Mandya : ಮಂಡ್ಯದ ಜನತೆ ಹಾಗೂ ಅಂಬರೀಶ್‌ ಅಭಿಮಾನಿಗಳಿಗಾಗಿ ಈ ಔತನಕೂಟವನ್ನು ಏರ್ಪಡಿಸಲಾಗಿತ್ತು. ಅಂಬರೀಶ್‌ ಅವರ ಆಸೆಯಂತೆ ಮಗನ ಮದುವೆಗೆ ಮಂಡ್ಯದ ಜನತೆಗೆ ಬೊಂಬಾಟ್‌ ಬಾಡೂಟ ಹಾಕಿಸಿದ್ದಾರೆ. ಸಹಸ್ರಾರು ಸಂಖ್ಯೆಯಲ್ಲಿ ಜನ ಭಾಗಿಯಾಗಿದ್ದರು. 


COMMERCIAL BREAK
SCROLL TO CONTINUE READING

ಇನ್ನೂ ಇದೇ ಸಂದರ್ಭದಲ್ಲಿ ಅಭಿಷೇಕ್‌ ಹಾಗೂ ರೆಬೆಲ್‌ ಅಭಿಮಾನಿಗಳು ತಮ್ಮ ಅಭಿಮಾನವನ್ನು ಅಭಿ ಮನಸೋಲುವಂತೆ ವಿಶೇಷವಾಗಿ ತೋರಿಸಿದ್ದಾರೆ. ಅಭಿ ಹಾಗೂ ಅವಿವಾ ಫೋಟೊವನ್ನು ಎತ್ತಿನ ಮೇಲೆ ಬಿಡಿಸಿದ್ದರು. ಇದು ಸಖತ್‌ ವೈರಲ್‌ ಆಗಿದ್ದು, ಮಂಡ್ಯ ಜನರ ಅಭಿಮಾನಕ್ಕೆ ಜೂನಿಯರ್‌ ರೆಬೆಲ್‌ ಅಭಿಷೇಕ್‌ ಅಂಬರೀಶ್‌ ಮನಸೋತಿದ್ದಾರೆ. 


ಇದನ್ನೂ ಓದಿ-"ಕಿಸ್​ ಮಾಡಿ, ಪ್ಯಾಂಟ್ ಬಿಚ್ಚು ಅಂದ್ರು ಆ ಡೈರೆಕ್ಟರ್‌" : ಖ್ಯಾತ ನಟನಿಗೂ ಕಾಸ್ಟಿಂಗ್‌ ಕೌಚ್!


ಅಭಿಷೇಕ್‌ ಅವಿವಾ ಬೀಗರ ಔತನಕೂಟಕ್ಕೆ ಇಡೀ ಮಂಡ್ಯದ ಜನತೆಗೆ ಆಹ್ವಾನ ನೀಡಿದ್ದರು. ಅಭಿಮಾನಿಗಳು ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಇದೇ ವೇಳೆ ರೆಬೆಲ್‌ ಸ್ಟಾರ್‌ ಅಂಬರೀಶ್‌ ಅವರನ್ನು ಅವರ ಅಭಿಮಾನಿಗಳು ನೆನಪಿಸಿಕೊಂಡಿದ್ದಾರೆ. ರೆಬೆಲ್‌ ಸ್ಟಾರ್‌ ಅಭಿಮಾನಿ ಮಂಡ್ಯದ ಚೀರನಹಳ್ಳಿಯ ತೇಜಗೌಡ ಎಂಬುವನು ಎತ್ತಿನ ಹೊಟ್ಟೆ ಮೇಲೆ ಅಭಿ ಹಾಗೂ ಅವಿವಾ ಚಿತ್ರವನ್ನು ಬರೆಸಿ, ಅದಕ್ಕೆ ಸಿಂಗಾರ ಮಾಡಿ ಗೆಜ್ಜೆಲಗೆರೆ ಔತನಕೂಟಕ್ಕೆ ಕರೆದುಕೊಂಡು ಬಂದಿದ್ದರು. 


ಈ ವಿಶೇಷ ಅಭಿಮಾನಿಯ ಗಿಪ್ಟ್‌ಗೆ ನವ ದಂಪತಿ ಹಾಗೂ ಸುಮಲತಾ ಅಂಬರೀಶ್‌ ಫಿದಾ ಆಗಿದ್ದಾರೆ. ಅಲ್ಲದೇ ಸಿಂಗಾರಗೊಂಡ ಎತ್ತಿನ ಮುಂದೆ ನಿಂತು ಕ್ಯಾಮರಾಗೆ ಪೋಸ್‌ ಕೊಟ್ಟಿದ್ದಾರೆ ಮತ್ತು ಅವರ ಅಭಿಮಾನಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ. 


ಇದನ್ನೂ ಓದಿ-ನಗೆಪಾಟಲಿಗೀಡಾದ ಆದಿಪುರುಷ್‌ ಸಿನಿಮಾ; ಮೀಮ್ಸ್‌ ಮೂಲಕ ನಿರ್ದೇಶಕರ ಕಾಲೆಳೆದ ನೆಟ್ಟಿಗರು..!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ