ನವದೆಹಲಿ: ದೆಹಲಿ ವಿಧಾನಸಭೆಯ ಏಕದಿನ ಅಧಿವೇಶನದಲ್ಲಿ ಕೇಂದ್ರದ ಮೂರು ಕೃಷಿ ಮಸೂದೆಗಳನ್ನು ಹರಿದು ಹಾಕಿದ್ದಕ್ಕಾಗಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸದೆ ಮೀನಾಕ್ಷಿ ಲೆಖಿ ಗುರುವಾರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೆಜಿರ್ವಾಲ್ ವಿರುದ್ಧ ವಾಗ್ದಾಳಿ ನಡೆಸಿದರು.


COMMERCIAL BREAK
SCROLL TO CONTINUE READING

ಸಿಎಂ ಅರವಿಂದ್ ಕೇಜ್ರಿವಾಲ್ ನಿವಾಸದ ಹೊರಗೆ ದೆಹಲಿಯ ಮೂವರು ಮೇಯರ್‌ಗಳ ಧರಣಿ, ಕಾರಣ...


ಮೂರು ಕೃಷಿ ಕಾನೂನುಗಳನ್ನು ನವೆಂಬರ್ 23 ರಂದು ದೆಹಲಿ ಗೆಜೆಟ್‌ನಲ್ಲಿ ಪ್ರಕಟಿಸಲಾಗಿದೆ,ಅದಾದ ನಂತರ ಅವರು ಕಾಯಿದೆಯ ಪ್ರತಿಗಳನ್ನು ಹರಿದು ಹಾಕುತ್ತಿದ್ದಾರೆ ಎಂದು ಲೆಖಿ ಹೇಳಿದರು.ಅವರು ಕೇಜ್ರಿವಾಲ್ ಅವರನ್ನು ಹೊಸ ಊಸರವಳ್ಳಿ ಎಂದು ಕರೆದರು, ಅವರು ಬಣ್ಣಗಳಿಲ್ಲದೆ ಬಣ್ಣಗಳನ್ನು ಬದಲಾಯಿಸಬಹುದು ಎಂದು ವ್ಯಂಗ್ಯವಾಡಿದರು.


ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಗೃಹಬಂಧನದಲ್ಲಿರಿಸಲಾಗಿದೆ- ಆಮ್ ಆದ್ಮಿ ಪಕ್ಷ ಆರೋಪ


ಕೇಂದ್ರದ ಮೂರು ಕೃಷಿ ಕಾನೂನುಗಳನ್ನು ನವೆಂಬರ್ 23 ರಂದು ದೆಹಲಿ ಗೆಜೆಟ್‌ನಲ್ಲಿ ತಿಳಿಸಲಾಗಿದೆ.ಈಗ, ಅವರು ಅದೇ ಕಾಯಿದೆಯ ಪ್ರತಿಗಳನ್ನು ದೆಹಲಿ ಅಸೆಂಬ್ಲಿಯಲ್ಲಿ ಹರಿದು ಹಾಕುತ್ತಿದ್ದಾರೆ.ಇದು ಅವಕಾಶವಾದಿ ರಾಜಕಾರಣವಾಗಿರುತ್ತದೆ. ದೆಹಲಿ ಸಿಎಂ ಹೊಸ ಊಸರವಳ್ಳಿ ಇದ್ದ ಹಾಗೆ ಅವರು ಬಣ್ಣಗಳಿಲ್ಲದೆ ಬಣ್ಣಗಳನ್ನು ಬದಲಾಯಿಸಬಹುದು'ಎಂದು ಕಿಡಿ ಕಾರಿದರು.


ವಿವಾದಾತ್ಮಕ ಶಾಸನವನ್ನು ವಿರೋಧಿಸಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ದೆಹಲಿ ವಿಧಾನಸಭೆಯ ಏಕದಿನ ಅಧಿವೇಶನದಲ್ಲಿ ಗುರುವಾರ ಮೂರು ಕೃಷಿ ಕಾನೂನುಗಳ ಪ್ರತಿಗಳನ್ನು ಹರಿದು ಹಾಕಿದ್ದರು.