್ ಶ್ರೀನಿವಾಸ್ ತನ್ನ ಸಹಚರರಾದ ಹೇಮಂತ್, ತೇಜಸ್, ಕುಲ್ದೀಪ್ ಸಿಂಗ್ ಮತ್ತು ಮೋಹನ್ ಕಿಡ್ನಾಪ್ ಮಾಡಲು ರೆಡಿ ಮಾಡಿದ್ದ.

ದೂರುದಾರೆಯ ಮ್ಯಾನೇಜರ್ ನಾಗೇಶ್ ಮತ್ತು ಅವರ ಚಾಲಕ ಹೇಮಂತ್ ನನ್ನ ಕಿಡ್ನಾಪ್ ಮಾಡಿ ನಗರದ ಹೊರವಲಯದ ಫಾರ್ಮ್ ಹೌಸ್ ಅಲ್ಲಿ ಇಡಲಾಗಿತ್ತು. ಬಳಿಕ ದೂರುದಾರೆಗೆ ಕರೆ ಮಾಡಿ ಒಂದು ಕೋಟಿ ಹಣ ಕೊಡಬೇಕು. ಇಲ್ಲವಾದಲ್ಲಿ ನಿಮ್ಮ ಚಾಲಕ ಹೇಮಂತ್ ಮತ್ತು ನಾಗೇಶ್ ಕೊಲೆ ಮಾಡುವುದಾಗಿ ಡಿಮ್ಯಾಂಡ್ ಜೊತೆ ಬೆದರಿಕೆ ಹಾಕಿದ್ರು. ವಿಷಯ ತಿಳಿದ ಮಹಾಲಕ್ಷ್ಮೀಲೇಔಟ್ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಗಳನ್ನ ಬಂಧಿಸಿದ್ದಾರೆ.

ಇದನ್ನೂ ಓದಿ:ಹೋಟೆಲ್ ಮ್ಯಾನೇಜ್‍ಮೆಂಟ್ ತರಬೇತಿ: ನೋಂದಣಿಗೆ ಆಹ್ವಾನ

ಇನ್ನು ಆರೋಪಿಗಳ ಬಂಧಿಸಿ ವಿಚಾರಣೆ ವೇಳೆ ಕಿರಣ್ ನನ್ನ ಕೆಲಸದಿದ ತೆಗೆದ ಹಿನ್ನೆಲೆ ಕಿಡ್ನಾಪ್ ಮಾಡಿ ಹಣಕ್ಕೆ ಡಿಮ್ಯಾಂಡ್ ಮಾಡಿರುವುದು ಬೆಳಕಿಗೆ ಬಂದಿದ್ದೆ. ಸದ್ಯ ಆರು ಜನ ಆರೋಪಿಗಳ ಬಂಧನ ಮಾಡಿರುವ ಖಾಕಿ ಜೈಲಿಗೆ ಕಳಿಸಿದೆ. ಅದೇನೆ ಇರಲಿ ಖಾಕಿ ಇದ್ದವನಿಗೆ ಕರೆದು ಅನ್ನ ಹಾಕಿದ ಮನೆಗೆ ಎರಡು ಬಗೆದ ಪಾಪಿ ಪರಪ್ಪನ ಅಗ್ರಹಾರ ಸೇರಿದ್ದಾನೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News