ಕೊಪ್ಪಳ: ಸಿದ್ದರಾಮಯ್ಯ ಎರಡು ತಲೆ ಹಾವು ಇದ್ದಂತೆ ಎಂದು ಸಾರಿಗೆ ಸಚಿವ ಶ್ರೀರಾಮುಲು ಕಿಡಿಕಾರಿದ್ದಾರೆ. ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ‌ ಪಂಪಾ ಸರೋವರದಲ್ಲಿ ಗುರುವಾರ ಮಾತನಾಡಿರುವ ಅವರು, ‘ಸಿದ್ದರಾಮಯ್ಯನವರು ನಮ್ಮ ನಾಯಕರನ್ನು ಏನೇನಕ್ಕೂ ಹೋಲಿಕೆ ಮಾಡುತ್ತಿದ್ದಾರೆ. ನಾವೆಲ್ಲ ಅವರನ್ನು ಎರಡು ತಲೆ ಹಾವು ಎಂದು ಕರೆಯಬೇಕಾಗುತ್ತೆ. ಯಾಕಂದ್ರೆ ಸಿದ್ದರಾಮಯ್ಯರ ನಾಲಿಗೆ ಸೀಳು ನಾಲಿಗೆ‌’ ಎಂದು ಏಕವಚನದಲ್ಲಿಯೇ  ಶ್ರೀರಾಮುಲು ವಾಗ್ದಾಳಿ ನಡೆಸಿದ್ದಾರೆ.


COMMERCIAL BREAK
SCROLL TO CONTINUE READING

‘ಸಿದ್ದರಾಮಯ್ಯ ಬೆಳಗ್ಗೆ ಒಂದು ಮಾತಾಡ್ತಾನೆ, ಸಂಜೆ ಒಂದು ಮಾತಾಡ್ತಾನೆ. ಅವರ ಪಾರ್ಟಿಯಲ್ಲೇ ಅವರ ಮಾತಿಗೆ ಕಿಮ್ಮತ್ತು ಕೊಡ್ತಿಲ್ಲ. ಸೀಳು ನಾಲಿಗೆ ಇಟಕೊಂಡು ಸಿದ್ದರಾಮಯ್ಯ ಮಾತಾಡ್ತಿದ್ದಾನೆ. ಸೀಳು ನಾಲಿಗೆಯ ಸಿದ್ದರಾಮಯ್ಯ ಪ್ರಧಾನಿ ಮೋದಿ, RSS ವಿರುದ್ದ ಮಾತಾಡ್ತೀದ್ದಾನೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.   


ಇದನ್ನೂ ಓದಿ: 'ಸ್ವಾಮೀಜಿಗಳ ವಿವರವನ್ನು ಒಂದೇ ವಾಕ್ಯಕ್ಕೆ ಸೀಮಿತ ಗೊಳಿಸಿರುವುದು,ಇಡೀ ಕನ್ನಡ ನಾಡಿಗೆ ಬಗೆದ ದ್ರೋಹ'


‘ಸಿದ್ದರಾಮಯ್ಯ ಕಾಂಗ್ರೆಸ್ ಪಾರ್ಟಿಯಲ್ಲಿ ಚೆಸ್ ಆಟ ಆಡ್ತೀದ್ದಾನೆ. ಕೆಪಿಸಿಸಿ ಅಧ್ಯಕ್ಷ ಡಿಕೆಶಿಯನ್ನು ಹೇಗೆ ಮುಗಿಸಬೇಕು ಎಂದು ಚೆಸ್ ಆಟ ಆಡ್ತೀದ್ದಾನೆ. ಸಿದ್ದರಾಮಯ್ಯ ಬೈಯ್ಯೋದು ಒಂದು ಹವ್ಯಾಸ ಮಾಡಿಕೊಂಡಿದ್ದಾನೆ. ಅವನು ಮುಖ್ಯಮಂತ್ರಿ ಆಗೋ ಭ್ರಮೆಯಲ್ಲಿದ್ದಾನೆ. ಸಿದ್ದರಾಮಯ್ಯ ಘನತೆಗೆ ತಕ್ಕಂತೆ ಮಾತಾಡಲಿ’ ಎಂದು ಏಕವಚನದಲ್ಲಿಯೇ ಶ್ರೀರಾಮುಲು ವಾಗ್ದಾಳಿ ನಡೆಸಿದರು.


ಸಿದ್ದರಾಮಯ್ಯ ಇತ್ತೀಚೆಗೆ ಹತಾಶೆಯಿಂದ ಮಾತಾಡ್ತೀದ್ದಾರೆ. ಅವರು ಒಂದು ಪಾರ್ಟಿಯಲ್ಲಿಯೂ ಪ್ರಮಾಣಿಕವಾಗಿಲ್ಲ. ಎಲ್ಲಾ ಮುಗಸಿ ಇದೀಗ ಕಾಂಗ್ರೆಸ್‍ಗೆ ಬಂದಿದ್ದಾರೆ. TRPಗಾಗಿ ಪ್ರಧಾನಿ ಮೋದಿ ಮತ್ತು RSS ಬೈಯ್ಯೋದು ಮಾಡ್ತಾನೆ. ಸುಳ್ಳು ಸಿದ್ದರಾಮಯ್ಯ ಈಗಾಗಲೇ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಎಚ್‍.ಡಿ.ಕುಮಾರಸ್ವಾಮಿಯನ್ನು ಮುಗಿಸಿದ್ದಾನೆ. ಭಸ್ಮಾಸುರನಾಗಿರುವ ಸಿದ್ದರಾಮಯ್ಯ ಯಾರ ಮೇಲೆ ಕೈ ಇಟ್ರೆ ಅವರು ಭಸ್ಮ ಆಗುತ್ತಾರೆ ಎಂದು ರಾಮುಲು ಟೀಕಿಸಿದ್ದಾರೆ.   


ಇದನ್ನೂ ಓದಿ: Rajya Sabha Elections: ಬಿಜೆಪಿ ಸೋಲಿಸಲು JDSಗೆ ಕಾಂಗ್ರೆಸ್ ಬೆಂಬಲಿಸಬೇಕು- ಎಚ್‌ಡಿಕೆ


ಸತ್ಯ ಹರಿಶ್ಚಂದ್ರನ ತರಹ ಮಾತನಾಡುವ ಸಿದ್ದರಾಮಯ್ಯಗೆ ಕ್ಷೇತ್ರವೇ ಸಿಗುತ್ತಿಲ್ಲ. ಅವರ ಮಾತನ್ನು ನಾವೆಲ್ಲ ಒಪ್ಪೋಕೆ ಸಾಧ್ಯ ಇಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ತಿರಸ್ಕಾರ ಆಗಿದ್ದಾರೆ. ರಾಜ್ಯದ ಜನರು ಇನ್ನುಮುಂದೆ ಸಿದ್ದರಾಮಯ್ಯರನ್ನು ತಿರಸ್ಕಾರ‌ ಮಾಡ್ತಾರೆ. ಫಿಲಾಸಫರ್ ತರಹ ಆ್ಯಕ್ಟ್ ಮಾಡ್ತೀರುವ ಸಿದ್ದರಾಮಯ್ಯ  ಬದಾಮಿಯಲ್ಲೂ ವರ್ಚಸ್ಸು ಕಳೆದುಕೊಂಡಿದ್ದಾರೆ ಎಂದು ಕುಟುಕಿದರು.


ಬದಾಮಿಯಲ್ಲಿ ಚಿಮ್ಮನಕಟ್ಟಿ ಮತ್ತು SR ಪಾಟೀಲ್‍ರನ್ನು ಸಿದ್ದರಾಮಯ್ಯ ಮುಗಿಸಿದ್ದಾನೆ. ಎಲ್ಲಿಲ್ಲಿ ಹೋಗ್ತಾನೋ ಅಲ್ಲೆಲ್ಲ ಮುಗಿಸುವ ಕೆಲಸವನ್ನೇ ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಕಾಂಗ್ರೆಸ್‍ಗೆ ಹೋದ ಬಳಿಕ ಮಲ್ಲಿಕಾರ್ಜುನ್ ಖರ್ಗೆ, ಡಾ.ಜಿ.ಪರಮೇಶ್ವರನ್ನು ಸಿದ್ದರಾಮಯ್ಯ ಮುಗಿಸಿದ. ಇದೀಗ ಡಿ.ಕೆ.ಶಿವಕುಮಾರ್‍ನನ್ನು ಮುಗಿಸಲು ಹೊಂಚುಹಾಕಿದ್ದಾನೆಂದು ರಾಮುಲು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.