‘ದಿ ಕಾಶ್ಮೀರ್ ಫೈಲ್ಸ್’ ಭಾರತದಲ್ಲಿ ಪ್ರದರ್ಶಿಸದೆ ಪಾಕಿಸ್ತಾನದಲ್ಲಿ ತೋರಿಸಬೇಕೇ?: ಕಾಂಗ್ರೆಸ್​ಗೆ ಬಿಜೆಪಿ ಪ್ರಶ್ನೆ

'ಹಿಜಾಬ್ ಮುಸ್ಲಿಮರ ಮೂಲಭೂತ ಹಕ್ಕು ಎಂದು ಪ್ರತಿಪಾದಿಸುವ ಸಿದ್ದರಾಮಯ್ಯನವರೇ ಕಾಶ್ಮೀರ, ಕಾಶ್ಮೀರಿ ಪಂಡಿತರ ಹಕ್ಕು ಎಂಬುದು ಯಾವಾಗ ಪ್ರತಿಪಾದಿಸುತ್ತೀರಿ?'

Written by - Zee Kannada News Desk | Last Updated : Mar 15, 2022, 04:58 PM IST
  • ‘ದಿ ಕಾಶ್ಮೀರ್ ಫೈಲ್ಸ್‌’ ಪ್ರತಿಯೊಬ್ಬ ಭಾರತೀಯನೂ ನೋಡಲೇಬೇಕಾದ ಸಿನಿಮಾ
  • ಕಾಂಗ್ರೆಸ್‌ ಈ ಸಿನಿಮಾಕ್ಕೆ ತೀವ್ರವಾದ ವಿರೋಧ ವ್ಯಕ್ತಪಡಿಸುತ್ತಿರುವುದೇಕೆ..?
  • ಕಾಂಗ್ರೆಸ್‌ ಪ್ರತ್ಯೇಕತಾವಾದಿಗಳ ಪರವೋ ಅಥವಾ ದೇಶದ ಪರವೋ ಎಂದು ಬಿಜೆಪಿ ಪ್ರಶ್ನೆ
‘ದಿ ಕಾಶ್ಮೀರ್ ಫೈಲ್ಸ್’ ಭಾರತದಲ್ಲಿ ಪ್ರದರ್ಶಿಸದೆ ಪಾಕಿಸ್ತಾನದಲ್ಲಿ ತೋರಿಸಬೇಕೇ?: ಕಾಂಗ್ರೆಸ್​ಗೆ ಬಿಜೆಪಿ ಪ್ರಶ್ನೆ title=
ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಟೀಕಾಪ್ರಹಾರ

ಬೆಂಗಳೂರು: ‘ದಿ ಕಾಶ್ಮೀರ್ ಫೈಲ್ಸ್‌’ ಸಿನಿಮಾ(​The Kashmir Files Film)ವನ್ನು ಭಾರತದಲ್ಲಿ ಪ್ರದರ್ಶಿಸದೆ ಪಾಕಿಸ್ತಾನದಲ್ಲಿ ತೋರಿಸಬೇಕೇ? ಎಂದು ಕಾಂಗ್ರೆಸ್ ಗೆ ಬಿಜೆಪಿ ಪ್ರಶ್ನಿಸಿದೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಪ್ರತಿಯೊಬ್ಬ ಭಾರತೀಯನು ನೋಡಲೇಬೇಕಾದ ಸಿನಿಮಾ ಇದು. ಕಾಂಗ್ರೆಸ್‌ ಈ ಸಿನಿಮಾಕ್ಕೆ ತೀವ್ರವಾದ ವಿರೋಧ ವ್ಯಕ್ತಪಡಿಸುತ್ತಿರುವುದೇಕೆ? ಕಾಂಗ್ರೆಸ್‌ ಪ್ರತ್ಯೇಕತಾವಾದಿಗಳ ಪರವೋ, ದೇಶದ ಪರವೋ?’ ಅಂತಾ ಪ್ರಶ್ನಿಸಿದೆ.

‘ಹಿಜಾಬ್ ಮುಸ್ಲಿಮರ ಮೂಲಭೂತ ಹಕ್ಕು ಎಂದು ಪ್ರತಿಪಾದಿಸುವ ಸಿದ್ದರಾಮಯ್ಯ(Siddaramaiah)ನವರೇ ಕಾಶ್ಮೀರ, ಕಾಶ್ಮೀರಿ ಪಂಡಿತರ ಹಕ್ಕು ಎಂಬುದು ಯಾವಾಗ ಪ್ರತಿಪಾದಿಸುತ್ತೀರಿ? #TheKashmirFiles ಚಿತ್ರ ವೀಕ್ಷಣೆ ನಿರಾಕರಿಸಿರುವ ನೀವು, ಯಾರ ಪರವಾಗಿ ಫೈಲ್ ಬಿಲ್ಡ್ ಮಾಡುತ್ತಿದ್ದೀರಿ?’ ಅಂತಾ ಪ್ರಶ್ನಿಸಿದೆ.

ಇದನ್ನೂ ಓದಿ: Hijab verdict: ‘ಹಿಜಾಬ್ ಒಳಗಿರುವ ಮತ ಗಟ್ಟಿಗೊಳಿಸಲು ಯತ್ನಿಸಿದ ಸಿದ್ದರಾಮಯ್ಯಗೆ ಹಿನ್ನಡೆ’

‘ಸಿದ್ದರಾಮಯ್ಯನವರೇ ನೀವು #TheKashmirFiles ಸಿನಿಮಾ(The Kashmir Files Cinema) ವೀಕ್ಷಣೆ ಮಾಡುವುದಿಲ್ಲವೆಂದು ಹೇಳಿದ್ದೇಕೆ? ನೀವು ಪೋಷಿಸಿಕೊಂಡು ಬಂದ ಜಿಹಾದಿ ಪ್ರತಿಪಾದಕರು ಈ ದೇಶದಲ್ಲಿ ನಡೆಸಿದ ನರಮೇಧವನ್ನು ನೋಡಲು ಅಂಜಿಕೆಯೇ? ಅಥವಾ ಸತ್ಯದರ್ಶನ ಮಾಡಲಾಗದ ಪಲಾಯನವಾದವೋ? ಹಿಂದೂಗಳ ಭಾವನೆಗೆ ಧಕ್ಕೆಯುಂಟು ಮಾಡುವುದು ಮಾತ್ರ ಸಿದ್ದರಾಮಯ್ಯನವರು ಪ್ರತಿಪಾದಿಸುವ ಜಾತ್ಯತೀತತೆ. ಸ್ವತಂತ್ರ ಭಾರತದಲ್ಲಿ ನಡೆದ ಹಿಂದೂಗಳ ಮಾರಣಹೋಮದ ಬಗ್ಗೆ ಈ ಸಮಾಜ‌ ಭಂಜಕ ಸಿದ್ಧರಾಮಯ್ಯ ಅವರು ಸದಾ ಮೌನಿ!’ ಅಂತಾ ಬಿಜೆಪಿ ಕುಟುಕಿದೆ.

ಹಿಜಾಬ್ ಮುಸ್ಲಿಮರ ಮೂಲಭೂತ ಹಕ್ಕು ಎಂದು ಪ್ರತಿಪಾದಿಸುವ @siddaramaiah ಅವರೇ,

ಕಾಶ್ಮೀರ, ಕಾಶ್ಮೀರಿ ಪಂಡಿತರ ಹಕ್ಕು ಎಂಬುದು ಯಾವಾಗ ಪ್ರತಿಪಾದಿಸುತ್ತೀರಿ?#TheKashmirFiles ಚಿತ್ರ ವೀಕ್ಷಣೆ ನಿರಾಕರಿಸಿರುವ ನೀವು, ಯಾರ ಪರವಾಗಿ ಫೈಲ್ ಬಿಲ್ಡ್ ಮಾಡುತ್ತಿದ್ದೀರಿ?

— BJP Karnataka (@BJP4Karnataka) March 15, 2022

p>

‘ಸಿದ್ದರಾಮಯ್ಯನವರೇ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ(Chamundeshwari Vidhana Sabha constituency)ದಲ್ಲಿ ಕೇವಲ ಒಂದು ಚುನಾವಣೆ ಸೋತದ್ದಕ್ಕೆ ಈಗಲೂ ದುಃಖಿಸುತ್ತೀರಿ. ಆದರೆ ಕಣ್ಣೆದುರೇ ಬಂಧು-ಬಾಂಧವರನ್ನು ಕಳೆದುಕೊಂಡು, ಜನ್ಮಭೂಮಿಯನ್ನು ತೊರೆದ ಕಾಶ್ಮೀರಿಗಳ ಸಂಕಟ ನಿಮಗೆ ಅರ್ಥವಾಗದಿರುವುದು ವಿಪರ್ಯಾಸ. ಇಲ್ಲೂ ನಿಮ್ಮದು ಓಟಿನ ಲೆಕ್ಕಾಚಾರವೇ!!?’ ಅಂತಾ ಬಿಜೆಪಿ ಪ್ರಶ್ನಿಸಿದೆ.

ಇದನ್ನೂ ಓದಿ: Hijab Row: ಶಾಲಾ-ಕಾಲೇಜುಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಡಿಕೆಶಿ ಮನವಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News