ಇತ್ತೀಚಿಗೆ TMC ಸೇರ್ಪಡೆಗೊಂಡ Yashwant Sinhaಗೆ ಮಹತ್ವದ ಜವಾಬ್ದಾರಿ ವಹಿಸಿದ ದೀದಿ

ಇತ್ತೀಚಿಗೆ ಟಿಎಂಸಿ ಸೇರ್ಪಡೆಗೊಂಡು ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಿಜೆಪಿ ಮಣಿಸುವುದಾಗಿ ಪ್ರತಿಜ್ಞೆ ಮಾಡಿರುವ ಮಾಜಿ ಕೇಂದ್ರ ಸಚಿವ ಯಶ್ವಂತ್ ಸಿನ್ಹಾ ಅವರಿಗೆ ಮಮತಾ ಬ್ಯಾನರ್ಜಿ ಮಹತ್ವದ ಜವಾಬ್ದಾರಿ ವಹಿಸಿದ್ದಾರೆ.

Written by - Yashaswini V | Last Updated : Mar 15, 2021, 12:53 PM IST
  • ಟಿಎಂಸಿ ಪಕ್ಷದ ಉಪಾಧ್ಯಕ್ಷರಾಗಿ ಯಶ್ವಂತ್ ಸಿನ್ಹಾ ನೇಮಕ
  • ಟಿಎಂಸಿಯ ರಾಷ್ಟ್ರೀಯ ಕಾರ್ಯಸಮಿತಿಯ ಸದಸ್ಯರೂ ಆಗಿರುವ ಸಿನ್ಹಾ
  • ಮೋದಿ ಸರ್ಕಾರದ ಮೇಲೆ ನಿರಂತರ ದಾಳಿ ಮಾಡುತ್ತಿರುವ ಸಿನ್ಹಾ
ಇತ್ತೀಚಿಗೆ TMC ಸೇರ್ಪಡೆಗೊಂಡ Yashwant Sinhaಗೆ ಮಹತ್ವದ ಜವಾಬ್ದಾರಿ ವಹಿಸಿದ ದೀದಿ title=
Yashwant Sinha appointes as tmc vice president

ಕೊಲ್ಕತ್ತಾ: ಮಾಜಿ ಕೇಂದ್ರ ಸಚಿವ ಹಾಗೂ ಪ್ರಧಾನಿ ನರೇಂದ್ರ ಮೋದಿ ಆಡಳಿತದ ಪ್ರಬಲ ವಿರೋಧಿ ಯಶ್ವಂತ್ ಸಿನ್ಹಾ ಅವರು ತೃಣಮೂಲ ಕಾಂಗ್ರೆಸ್ ಪಕ್ಷದಲ್ಲಿ ಸೇರ್ಪಡೆಗೊಂಡ ಬಳಿಕ ಅವರಿಗೆ ಮಹತ್ವದ ಜವಾಬ್ದಾರಿ ವಹಿಸಲಾಗಿದೆ. ಹೌದು, ಶನಿವಾರವಷ್ಟೇ ಟಿಎಂಸಿ ಪಕ್ಷಕ್ಕೆ ಸೇರ್ಪಡೆಗೊಂಡ ಯಶ್ವಂತ್ ಸಿನ್ಹಾ ಅವರನ್ನು ಪಕ್ಷದ ಉಪಾಧ್ಯಕ್ಷರಾಗಿ ನೇಮಿಸಲಾಗಿದೆ. ಇದರೊಂದಿಗೆ ಅವರನ್ನು ಟಿಎಂಸಿ ನ್ಯಾಷನಲ್ ವರ್ಕಿಂಗ್ ಕಮಿಟಿ ಸದಸ್ಯರಾಗಿಯೂ ನೇಮಿಸಲಾಗಿದೆ. 

2018ರಲ್ಲಿ ಬಿಜೆಪಿ ತ್ಯಜಿಸಿದ್ದ ಸಿನ್ಹಾ: 
ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ (Atal Bihari Vajpayee) ಮಂತ್ರಿ ಮಂಡಲದಲ್ಲಿ ಸಚಿವರಾಗಿದ್ದ ಯಶ್ವಂತ್ ಸಿನ್ಹಾ ಬಿಜೆಪಿಯಲ್ಲಿ ತಲೆದೋರಿದ್ದ ನಾಯಕತ್ವದೊಂದಿಗಿನ ಭಿನ್ನಾಭಿಪ್ರಾಯದಿಂದಾಗಿ 2018ರಲ್ಲಿ ಬಿಜೆಪಿ ತೊರೆದಿದ್ದರು. ಇದೀಗ ಸುಮಾರು ಎರಡು ವರ್ಷಗಳ ಬಳಿಕ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಅವರಿಗೆ ಬೆಂಬಲ ಸೂಚಿಸಿ ಈ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸುವ ಬಗ್ಗೆ ಶಪಥ ಮಾಡಿದ್ದಾರೆ. ಗಮನಾರ್ಹವಾಗಿ ಯಶ್ವಂತ್ ಸಿನ್ಹಾ ಅವರ ಪುತ್ರ ಜಾರ್ಕಂಡ್ ನ ಹಜಾರಿಬಾಗ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಸಂಸದರಾಗಿದ್ದಾರೆ. 

ಇದನ್ನೂ ಓದಿ - Yashwant Sinha: ಬಿಜೆಪಿ ಮಾಜಿ ನಾಯಕ 'ಯಶವಂತಸಿನ್ಹಾ' ಟಿಎಂಸಿ ಪಾರ್ಟಿ ಸೇರ್ಪಡೆ!

ಮಮತಾ ಬ್ಯಾನರ್ಜಿ ಅನ್ನು ಫೈಟರ್ ಎಂದು ಬಣ್ಣಿಸಿದ ಸಿನ್ಹಾ:
ಇದಕ್ಕೂ ಮೊದಲು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ  (Mamata Banerjee) ಅವರನ್ನು ಹಾಡಿ ಹೊಗಳಿದ್ದ ಮಾಜಿ ವಿತ್ತ ಸಚಿವ ಯಶ್ವಂತ್ ಸಿನ್ಹಾ (Yashwant Sinha), 1999 ರಲ್ಲಿ ಕಂದಹಾರ್ನಲ್ಲಿ ಐಸಿ -814 ವಿಮಾನವನ್ನು ಅಪಹರಿಸಿದ ನಂತರ ನಡೆಯುತ್ತಿರುವ ಉದ್ವಿಗ್ನತೆಯ ಮಧ್ಯೆ, ಒತ್ತೆಯಾಳುಗಳನ್ನು ಬಿಡುಗಡೆ ಮಾಡುವ ಬದಲು ಮಮತಾ ಬ್ಯಾನರ್ಜಿ ತಾನೇ ಒತ್ತೆಯಾಳಾಗಲು ಮುಂದಾದರು. ಇಂಡಿಯನ್ ಏರ್ಲೈನ್ಸ್ ವಿಮಾನವನ್ನು ಅಪಹರಿಸಿ ಭಯೋತ್ಪಾದಕರು ಆಕೆಯನ್ನು ಕಂದಹಾರ್ಗೆ ಕರೆದೊಯ್ಯುವಾಗ, ಒಂದು ದಿನ ಕ್ಯಾಬಿನೆಟ್ನಲ್ಲಿ ಚರ್ಚೆ ನಡೆಯಿತು, ನಂತರ ಮಮತಾ ಬ್ಯಾನರ್ಜಿ ಅವರು ಸ್ವತಃ ಒತ್ತೆಯಾಳುಗಳಾಗಿ ಹೋಗುವುದಾಗಿ ಹೇಳಿದರು. ಆದರೆ ಉಳಿದ ಒತ್ತೆಯಾಳುಗಳನ್ನು ಭಯೋತ್ಪಾದಕರು ಬಿಡುಗಡೆ ಮಾಡಿ ನನ್ನನ್ನು ಒತ್ತೆಯಾಳಾಗಿ ಇರಿಸಿಕೊಳ್ಳಲಿ ಎಂಬ ಷರತ್ತು ಹಾಕಿದರು. ಅದರ ನಂತರ ಅವರು ದೇಶಕ್ಕಾಗಿ ತ್ಯಾಗ ಮಾಡಲು ಸಿದ್ಧರಾಗುತ್ತಾರೆ. ಮಮತಾ ಬ್ಯಾನರ್ಜಿ ತನ್ನ ಆರಂಭಿಕ ದಿನಗಳಿಂದಲೂ 'ಫೈಟರ್' ಎಂದರೆ ಹೋರಾಟಗಾರ್ತಿ ಆಗಿದ್ದಾರೆ ಮತ್ತು ಇನ್ನೂ ಹೋರಾಡುವ ಮನೋಭಾವ ಅವಳಲ್ಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ - ರಾಹುಲ್ ಗಾಂಧಿಗೆ ಯಶವಂತ್ ಸಿನ್ಹಾ ಕೊಟ್ಟ ಸಲಹೆ ಏನು ಗೊತ್ತೇ...?

ಚಂದ್ರಶೇಖರ್ ಸರ್ಕಾರದಲ್ಲೂ ಮಂತ್ರಿಯಾಗಿದ್ದ ಸಿನ್ಹಾ: 
ಯಶ್ವಂತ್ ಸಿನ್ಹಾ 1990ರಲ್ಲಿ ಚಂದ್ರಶೇಖರ್ ಅವರ ಸರ್ಕಾರದಲ್ಲಿ ವಿತ್ತ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಬಳಿಕ ಅಟಲ್ ಬಿಹಾರಿ ವಾಜಪೇಯಿ ಅವರ ಮಂತ್ರಿಮಂಡಲದಲ್ಲಿಯೂ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಸಿನ್ಹಾ ವಾಜಪೇಯಿ ಸರ್ಕಾರದಲ್ಲಿ ವಿದೇಶಿ ಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. ಗಮನಾರ್ಹವಾಗಿ 2018ರಲ್ಲಿ ಯಶ್ವಂತ್ ಸಿನ್ಹಾ ಬಿಜೆಪಿ ತೊರೆದ ಬಳಿಕ ಕೇಂದ್ರ ಸರ್ಕಾರದ ಮೇಲೆ ನಿರಂತರವಾಗಿ ದಾಳಿ ಮಾಡುತ್ತಾ ಬಂದಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News