ನವದೆಹಲಿ: ಹೊಸ ಡ್ರೈವಿಂಗ್ ಲೈಸೆನ್ಸ್ ಗಾಗಿ ಅರ್ಜಿ ಸಲ್ಲಿಸುವವರು ಈ ವರ್ಷದ ನವೆಂಬರ್ ನಿಂದ ಡ್ರೈವಿಂಗ್ ಟೆಸ್ಟ್ ಗೆ ತೆರಳುವ ಒಂದು ತಿಂಗಳ ಮುನ್ನ ಸುರಕ್ಷಿತ ಡ್ರೈವಿಂಗ್ ಪ್ರಾಕ್ಟೀಸ್ ಬಗ್ಗೆ ಆನ್ ಲೈನ್ ವಿಡಿಯೋ ಟ್ಯುಟೋರಿಯಲ್ ಗಳನ್ನು ನೋಡಬೇಕಾಗುತ್ತದೆ. ಈ ವಿಡಿಯೋ ಟ್ಯಟೋರಿಯಾಲ್ ನಲ್ಲಿ ಅಜಾಗರೂಕ ಚಾಲನೆಯಿಂದ ಬಾಧಿತರಾದವರ ಕುಟುಂಬ ಸದಸ್ಯರ ಸಂದರ್ಶನ ಮತ್ತು ಸುರಕ್ಷಿತ ಡ್ರೈವಿಂಗ್ ಬಗ್ಗೆ ವಿಡಿಯೋಗಳನ್ನು ನೀಡಲಾಗುತ್ತದೆ.


COMMERCIAL BREAK
SCROLL TO CONTINUE READING

ಅದೇ ರೀತಿ, ಕೆಲವು ರೀತಿಯ ಸಂಚಾರ ನಿಯಮ ಉಲ್ಲಂಘನೆಯ ಸಂದರ್ಭದಲ್ಲಿ ಪರವಾನಗಿ ಪಡೆದವರು ಮತ್ತು ಸಿಕ್ಕಿಬಿದ್ದವರು ಚಾಲಕ ಸುರಕ್ಷತಾ ಸರ್ಟಿಫಿಕೇಷನ್ ಕೋರ್ಸ್(Driver Safety Certification Course) ಮಾಡಬೇಕು. ಕೋರ್ಸ್ ಪೂರ್ಣಗೊಳಿಸಿದ ಚಾಲಕರು ತಮ್ಮ ಚಾಲನಾ ಪರವಾನಗಿಯನ್ನು ಟ್ರ್ಯಾಕ್ ಮಾಡಲು ಆಧಾರ್ ಲಿಂಕ್ ಮಾಡಲಾಗುತ್ತದೆ.


ಇತ್ತೀಚಿಗೆ TMC ಸೇರ್ಪಡೆಗೊಂಡ Yashwant Sinhaಗೆ ಮಹತ್ವದ ಜವಾಬ್ದಾರಿ ವಹಿಸಿದ ದೀದಿ


ಟೋಲ್ ಪ್ಲಾಜಾಗಳನ್ನು ದಾಟುವಾಗ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದೇ ಇರುವ ದೃಶ್ಯಗಳ ಬಗ್ಗೆ ಮಾಹಿತಿ ನೀಡಲು ಅಕ್ಟೋಬರ್ 31ರ ಗಡುವು ನೀಡಿದೆ. ಈ ದೃಶ್ಯಾವಳಿಗಳನ್ನು ಸ್ಥಳೀಯ ಪೊಲೀಸ(Police)ರೊಂದಿಗೆ ಹಂಚಿಕೊಳ್ಳಲಾಗುವುದು. ಆದ್ದರಿಂದ ದೊಡ್ಡ ನಗರಗಳಲ್ಲಿ ಸಂಚಾರ ಪೊಲೀಸರು ಅಳವಡಿಸಿರುವ ಕ್ಯಾಮೆರಾಗಳಲ್ಲಿ ಇಂತಹ ಉಲ್ಲಂಘನೆಗಳು ಕಂಡುಬರುವಂತಹದ್ದು ಮುಖ್ಯ, ಆದರೆ ದೇಶದ ಇತರ ಭಾಗಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾಗಳು ಇಲ್ಲ.


Coronavirus: ಮಹಾರಾಷ್ಟ್ರದ ಈ ನಗರದಲ್ಲಿ ಮಾರ್ಚ್ 21ರವರೆಗೆ ಲಾಕ್‌ಡೌನ್


ಹೆಲ್ಮೆಟ್ ಧರಿಸದ ಕಾರಣ 44,666 ದ್ವಿಚಕ್ರ ವಾಹನ ಸವಾರರು ಹಾಗೂ ಅವರ ಜತೆ ಬರುವ ಜನರು ರಸ್ತೆ ಅಪಘಾತ(Accident)ಗಳಲ್ಲಿ ಮೃತಪಟ್ಟರೆ, ವಾಹನ ಅಪಘಾತದಲ್ಲಿ ಮೃತಪಟ್ಟ ವರ ಪೈಕಿ ಶೇ.80ರಷ್ಟು ದ್ವಿಚಕ್ರ ವಾಹನ ಸವಾರರು ಮೃತಪಟ್ಟಿದ್ದಾರೆ.


ವೀಡಿಯೊ ಟ್ಯುಟೋರಿಯಲ್( Video Tutorial) ಯಶಸ್ವಿಯಾಗಿ ಪೂರ್ಣವಾಗುವವರೆಗೆ ಅಪ್ಲಿಕೇಶನ್ ಗಳಿಗೆ ಪರವಾನಗಿ ನೀಡಲು ಸಾಧ್ಯವಾಗುವುದಿಲ್ಲ.


ದೀದಿಗೆ ಮತ್ತೊಂದು ಶಾಕ್! ಇನ್ನೋರ್ವ ಟಿಎಂಸಿ ಸಂಸದ ಬಿಜೆಪಿ ತೆಕ್ಕೆಗೆ!


ಮೂಲಗಳ ಪ್ರಕಾರ, ಡ್ರೈವಿಂಗ್ ಲೈಸೆನ್ಸ್(DL) ಗಾಗಿ ಹೊಸ ಅರ್ಜಿದಾರರಿಗೆ ಆನ್ ಲೈನ್ ವೀಡಿಯೊ ಟ್ಯುಟೋರಿಯಲ್ ಗಳು ಮತ್ತು ಹಾಲಿ ಚಾಲಕರಿಗಾಗಿ ಸುರಕ್ಷತಾ ಪ್ರಮಾಣೀಕರಣ ಕೋರ್ಸ್ ಗಳ ವಿವರ ಪ್ರೋಟೋಕಾಲ್ ಗಳನ್ನು ತಿದ್ದುಪಡಿಯಾದ ಎಂವಿ ಕಾಯ್ದೆಯ ಅಡಿಯಲ್ಲಿ ಕೇಂದ್ರ ಮೋಟಾರು ವಾಹನ ನಿಯಮಗಳಲ್ಲಿ ಮುಂದಿನ ಕೆಲವು ವಾರಗಳಲ್ಲಿ ನೀಡಲಾಗುವುದು.


ಇಂದು ನಾಳೆ ಬ್ಯಾಂಕ್ ಕೆಲಸ ನಡೆಯಲ್ಲ, ಏನಿದ್ದರೂ ಬುಧವಾರದ ಬಳಿಕವೇ ಬ್ಯಾಂಕ್ ಓಪನ್


ರಸ್ತೆ ಸುರಕ್ಷತೆ(Road Safety)ಯಲ್ಲಿ ವಿಶೇಷ ಪರಿಣತಿ ಹೊಂದಿರುವ ರಾಜ್ಯಗಳು ಮತ್ತು ಸಂಸ್ಥೆಗಳು ಹಲವಾರು ವೀಡಿಯೊ ಟ್ಯುಟೋರಿಯಲ್ ಗಳನ್ನು ಹೊಂದಿವೆ ಎಂದು ಮೂಲಗಳು ತಿಳಿಸಿವೆ. 'ಒಂದು ಸಮಗ್ರ ವ್ಯವಸ್ಥೆ ಇರುತ್ತದೆ ಮತ್ತು ಅಭ್ಯರ್ಥಿಯು ವೀಡಿಯೊ ಟ್ಯುಟೋರಿಯಲ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸುವವರೆಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುವುದಿಲ್ಲ. ಇದು ಅವರಿಗೆ ನಿಯಮಗಳ ಬಗ್ಗೆ ಅರಿವು ಮೂಡಿಸಲಿದೆ ಮತ್ತು ಬೇಜವಾಬ್ದಾರಿ ಚಾಲಕರಿಗಾಗಿ ರಸ್ತೆ ಅಪಘಾತಗಳಿಂದ ಬಳಲುತ್ತಿರುವ ಜನರ ಅನುಭವಗಳ ಬಗ್ಗೆ ಅವರಿಗೆ ಅರಿವು ಮೂಡಲಿದೆ.' ಜಗತ್ತಿನಾದ್ಯಂತ ಇರುವ ಟ್ರೆಂಡ್ ಗಳು, ಚಾಲಕರ ವರ್ತನೆಯು ರಸ್ತೆ ಅಪಘಾತಗಳಿಗೆ ಪ್ರಮುಖ ಕಾರಣಗಳಲ್ಲಿ ಒಂದು ಎಂದು ತೋರಿಸುತ್ತದೆ.


ವಿದ್ಯಾರ್ಥಿಗಳನ್ನು ಕಟ್ಟರ್ ದೇಶ ಭಕ್ತರನ್ನಾಗಿ ಮಾಡಲು ಸಿಎಂ ಕೇಜ್ರಿವಾಲ್ ಪ್ಲಾನ್ ರೆಡಿ...!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.