ಇಂದು ನಾಳೆ ಬ್ಯಾಂಕ್ ಕೆಲಸ ನಡೆಯಲ್ಲ, ಏನಿದ್ದರೂ ಬುಧವಾರದ ಬಳಿಕವೇ ಬ್ಯಾಂಕ್ ಓಪನ್

ಖಾಸಗೀಕರಣದ  ವಿರುದ್ಧ ಮಾರ್ಚ್ 15 ಮತ್ತು 16 ರಂದು ಮುಷ್ಕರ ನಡೆಸುವುದಾಗಿ UFBU ಘೋಷಿಸಿದೆ. ಅಂದರೆ ಸರ್ಕಾರಿ ಮತ್ತು ಗ್ರಾಮೀಣ ಬ್ಯಾಂಕುಗಳು  2 ದಿನಗಳವರೆಗೆ ಕಾರ್ಯನಿರ್ವಹಿಸುವುದಿಲ್ಲ.

Written by - Ranjitha R K | Last Updated : Mar 15, 2021, 08:58 AM IST
  • ಇಂದು ನಾಳೆ ಬ್ಯಾಂಕ್ ನೌಕರರ ಮುಷ್ಕರ
  • ಬ್ಯಾಂಕ್ ಖಾಸಗೀಕರಣವನ್ನು ವಿರೋಧಿಸಿ ಮುಷ್ಕರಕ್ಕೆ ಕರೆ
  • ಶನಿವಾರ, ಭಾನುವಾರದ ರಜೆ ಸೇರಿ ಸತತ ನಾಲ್ಕು ದಿನ ಬ್ಯಾಂಕ್ ಬಂದ್
ಇಂದು ನಾಳೆ ಬ್ಯಾಂಕ್ ಕೆಲಸ ನಡೆಯಲ್ಲ, ಏನಿದ್ದರೂ ಬುಧವಾರದ ಬಳಿಕವೇ ಬ್ಯಾಂಕ್ ಓಪನ್ title=
ಇಂದು ನಾಳೆ ಬ್ಯಾಂಕ್ ನೌಕರರ ಮುಷ್ಕರ (file photo)

ದೆಹಲಿ: ಬ್ಯಾಂಕ್ ಗೆ ( Bank) ಸಂಬಂಧಪಟ್ಟಂತೆ ಯಾವುದಾದರೊಂದು ಕೆಲಸ ಇದ್ದೇ ಇರುತ್ತದೆ. ಆದರೆ ಮೊಬೈಲ್ ಬ್ಯಾಂಕಿಂಗ್ ಯುಗದಲ್ಲಿ, ಎಲ್ಲಾ ಕೆಲಸಗಳಿಗೂ ಬ್ಯಾಂಕ್ ಗೆ ತೆರಳುವ ಅವಶ್ಯಕತೆ ಇರುವುದಿಲ್ಲ.  ಇನ್ನು ಕೆಲವು ಕೆಲಸಗಳಿಗಾಗಿ ಬ್ಯಾಂಕಿಗೇ ಹೋಗುವುದು ಅನಿವಾರ್ಯವಾಗಿರುತ್ತದೆ. ನೀವು ಕೂಡಾ ಬ್ಯಾಂಕ್ ಕೆಲಸಕ್ಕಾಗಿ ಇಂದು ಮತ್ತೆ ನಾಳೆ ಬ್ಯಾಂಕ್ ಗೆ ಹೋಗುವ ಬಗ್ಗೆ ಯೋಚಿಸುತ್ತಿದ್ದರೆ ಅದನ್ನು ಬಿಟ್ಟು ಬಿಡಿ. ಇಂದು ಮತ್ತೆ ನಾಳೆ ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (UFBU) 2 ದಿನಗಳ ಮುಷ್ಕರಕ್ಕೆ (Strike) ಕರೆ ನೀಡಿದೆ.

ಮುಷ್ಕರಕ್ಕೆ ಕರೆ ನೀಡಿರುವ ಬ್ಯಾಂಕ್ ನೌಕರರು : 
ಖಾಸಗೀಕರಣದ (Privatisation) ವಿರುದ್ಧ ಮಾರ್ಚ್ 15 ಮತ್ತು 16 ರಂದು ಮುಷ್ಕರ ನಡೆಸುವುದಾಗಿ UFBU ಘೋಷಿಸಿದೆ. ಅಂದರೆ ಸರ್ಕಾರಿ ಮತ್ತು ಗ್ರಾಮೀಣ ಬ್ಯಾಂಕುಗಳು  2 ದಿನಗಳವರೆಗೆ ಕಾರ್ಯನಿರ್ವಹಿಸುವುದಿಲ್ಲ. ಒಟ್ಟು 9 ಬ್ಯಾಂಕ್ ಯೂನಿಯನ್ ಕೇಂದ್ರ ಸಂಘಟನೆ  ಯುಎಫ್‌ಬಿಯು ಈ ಮುಷ್ಕರಕ್ಕೆ ಕರೆ ನೀಡಿದೆ.   ಯಾವುದೇ ಸರ್ಕಾರಿ ಬ್ಯಾಂಕ್ ಅನ್ನು ಖಾಸಗೀಕರಣಗೊಳಿಸದಂತೆ ಬ್ಯಾಂಕ್ ನೌಕರರು ನಿರಂತರವಾಗಿ ಸರ್ಕಾರಕ್ಕೆ ಮನವಿ ಮಾಡುತ್ತಾ ಬಂದಿದ್ದಾರೆ. ಒಂದೊಮ್ಮೆ ಬ್ಯಾಂಕ್ (bank) ಖಾಸಗೀಕರಣಗೊಂಡರೆ ಉದ್ಯೋಗ ಕಳೆದುಕೊಳ್ಳುವ ಆತಂಕ ಬ್ಯಾಂಕ್ ನೌಕರರದ್ದು.

ಇದನ್ನೂ ಓದಿ : Bank privatization : 4 ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ಖಾಸಗೀಕರಣ : ಶೀಘ್ರವೇ ಫೋಷಣೆ ಸಾಧ್ಯತೆ

ಖಾಸಗೀಕರಣದ ಬಗ್ಗೆ ಸರ್ಕಾರದ ಹೇಳುತ್ತಿರುವುದು ಏನು ?
ಕೆಲವು ಸರ್ಕಾರಿ ಸಂಸ್ಥೆಗಳನ್ನು ನಡೆಸಲು, ಅವುಗಳನ್ನು  ಖಾಸಗೀಕರಣಗೊಳಿಸುವುದು ಅಗತ್ಯ ಎಂದು  ಸರ್ಕಾರ (Government) ಹೇಳಿದೆ. ಆ ಸಂಸ್ಥೆಗಳನ್ನು ಖಾಸಗೀಕರಣಗೊಳಿಸದಿದ್ದರೆ,  ನೌಕರರ ವೇತನವನ್ನು (Salary) ನೀಡುವುದು ಕಷ್ಟವಾಗಲಿದೆ. ಹೀಗಾಗಿ ಆ ಸಂಸ್ಥೆಗಳನ್ನು ಖಾಸಗೀಕರಣಗೊಳಿಸಿದರೆ ನೌಕರರ ಉದ್ಯೋಗಕ್ಕೆ ಯಾವುದೇ ತೊಂದರೆ ಉಂಟಾಗುವುದಿಲ್ಲ ಎಂದಿದೆ. ನೌಕರರ ಉದ್ಯೋಗವನ್ನು ಉಳಿಸಿಕೊಳ್ಳುವ ದೃಷ್ಟಿಯಿಂದ ಆ ಸಂಸ್ಥೆಗಳನ್ನು ಖಾಸಗೀಕರಣಗೊಳಿಸುವುದು ಉತ್ತಮ ಎಂದು ಸರ್ಕಾರ ಹೇಳಿದೆ. 

2 ದಿನಗಳ ರಜೆಯ ನಂತರ 2 ದಿನಗಳ ಮುಷ್ಕರ :
ಎರಡನೇ ಶನಿವಾರ (Saturday) ಮತ್ತು ಭಾನುವಾರದ ರಜೆಯ ನಂತರ ಮತ್ತೆ ಎರಡು ದಿನ ಬ್ಯಾಂಕ್ ಬಂದ್ (bank strike) ಇರಲಿದೆ. ಇನ್ನು ಬ್ಯಾಂಕ್ ಗೆ ಸಂಬಂಧಿಸಿದ ಏನೇ ಕೆಲಸಗಳಿದ್ದರೂ ಬುಧವಾರದ ನಂತರವೇ ನಡೆಯಲಿದೆ. ಅಂದರೆ ಬ್ಯಾಂಕ್ ಕೆಲಸ ಪೂರೈಸಿಕೊಳ್ಳಲು ಇನ್ನೂ ಎರಡು ದಿನಗಳವರೆಗೆ ಕಾಯಬೇಕು. ಒಂದು ವೇಳೆ ಸರ್ಕಾರ ಬ್ಯಾಂಕ್ ನೌಕರರ ಬೇಡಿಕೆಯನ್ನು ಈಡೇರಿಸಲು ಒಪ್ಪಿದರೆ, ಮುಷ್ಕರವನ್ನು ಹಿಂತೆಗೆದುಕೊಳ್ಳಬಹುದು. 

ಇದನ್ನೂ ಓದಿ : ಸಾಲ ಪಡೆದವರಿಗೂ, ಪಡೆಯುವವರಿಗೂ RBI ಗುಡ್ ನ್ಯೂಸ್..? ಕಾರಣ ತಿಳಿಯಿರಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News