ನವದೆಹಲಿ:  ಇಂದು ತಮ್ಮ 65 ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ನಿರ್ದೇಶಕ ಮಣಿರತ್ನಂ ಭಾರತದ ಶ್ರೇಷ್ಠ ಚಿತ್ರ ನಿರ್ದೇಶಕರಲ್ಲಿ ಒಬ್ಬರು. ಅವರು ತಮ್ಮ ನಿರ್ಮಾಣ ಸಂಸ್ಥೆಯಾಗಿರುವ ಮದ್ರಾಸ್ ಟಾಕೀಸ್ ಮೂಲಕ ಸುಮಾರು 15ಕ್ಕೂ ಅಧಿಕ ಚಿತ್ರಗಳನ್ನು ಅವರು ನಿರ್ಮಿಸಿದ್ದಾರೆ.ಇದುವರೆಗೆ ಸುಮಾರು 26 ಚಲನ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.


COMMERCIAL BREAK
SCROLL TO CONTINUE READING

ಇಂತಹ ಮಹಾನ್ ನಿರ್ದೇಶಕ ಮೊದಲ ಬಾರಿಗೆ ಸಿನಿ ಪ್ರಪಂಚಕ್ಕೆ ಪ್ರವೇಶ ನೀಡಿದ್ದು ಕನ್ನಡದ ಸಿನಿಮಾವೊಂದರ ಮೂಲಕ ಎನ್ನುವುದನ್ನು ನೀವು ನಂಬುತೀರಾ? ಹೌದು, ನೀವು ಇದನ್ನು ನಂಬಲೇ ಬೇಕು.1983 ರಲ್ಲಿ ಅವರು ಕನ್ನಡದ ಪಲ್ಲವಿ ಅನುಪಲ್ಲವಿ ಚಿತ್ರದ ಮೂಲಕ ಮೊದಲ ಬಾರಿಗೆ ಚಲನ ಚಿತ್ರ ಪ್ರಪಂಚಕ್ಕೆ ಕಾಲಿಟ್ಟರು. ಮುಂದೆ ಈ ಚಿತ್ರ ಉತ್ತಮ ಸ್ಕ್ರೀನ್ ಪ್ಲೇ ಗಾಗಿ ಕರ್ನಾಟಕ ರಾಜ್ಯ ಪ್ರಶಸ್ತಿಯನ್ನು ಸಹ ಗೆದ್ದಿತು, ವಿಶೇಷ ವೆಂದರೆ ಬಾಲಿವುಡ್ ನ ಅನಿಲ್ ಕಪೂರ್ ಮೊದಲ ಬಾರಿಗೆ ಕನ್ನಡ ಸಿನಿಮಾವೊಂದರಲ್ಲಿ ನಟಿಸಿದ್ದರು.


ಇದನ್ನೂ ಓದಿ: ಸರ್ ಫೆಯರ್ ವೆಲ್ ಆದ್ರು ಮಾಡ್ಸಿ, 12ನೇ B ತರಗತಿಯ ನೇಹಾಳನ್ನು ಸೀರೆಯಲ್ಲಿ ನೋಡ್ಬೇಕ್ಕಿತ್ತು'


ಈಗ ಮಣಿರತ್ನಂ (Mani Ratnam) ಅವರ 65 ನೇ ಹುಟ್ಟುಹಬ್ಬದ ನಿಮಿತ್ತ  ಅವರ ಕೆಲವು ಸೂಪರ್ ಹಿಟ್ ಚಿತ್ರಗಳ ಕುರಿತು ತಿಳಿಯೋಣ 


ಮೌನ ರಾಗಮ್ (1986)


ಮಣಿರತ್ನಂ ಅವರನ್ನು ಪ್ರಮುಖ ತಮಿಳು ಚಲನಚಿತ್ರ ನಿರ್ದೇಶಕರಾಗಿ ಗುರುತಿಸಿಕೊಂಡ ಸಿನಿಮಾ ಮೌನ ರಾಗಮ್ ತನ್ನ ಮಾಜಿ ಪ್ರೇಮಿಯ ಸಾವಿಗೆ ಶೋಕಿಸುತ್ತಿರುವಾಗ ಅರೆಂಜ್ ಮ್ಯಾರೇಜ್ ಗಾಗಿ ತನ್ನ ತಂದೆ ಒತ್ತಾಯಿಸುತ್ತಿದ್ದಾಗ ಆಕೆ ಎದುರಿಸುತ್ತಿದ್ದ ಸಂಕಟಗಳ ಬಗ್ಗೆ ಈ ಚಿತ್ರ ಬೆಳಕು ಚೆಲ್ಲುತ್ತದೆ.


ಇದನ್ನೂ ಓದಿ: ಕನ್ನಡದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿ ಸಿನಿ ಜಗತ್ತು ಆಳಿದ ಮಣಿರತ್ನಂ....!


ನಾಯಕನ್ (1987)


ಭಾರತೀಯ ಮಾಫಿಯಾ ನಾಯಕ ವರದರಾಜನ್ ಮುದಲಿಯಾರ್ ಮತ್ತು ಫ್ರಾನ್ಸಿಸ್ ಫೋರ್ಡ್ ಕೊಪ್ಪೊಲಾ ಅವರ ದಿ ಗೋಫಾದರ್ (1972) ಅವರ ಜೀವನದಿಂದ ಪ್ರೇರಿತರಾದ ನಾಯಕನ್ 1987 ರ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಮೂರು ಟ್ರೋಫಿಗಳನ್ನು ಪಡೆಯಿತು. ಟೈಮ್ ನಿಯತಕಾಲಿಕವು ಈ ಚಿತ್ರವನ್ನು ತನ್ನ ಆಲ್ ಟೈಮ್ ಬೆಸ್ಟ್ 100 ಚಲನಚಿತ್ರಗಳ ಪಟ್ಟಿಯಲ್ಲಿ ಸೇರಿಸಿದೆ.


ಅಂಜಲಿ (1990)


ಅಂಜಲಿ ಅನಾರೋಗ್ಯದಿಂದ ಬಳಲುತ್ತಿರುವ, ಸ್ವಲೀನತೆಯ ಮಗು (ಶಮಿಲಿ) ಮತ್ತು ಆಕೆಯ ಪೋಷಕರು ಎದುರಿಸುತ್ತಿರುವ ಸಾಮಾಜಿಕ ಮತ್ತು ಭಾವನಾತ್ಮಕ ಸವಾಲುಗಳ ಬಗ್ಗೆ ಗಮನ ಸೆಳೆಯುತ್ತದೆ. ಈ ಚಿತ್ರವು ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆಯಿತು.


ಇದನ್ನೂ ಓದಿ: Maggi ಸೇರಿದಂತೆ Nestleಯ 60 ಶೇದಷ್ಟು ಉತ್ಪನ್ನಗಳು 'Unhealthy'; ಕಂಪನಿಯೇ ಒಪ್ಪಿಕೊಂಡ ಸತ್ಯ


ಭಯೋತ್ಪಾದನೆ ಟ್ರೈಲಾಜಿ (ರೋಜಾ, ಬಾಂಬೆ ಮತ್ತು ದಿಲ್ ಸೆ ..)


ಭಯೋತ್ಪಾದನೆ ಕುರಿತ ಮೇಲಿನ ಮೂರು ಚಿತ್ರಗಳಿಗಾಗಿ ಮಣಿರತ್ನಂ ಅವರನ್ನು ಹೆಚ್ಚಾಗಿ ನೆನಪಿಸಿಕೊಳ್ಳಲಾಗುತ್ತದೆ. ಮಣಿರತ್ನಂಗೆ ರಾಷ್ಟ್ರವ್ಯಾಪಿ ಮಾನ್ಯತೆ ತಂದುಕೊಟ್ಟ ರೋಜಾ, ಜಮ್ಮು ಮತ್ತು ಕಾಶ್ಮೀರದ ಉಗ್ರರಿಂದ ಪತಿ (ಅರವಿಂದ ಸ್ವಾಮಿ) ಯನ್ನು ರಕ್ಷಿಸುವ ಹಳ್ಳಿಯ ಹುಡುಗಿಯ (ಮಾಧೂ) ಹತಾಶ ಪ್ರಯತ್ನಗಳ ಬಗ್ಗೆ ತಿಳಿಸುತ್ತದೆ.


ಅರವಿಂದ ಸ್ವಾಮಿ ಮತ್ತು ಮನೀಶಾ ಕೊಯಿರಾಲಾ ನಟಿಸಿದ ಬಾಂಬೆ (1995) 1992-1993ರ ಬಾಂಬೆ ಗಲಭೆಗಳನ್ನು ಆಧರಿಸಿದೆ, ಇದು ಬಾಬರಿ ಮಸೀದಿ ಧ್ವಂಸದ ನಂತರ ನಡೆಯಿತು.


ಶಾರುಖ್ ಖಾನ್ ಮತ್ತು ಮನೀಷಾ ಕೊಯಿರಾಲಾ ಅಭಿನಯದ ದಿಲ್ ಸೆ .. (1998), ಈಶಾನ್ಯ ಭಾರತದ ಬಂಡಾಯದ ಹಿನ್ನೆಲೆಯಾಗಿ ಪ್ರೇಮಕಥೆಯೊಂದನ್ನು ನಿರ್ವಹಿಸುತ್ತದೆ.


ಕನ್ನತಿಲ್ ಮುಥಮಿತ್ತಲ್ (2002)


ಈ ಚಿತ್ರವು ಶ್ರೀಲಂಕಾದ ಅಂತರ್ಯುದ್ಧ ಮತ್ತು ಎಲ್‌ಟಿಟಿಇ ಎಂಬ ಉಗ್ರಗಾಮಿ ಸಂಘಟನೆಯಲ್ಲಿ ಸೇರಿಕೊಂಡ ತನ್ನ ಜೈವಿಕ ತಾಯಿಯನ್ನು ಭೇಟಿಯಾಗುವ ಮಗುವಿನ ಬಯಕೆಯೊಂದಿಗೆ ವ್ಯವಹರಿಸುತ್ತದೆ. ಇದರಲ್ಲಿ ರಂಗನಾಥನ್ ಮಾಧವನ್, ಸಿಮ್ರಾನ್, ಕೀರ್ತನಾ ಪಾರ್ಥೀಪನ್ ಮತ್ತು ನಂದಿತಾ ದಾಸ್ ಇತರರು ನಟಿಸಿದ್ದಾರೆ ಮತ್ತು  ಈ ಚಿತ್ರ ದಾಖಲೆಯ ಆರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ