ಶಿವಮೊಗ್ಗ: ಹೋಟೆಲ್‌ನಲ್ಲಿ (Hotel) ಕಂಠಪೂರ್ತಿ ಕುಡಿದು, ಹೊಟ್ಟೆ ತುಂಬಾ ತಿಂದು ತೇಗಿದ ನಾಲ್ಕು ಮಂದಿ ಯುವಕರ ಗುಂಪು, ಬಿಲ್ ಕೇಳಿದಾಗ ಅಡುಗೆ ಭಟ್ಟನ ಮೇಲೆ  ಕಾದ ಬಾಣಲೆಯಲ್ಲಿದ್ದ ಎಣ್ಣೆ ಸುರಿದು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಭದ್ರಾವತಿಯ (Bhadravathi) ನ್ಯೂಟೌನ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ:‘ದಿ ಕಾಶ್ಮೀರ್ ಫೈಲ್ಸ್’ ಭಾರತದಲ್ಲಿ ಪ್ರದರ್ಶಿಸದೆ ಪಾಕಿಸ್ತಾನದಲ್ಲಿ ತೋರಿಸಬೇಕೇ?: ಬಿಜೆಪಿ


ಭದ್ರಾವತಿಯ ಜನ್ನಾಪುರದ ಕಮರ್ಷಿಯಲ್ ಸ್ಟ್ರೀಟ್ ನಲ್ಲಿರುವ ಮಿಲ್ಟ್ರಿ ಹೋಟೆಲ್ ನಲ್ಲಿ (Miltry Hotel) ನಾಲ್ವರು ಯುವಕರು ಚೆನ್ನಾಗಿ ಕುಡಿದು, ಊಟ ಮಾಡಿದ್ದಾರೆ. ಸಹಜವಾಗಿ ಹೋಟೆಲ್ ಸಿಬ್ಬಂದಿ ಊಟದ ನಂತರ ಯುವಕರನ್ನ ಬಿಲ್ ಕಟ್ಟಲು ಹೇಳಿದ್ದಾರೆ. ಅಷ್ಟಕ್ಕೆ ಕೊಪಗೊಂಡ ಯುವಕರ ಗುಂಪು, ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಗಲಾಟೆ ಬಿಡಿಸಲು ಬಂದ ಹೋಟೆಲ್ ಮಾಲೀಕ ಲೋಹಿತ್ ಕುಮಾರ್ ಮೇಲೂ ಯುವಕರು ಹಲ್ಲೆ (Attack) ನಡೆಸಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಯುವಕರ ಗೊಂಪು ಕುಡಿದ ಮತ್ತಲ್ಲಿ ಅಡುಗೆ ಭಟ್ಟನ ಮುಖಕ್ಕೆ ಬಾಣಲೆಯಲ್ಲದ್ದ ಕಾದ ಎಣ್ಣೆ ಎರಚಿದ್ದಾರೆ ಎನ್ನಲಾಗಿದೆ.


ಇದನ್ನೂ ಓದಿ: Bank Loan: ಸಾಲ ಪಡೆಯುವ ನಿಯಮಗಳನ್ನು ಬದಲಾಯಿಸಿದ RBI ! ಗ್ರಾಹಕರಿಗೆ ನೇರ ಲಾಭ


ಹೋಟೆಲ್ ಮಾಲೀಕ ಹಾಗೂ ಸಿಬ್ಬಂದಿ ಮೇಲೆ ಯುವಕರು ಹಲ್ಲೆ ಮಾಡುತ್ತಿರುವುದನ್ನು ಗಮನಿಸಿದ ಅಡುಗೆ ಭಟ್ಟ ಮನೋಜ್ ಕುಮಾರ್ ಜಗಳ ಬಿಡಿಸಲು ಮುಂದಾಗಿದ್ದಾನೆ. ಆದ್ರೆ, ಯುವಕರ ಗುಂಪು ಮನೋಜ್ ಕುಮಾರ್ ಮೇಲೆಯೇ ಬಾಣಲೆಯಲ್ಲಿದ್ದ ಕಾದ ಎಣ್ಣೆಯನ್ನು (Cooking Oil) ಸುರಿದ್ದಾರೆ. ಪರಿಣಾಮ ಮನೋಜ್ ಕಣ್ಣು ಹಾಗೂ ಮುಖಕ್ಕೆ ಗಂಭೀರ ಸುಟ್ಟ ಗಾಯಗಳಾಗಿವೆ. ಮನೋಜ್ ಕುಮಾರ್ ನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗಲಾಟೆ ನಂತರ ಹೋಟೆಲ್ ನಿಂದ ಹೊರಬಂದ ಯುವಕರು ಹೋಟೆಲ್ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್ (Video Viral) ಆಗಿದೆ. ಭದ್ರಾವತಿ ನ್ಯೂಟೌನ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.