ಮೈಸೂರು: ಮೊದಲ ಪತಿಯಿಂದ ದೂರಾದ ಮೇಲೆ ಮೈಸೂರು ಮೂಲದ ಆದಿಲ್‌ ಖಾನ್‌ ದುರಾನಿಯನ್ನು ಮದುವೆಯಾಗಿದ್ದ ಬಾಲಿವುಡ್‍ನ ಖ್ಯಾತ ನಟಿ ರಾಖಿ ಸಾವಂತ್ ಆತನಿಂದಲೂ ಮೋಸ ಹೋಗಿದ್ದಾರೆ. ದೇವರು ದೊಡ್ಡವನು, ನಾನು ಫ್ರಿಡ್ಜ್‌ನಲ್ಲಿ ಶವ ಆಗುವುದನ್ನು ತಡೆದ ಎಂದು ರಾಖಿ ಕಣ್ಣೀರಿಟ್ಟಿದ್ದಾರೆ.  


COMMERCIAL BREAK
SCROLL TO CONTINUE READING

ಬುಧವಾರ ಮೈಸೂರಿನ ಕೋರ್ಟ್‍ಗೆ ಆಗಮಿಸಿದ ನಟಿ ರಾಖಿ ಸಾವಂತ್ ತನಗಾದ ಮೋಸದ ಬಗ್ಗೆ ಮಾಧ‍್ಯಮದವರ ಮುಂದೆ ಮಾಹಿತಿ ನೀಡಿದ್ದಾರೆ. ಇಂದು ಆದಿಲ್‍ನನ್ನು ಕೋರ್ಟ್‍ಗೆ ಕರೆತರಲಾಗಿದೆ. ನನಗೆ ನ್ಯಾಯ ಬೇಕೆಂದು ಕೋರ್ಟ್‌ಗೆ ಬಂದಿದ್ದೇನೆ. ನನ್ನ ಪತಿಯನ್ನು ಮುಂಬೈ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕೋರ್ಟ್ ಅವರಿಗೆ 7 ದಿನಗಳ ಪೊಲೀಸ್ ಕಸ್ಟಡಿಗೆ ಕೊಟ್ಟಿದ್ದಾರೆ. ನಾನು ನ್ಯಾಯಾಧೀಶರ ಮುಂದೆ ಹಾಜರಾಗಲು ಬಂದಿದ್ದೇನೆ‌ ಎಂದು ಹೇಳಿದ್ದಾರೆ.


ಇದನ್ನೂ ಓದಿ: Appu Devara male : ಅಯ್ಯಪ್ಪ ಸ್ವಾಮಿ ಮಾಲೆಯಂತೆ ʼಅಪ್ಪು ಮಾಲೆʼ.. ವೃತ ಈ ರೀತಿ ಮಾಡ್ಬೇಕಂತೆ..!


ಆದಿಲ್‍ನಿಂದ ಆದ ಮೋಸಕ್ಕೆ ನನಗೆ ನ್ಯಾಯ ಬೇಕು, ಆತನಿಗೆ ಯಾವುದೇ ಕಾರಣಕ್ಕೂ ಜಾಮೀನು ಸಿಗಬಾರದು. ಆತ ಕಾನೂನು ಬದ್ಧವಾಗಿ ನನ್ನನ್ನು ಮದುವೆಯಾಗಿದ್ದಾನೆ. ಅದರ ಎಲ್ಲಾ ದಾಖಲಾತಿಗಳು ನನ್ನ ಬಳಿ ಇದೆ. ನಾನು ಇಂದು ಬೆಳಗ್ಗೆ ಆದಿಲ್ ಖಾನ್ ತಂದೆ ಜೊತೆ ಮಾತನಾಡಿದೆ‌. ನಾನು ಹಿಂದೂ ಎಂಬ ಕಾರಣಕ್ಕೆ ಅವರು ಸ್ವೀಕಾರ ಮಾಡುತ್ತಿಲ್ಲ. ಹಾಗಾದ್ರೆ ನಾನು ಏನು ಮಾಡಲಿ? ನನ್ನ ಬಳಿ ಆದಿಲ್ 1.65 ಕೋಟಿ ರೂ. ಹಣ ಪಡೆದಿದ್ದಾನೆ‌. ಆದರೆ ನನಗೆ ಒಂದು ಪೈಸೆ ಕೊಟ್ಟಿಲ್ಲ‌’ವೆಂದು ಅಳಲು ತೋಡಿಕೊಂಡಿದ್ದಾಳೆ.


ಮೈಸೂರಿನ ಜನ ಸರಿ ಇಲ್ಲವೆಂದು ನನ್ನ ಬಳಿ ಹೇಳಿದ್ದ. ಇದರಿಂದ ಮುಂಬೈಗೆ ಬರುತ್ತೇನೆ ಅಂತಾ ಆದಿಲ್ ನನ್ನ ಬಳಿ ಹೇಳಿದ್ದ. ಆ ನಂತರ ಮುಂಬೈನಲ್ಲಿ ಸಾಕಷ್ಟು ಬಾರಿ ನನ್ನ ಮೇಲೆ ಹಲ್ಲೆ ಮಾಡಿದ್ದ. ಮೈಸೂರು ಕೋರ್ಟ್ ಮೇಲೆ ವಿಶ್ವಾಸ ಇದೆ, ಹೀಗಾಗಿ ನನಗೆ ನ್ಯಾಯ ಕೊಡಿಸಿ’ ಎಂದು ಮಾಧ್ಯಮಗಳ ಮುಂದೆ ಗಳಗಳನೇ ಅಳುತ್ತಾ ರಾಖಿ ಸಾವಂತ್ ಹೇಳಿಕೆ ನೀಡಿದ್ದಾರೆ.


ಇದನ್ನೂ ಓದಿ: ಮತ್ತೆ ರಾಜಕೀಯಕ್ಕೆ ಧುಮುಕಿದ ಹಿರಿಯ ನಟ ಅನಂತ್‌ನಾಗ್


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.